Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!
ಶ್ರೀರಾಮ್ ನಾಯಕ್, Sep 6, 2024, 5:30 PM IST
ದಿನಾ ಮನೆಯಲ್ಲಿ ಸಂಜೆಯ ವೇಳೆ ಅಥವಾ ರಜಾ ದಿನಗಳಲ್ಲಿ ಒಂದೇ ತರಹದ ತಿಂಡಿ ಮಾಡಿ ಮಾಡಿ ಬೇಜಾರಾಗಿದ್ಯಾ ಹಾಗಿದ್ದರೆ ನಾವು ನಿಮಗೊಂದು ಹೊಸ ಬಗೆಯ ತಿಂಡಿ (ಸ್ನಾಕ್ಸ್) ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ.
ಪೈನಾಪಲ್ ನೋಡಲು ಮುಳ್ಳು ಮುಳ್ಳಾಗಿದ್ದರೂ, ತಿನ್ನಲು ಬಲು ರುಚಿಯಾದ ಹಣ್ಣು. ತಿನ್ನಲಷ್ಟೇ ಅಲ್ಲ, ಸಿಹಿತಿಂಡಿಗಳ ತಯಾರಿಕೆಯಲ್ಲೂ ಪೈನಾಪಲ್ ಅನ್ನು ಬಳಸುತ್ತಾರೆ. ಉದಾಃ ಜ್ಯೂಸ್, ಸಲಾಡ್, ಕೇಸರಿ ಬಾತ್, ಐಸ್ಕ್ರೀಮ್ ಹೀಗೆ ನಾನಾ ರುಚಿಯ ತಿಂಡಿ ತಿನಿಸುಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ಬಿ, ಸಿ, ಪೊಟಾಷ್ಯಿಯಂ, ಹಾಗೂ ದೇಹಕ್ಕೆ ಅಗತ್ಯವಾದ ಇತರ ಖನಿಜಾಂಶಗಳಿದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದಾಗಿದೆ .
ನಾವಿಂದು ಪೈನಾಪಲ್ ಬಾರ್ಬೆಕ್ಯೂ ಹೇಗೆ ಮಾಡುವುದೆಂದು ಸುಲಭ ರೀತಿಯಲ್ಲಿ ಹೇಳಿಕೊಡುತ್ತೇವೆ. ನೀವೂ ಸಹ ಈ ರೆಸಿಪಿಯನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ಸ್ವಾದಿಷ್ಟವಾಗಿ ಸವಿಯಿರಿ.
ಪೈನಾಪಲ್ ಬಾರ್ಬೆಕ್ಯೂ
ಬೇಕಾಗುವ ಸಾಮಗ್ರಿಗಳು
ಪೈನಾಪಲ್-1,ದಾಲ್ಚಿನ್ನಿ ಪುಡಿ-1ಟೀಸ್ಪೂನ್, ಜೀರಿಗೆ ಪುಡಿ-ಅರ್ಧ ಚಮಚ,ಮೆಣಸಿನ ಪುಡಿ-2ಚಮಚ,ಪೇಪ್ಪರ್ ಪುಡಿ-1ಚಮಚ,ಚಾಟ್ ಮಸಾಲ-2ಚಮಚ, ಲಿಂಬೆ ರಸ-1ಚಮಚ, ಜೇನು ತುಪ್ಪ-1ಚಮಚ, ಸಕ್ಕರೆ-1ಚಮಚ,ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಒಂದು ಪೈನಾಪನ್ ಹಣ್ಣನ್ನು ಚೆನ್ನಾಗಿ ತೊಳೆದು ಬಳಿಕ ಸಿಪ್ಪೆ ಸುಲಿದು ನಿಮಗೆ ಬೇಕಾದ ಆಕಾರದಲ್ಲಿ ಕಟ್ ಮಾಡಿಕೊಳ್ಳಿ. ನಂತರ ಒಂದು ಬೌಲ್ ಗೆ ಮೆಣಸಿನ ಪುಡಿ,ಜೀರಿಗೆ, ,ದಾಲ್ಚಿನ್ನಿ,ಪೇಪ್ಪರ್, ಚಾಟ್ ಮಸಾಲ, ಜೇನು ತುಪ್ಪ, ಸಕ್ಕರೆ, ಲಿಂಬೆರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತದನಂತರ ಕಟ್ ಮಾಡಿಟ್ಟ ಪೈನಾಪಲ್ ಹಣ್ಣನ್ನು ಹಾಕಿ ಸುಮಾರು 15 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಬಾರ್ಬೆಕ್ಯೂ ಮಾಡುವ ಕಡ್ಡಿಯಲ್ಲಿ ಜೋಡಿಸಿಕೊಂಡು ಲೋ ಫ್ಲೇಮಿ(ಮಂದ ಬೆಂಕಿ)ನಲ್ಲಿ ತವದಲ್ಲಿ ಬೇಯಿಸಿದರೆ ಪೈನಾಪಲ್ ಬಾರ್ಬೆಕ್ಯೂ ಟೊಮೆಟೋ ಸಾಸ್ ಜೊತೆಯಲ್ಲಿ ತಿನ್ನಲು ಬಹಳ ರುಚಿ.
-ಶ್ರೀರಾಮ್ ಜಿ .ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ
Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್ ಪ್ಯಾಕ್; ಇದರ ಲಾಭವೇನು ಗೊತ್ತಾ?
South Indian actors: ನಾಗಾರ್ಜುನ್ ಟು ವಿಜಯ್; ದಕ್ಷಿಣ ಭಾರತದ ಶ್ರೀಮಂತ ನಟರು ಯಾರ್ಯಾರು
Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ
Olympics Vs Para; ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಹೆಚ್ಚು ಯಶಸ್ಸು ಸಿಕ್ಕಿದ್ಹೇಗೆ?
MUST WATCH
ಹೊಸ ಸೇರ್ಪಡೆ
Kiccha Sudeep: ʼಸೈಮಾʼ ಕಾರ್ಯಕ್ರಮದಲ್ಲಿ ನಿರೂಪಕನಿಗೆ ʼಕನ್ನಡʼ ಪಾಠ ಮಾಡಿದ ಕಿಚ್ಚ
ಇನ್ನು ಹತ್ತು ವರ್ಷಗಳಲ್ಲಿ ದಾವಣಗೆರೆ ಐಎಎಸ್ ಹಬ್- ಜಿ.ಬಿ. ವಿನಯ್ ಕುಮಾರ್
Kolkata: ಟ್ರೈನಿ ವೈದ್ಯೆ ಅತ್ಯಾಚಾರ – ಹತ್ಯೆ ಪ್ರಕರಣ: ಮಹತ್ವದ ಮಾಹಿತಿ ನೀಡಿದ ಸಿಬಿಐ
Sandalwood: ದೆವ್ವ ಹುಡುಕಿ ಹೊರಟ ʼಮಾಂತ್ರಿಕʼ
Shiv sena:ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ: ಶಿವಸೇನಾ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.