Beauty Tips: ನೈಸರ್ಗಿಕವಾಗಿ ಗುಲಾಬಿ ಬಣ್ಣದ ತುಟಿ ನಿಮ್ಮದಾಗಲು ಈ ಟಿಪ್ಸ್‌ ಬಳಸಿ

ಜೇನುತುಪ್ಪ ತುಟಿಗಳಿಗೆ ತೇವಾಂಶ ನೀಡುತ್ತದೆ....

ಕಾವ್ಯಶ್ರೀ, Oct 15, 2024, 6:06 PM IST

5-lips-4

ಗುಲಾಬಿ ಬಣ್ಣದ ತುಟಿಗಳು ಮುಖದ ಅಂದ ಹೆಚ್ಚಿಸುತ್ತವೆ. ಗುಲಾಬಿ ಬಣ್ಣದ ತುಟಿಗಳನ್ನು ಹೊಂದಿರಬೇಕು ಎಂಬುದು ಅನೇಕ ಹೆಣ್ಣುಮಕ್ಕಳ ಬಯಕೆಯಾಗಿರುತ್ತದೆ. ಗುಲಾಬಿ ಬಣ್ಣದ ತುಟಿಗಳು ಮುಖದ ಅಂದ ಹೆಚ್ಚಿಸುವುದಲ್ಲದೆ ಉತ್ತಮ ಆರೋಗ್ಯವನ್ನು ಕೂಡಾ ಸೂಚಿಸುತ್ತವೆ.

ತುಟಿಗಳು ಅನೇಕ ಬಣ್ಣಗಳು, ಗಾತ್ರಗಳು ಮತ್ತು ಆಕಾರಗಳಲ್ಲಿ ಬರುತ್ತವೆ. ತುಟಿಗಳು ಆರೋಗ್ಯಕರವಾಗಿದ್ದರೆ ತುಟಿಗಳ ಬಣ್ಣ ಗುಲಾಬಿ ಬಣ್ಣದಲ್ಲಿರುತ್ತದೆ. ತುಟಿಗಳಿಗೆ ಲಿಪ್ಸ್ಟಿಕ್ ಹೆಚ್ಚಾಗಿ ಹಚ್ಚುವುದರಿಂದ ಅದರಲ್ಲಿರುವ ರಾಸಾಯನಿಕಗಳು ತುಟಿಗಳ ಚರ್ಮಕ್ಕೆ ಹಾನಿ ಮಾಡಿ ತುಟಿ ಕಪ್ಪಾಗುವಂತೆ ಮಾಡುತ್ತವೆ. ಹಾಗಾಗಿ ತುಟಿಗಳ ಬಗ್ಗೆ ಕಾಳಜಿವಹಿಸುವುದು ಅಗತ್ಯ.

ಮಾರುಕಟ್ಟೆಯಲ್ಲಿ ವಿವಿಧ ತುಟಿ ಆರೈಕೆ ಉತ್ಪನ್ನಗಳು ಲಭ್ಯವಿದ್ದರೂ, ನೈಸರ್ಗಿಕವಾಗಿ ಗುಲಾಬಿ ತುಟಿಗಳನ್ನು ಹೊಂದಲು ಬಯಸುವುದು ಆರೋಗ್ಯಕರ ಮಾರ್ಗವಾಗಿದೆ. ನೀವು ರಾಸಾಯನಿಕ ಉತ್ಪನ್ನಗಳ ಮೊರೆ ಹೋಗದೆ ಮೃದುವಾದ, ಗುಲಾಬಿ ತುಟಿಗಳನ್ನು ಪಡೆಯಲು ಈ ಟಿಪ್ಸ್‌ ಗಳನ್ನು ಅನುಸರಿಸಿ.

ತೆಂಗಿನ ಎಣ್ಣೆ ಮತ್ತು ಸಕ್ಕರೆ- ಲಿಪ್ ಸ್ಕ್ರಬ್

ಒಂದು ತಟ್ಟೆಯಲ್ಲಿ ಒಂದು ಚಮಚ ಕಂದು ಸಕ್ಕರೆ (ಬ್ರೌನ್‌ ಶುಗರ್) ಮತ್ತು ಒಂದು ಚಮಚ ತೆಂಗಿನ ಎಣ್ಣೆ ತೆಗೆದುಕೊಳ್ಳಿ. ಅವುಗಳನ್ನು ಮಿಶ್ರಣ ಮಾಡಿ ತುಟಿಗಳಿಗೆ ಸ್ಕ್ರಬ್ ಹಚ್ಚಿ ಕೆಲ ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ.

ಅಲೋವೆರಾ ಜೆಲ್ ಮತ್ತು ತೆಂಗಿನ ಎಣ್ಣೆ

ಒಂದು ಚಮಚ ಅಲೋವೆರಾ ಜೆಲ್ ತೆಗೆದುಕೊಂಡು ಅದಕ್ಕೆ ಕೆಲ ಹನಿ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಆ ಮುಶ್ರಣವನ್ನು ತುಟಿಗಳ ಮೇಲೆ ಲಿಪ್ ಬಾಮ್ ನಂತೆ ಹಚ್ಚಿಕೊಳ್ಳಿ ದಿನಕ್ಕೆ 2-3 ಬಾರಿ ಬಳಸಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ.

ಸಕ್ಕರೆ ಸ್ಕ್ರಬ್‌:

ಸಕ್ಕರೆ ಸ್ಕ್ರಬ್‌ನೊಂದಿಗೆ ನಿಮ್ಮ ತುಟಿಗಳನ್ನು ಎಕ್ಸ್‌ಫೋಲಿಯೇಟ್ ಮಾಡುವುದರಿಂದ ಸತ್ತ ಚರ್ಮದ ಕೋಶಗಳನ್ನು ನಿವಾರಿಸುತ್ತದೆ. ಸಕ್ಕರೆ ಸ್ಕ್ರಬ್ ಮಾಡಲು, ಸಕ್ಕರೆ ಮತ್ತು ಜೇನುತುಪ್ಪವನ್ನು ಸಮಾನ ಭಾಗಗಳಲ್ಲಿ ಸೇರಿಸಿ. ನಿಮ್ಮ ತುಟಿಗಳಿಗೆ ಸ್ಕ್ರಬ್ ಅನ್ನು ಅನ್ವಯಿಸಿ ಮತ್ತು ಕೆಲವು ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಸ್ಕ್ರಬ್‌ನ ಸಕ್ಕರೆ ಹರಳುಗಳು ನಿಮ್ಮ ತುಟಿಗಳಿಂದ ಸತ್ತ ಚರ್ಮದ ಕೋಶಗಳನ್ನು ನಿಧಾನವಾಗಿ ಹೊರಹಾಕುತ್ತದೆ, ಆದರೆ ಜೇನುತುಪ್ಪವು ಅವುಗಳನ್ನು ತೇವಗೊಳಿಸುತ್ತದೆ ಮತ್ತು ಪೋಷಿಸುತ್ತದೆ.

ಬಾದಾಮಿ ಎಣ್ಣೆ- ಜೇನುತುಪ್ಪ, ಸಕ್ಕರೆ ಸ್ಕ್ರಬ್

ಒಂದು ಚಮಚ ಬಾದಾಮಿ ಎಣ್ಣೆ ಮತ್ತು ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ಸಕ್ಕರೆಯ ಮಿಶ್ರಣದಿಂದ ತುಟಿಯ ಚರ್ಮ ಸ್ಕ್ರಬ್ ಮಾಡಿ. ತುಟಿಗಳ ಮೇಲಿನ ಚರ್ಮ ತುಂಬಾ ಸೂಕ್ಷ್ಮ ಆಗಿರುವುದರಿಂದ ನಿಧಾನವಾಗಿ ಸ್ಕ್ರಬ್ ಮಾಡಬೇಕು. ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ ತುಟಿಗಳಿಗೆ ತೇವಾಂಶ ನೀಡುತ್ತದೆ. ಸಕ್ಕರೆಯು ಸತ್ತ ಚರ್ಮ ತೆಗೆದುಹಾಕುತ್ತದೆ. ಈ ಸ್ಕ್ರಬ್‌ ನಿಯಮಿತವಾಗಿ ಮಾಡುತ್ತಿದ್ದರೆ ಕ್ರಮೇಣ ಕಪ್ಪಾದ ತುಟಿಗಳು ಶಾಶ್ವತವಾಗಿ ಗುಲಾಬಿ ಬಣ್ಣದ ತುಟಿಗಳಾಗಿ ಬದಲಾಗುತ್ತದೆ.

ಗುಲಾಬಿ ದಳ

ಕಪ್ಪು ತುಟಿಗಳನ್ನು ಗುಲಾಬಿ ಬಣ್ಣಕ್ಕೆ ತಿರುಗಿಸಲು ಗುಲಾಬಿ ದಳಗಳನ್ನು ಕೂಡಾ ಬಳಸಬಹುದು. ತುಟಿಗಳ ಮೇಲೆ ನೈಸರ್ಗಿಕ ಗುಲಾಬಿ ಬಣ್ಣ ಬರಲು ಗುಲಾಬಿ ದಳ ಸಹಾಯ ಮಾಡುತ್ತದೆ.  ಸ್ವಲ್ಪ ಗುಲಾಬಿ ದಳಗಳನ್ನು ಕರಗಿಸುವವರೆಗೆ ಕುದಿಸಬೇಕು. ಇದಕ್ಕೆ ಸ್ವಲ್ಪ ರೋಸ್ ವಾಟರ್ ಕೂಡ ಸೇರಿಸಬಹುದು. ಇದನ್ನು ತಣ್ಣಗಾಗಲು ಬಿಡಿ. ಇದನ್ನು ರಾತ್ರಿ ಮಲಗುವ ಮುಂಚೆ ತುಟಿಗಳಿಗೆ ಹಚ್ಚಿಕೊಳ್ಳಿ. ಆದಷ್ಟು ಬೇಗನೆ ಫಲಿತಾಂಶ ಪಡೆಯಲು ಈ ವಿಧಾನವನ್ನು ದೀರ್ಘಕಾಲದವರೆಗೆ ಮಾಡುತ್ತಾ ಬರಬೇಕು.

ನಿಂಬೆ ಮತ್ತು ಜೇನುತುಪ್ಪ

ನಿಂಬೆಹಣ್ಣಿನಂತಹ ಸಿಟ್ರಸ್ ಹಣ್ಣುಗಳು ಚರ್ಮವನ್ನು ಹಗುರಗೊಳಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಜೇನುತುಪ್ಪದೊಂದಿಗೆ ನಿಂಬೆಹಣ್ಣುಗಳನ್ನು ಸೇರಿಸಿದಾಗ ತುಟಿಗಳನ್ನು ಹಗುರಗೊಳಿಸುವುದು ಮಾತ್ರವಲ್ಲದೆ ಅವುಗಳನ್ನು ಮೃದುಗೊಳಿಸಲು, ಪುನರುಜ್ಜೀವನಗೊಳಿಸಲು ಮತ್ತು ಪುನರ್‌ ಯೌವನಗೊಳಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಒಂದು ಚಮಚ ನಿಂಬೆ ರಸ ಮತ್ತು ಜೇನುತುಪ್ಪವನ್ನು ತೆಗೆದುಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ತುಟಿಗಳಿಗೆ ಹಚ್ಚಿ. ಇದನ್ನು 15-20 ನಿಮಿಷಗಳ ಕಾಲ ಹಾಗೆ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ. ದಿನಕ್ಕೆ ಒಮ್ಮೆ ಹೀಗೆ ಮಾಡಿದರೆ ಗುಲಾಬಿ ಬಣ್ಣದ ತುಟಿ ನಿಮ್ಮದಾಗಬಹುದು.

ಬೀಟ್ರೂಟ್:

ಬೀಟ್ರೂಟ್ ನೈಸರ್ಗಿಕ ಪಿಗ್ಮೆಂಟೇಶನ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಅದು ತುಟಿಗಳಿಗೆ ಗುಲಾಬಿ ಬಣ್ಣವನ್ನು ನೀಡುತ್ತದೆ. ಬೀಟ್ರೂಟ್ ರಸವನ್ನು ನೇರವಾಗಿ ನಿಮ್ಮ ತುಟಿಗಳಿಗೆ ಹಚ್ಚಬಹುದು ಅಥವಾ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ತುಟಿಗೆ ಹಚ್ಚಬಹುದು.

ಅಲೋವೆರಾ- ಜೇನುತುಪ್ಪ

ಒಂದು ಚಮಚ ಅಲೋವೆರಾ ಜೆಲ್ ಗೆ ಜೇನುತುಪ್ಪ ಮಿಶ್ರಣ ಮಾಡಿ. ಅದನ್ನು ನಿಮ್ಮ ತುಟಿಗಳಿಗೆ ಹಚ್ಚಿ. ತ್ವರಿತ ಫಲಿತಾಂಶಗಳನ್ನು ಪಡೆಯಲು ಆ ಮಿಶ್ರಣವನ್ನು 15 ನಿಮಿಷಗಳ ಕಾಲ ಹಾಗೆ ಬಿಡಿ, ಬಳಿಕ ನೀರಿನಿಂದ ತೊಳೆಯಿರಿ. ಅಲೋವೆರಾ ಮತ್ತು ಜೇನು ಎರಡೂ ತುಟಿಗಳಿಗೆ ಹೈಡ್ರೇಶನ್‌ ಗೆ ಸಹಾಯ ಮಾಡುತ್ತದೆ. ಹೀಗಾಗಿ ಮೃದು ಮತ್ತು ಗುಲಾಬಿ ಬಣ್ಣದ ತುಟಿ ಪಡೆಯಲು ಸಹಾಯ ಮಾಡುತ್ತದೆ.

ಸಾಕಷ್ಟು ನೀರು ಕುಡಿಯಿರಿ:

ನಿಮ್ಮ ತುಟಿಗಳ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ತೇವಾಂಶ ಅತ್ಯಗತ್ಯ. ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಬೇಕು. ನೀರು ನಿಮ್ಮ ತುಟಿಗಳನ್ನು ಪೋಷಿಸುತ್ತದೆ ಮತ್ತು ಒಣಗದಂತೆ ತಡೆಯುತ್ತದೆ.

ಆರೋಗ್ಯಕರ ಆಹಾರ:

ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರ ತುಟಿಗಳನ್ನು ತೇವಾಂಶದಿಂದ ಮತ್ತು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ . ಈ ಎಲ್ಲಾ ಊಟಗಳು ಆರೋಗ್ಯಕರ ತುಟಿಗಳಿಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

ಸಾಕಷ್ಟು ನಿದ್ದೆ:

ಸಾಕಷ್ಟು ನಿದ್ರೆ ಮಾಡದೆ ಇದ್ದಾಗ ಒಡೆದ, ಒಣ ತುಟಿಗಳಿಗೆ ಕಾರಣವಾಗಬಹುದು. ಪ್ರತಿರಾತ್ರಿ 7-8 ಗಂಟೆಗಳ ನಿದ್ರೆ ಮಾಡುವುದು ಅಗತ್ಯ.

*ಕಾವ್ಯಶ್ರೀ

ಟಾಪ್ ನ್ಯೂಸ್

10-panaji

Panaji: ದೀಪಾವಳಿಗೆ ಸಿಗಲಿದೆ ಗೋವಾ ಜನರಿಗೆ ಗಿಫ್ಟ್‌

SC-Meet-CM

Valmiki Nigama: ಹಣ ದುರ್ಬಳಕೆಯಾದರೂ ಈ ವರ್ಷದ ಅನುದಾನ ಕೊಡಲು ಸೂಚಿಸಿರುವೆ: ಸಿದ್ದರಾಮಯ್ಯ

Davanagere: ವರದಕ್ಷಿಣೆ ಸಂಬಂಧ ಪತ್ನಿಯ ಸಾವಿಗೆ ಕಾರಣವಾಗಿದ್ದ ಪತಿಗೆ ಕಠಿಣ ಕಾರಾಗೃಹ ಶಿಕ್ಷೆ

Davanagere: ವರದಕ್ಷಿಣೆ ಸಂಬಂಧ ಪತ್ನಿಯ ಸಾವಿಗೆ ಕಾರಣವಾಗಿದ್ದ ಪತಿಗೆ ಕಠಿಣ ಕಾರಾಗೃಹ ಶಿಕ್ಷೆ

Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ

Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ

By-election: ಚನ್ನಪಟ್ಟಣಕ್ಕೆ ಇದು 3ನೇ ಉಪಚುನಾವಣೆ

By-election: ಚನ್ನಪಟ್ಟಣಕ್ಕೆ ಇದು 3ನೇ ಉಪಚುನಾವಣೆ

Bhagamandala: ಕಾಡಾನೆ ದಾಳಿಗೆ ಓರ್ವ ಬಲಿ, ಇಬ್ಬರು ಪಾರು

Bhagamandala: ಕಾಡಾನೆ ದಾಳಿಗೆ ಓರ್ವ ಬಲಿ, ಇಬ್ಬರು ಪಾರು

PAKvsENG: Kamran Ghulam’s century that troubled Babar Azam

PAKvsENG: ಬಾಬರ್‌ ಅಜಂಗೆ ಸಂಕಷ್ಟ ತಂದ ಕಮ್ರಾನ್‌ ಘುಲಾಂ ಶತಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

1

2025ಕ್ಕೆ ಬಾಲಿವುಡ್‌ಗೆ ಸೀಕ್ವೆಲ್‌ಗಳೇ ಜೀವಾಳ.. ಇಲ್ಲಿದೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

1-tata-bg

‘Welcome’: ರತನ್ ಟಾಟಾರಿಗೆ ಒಂದೇ ಒಂದು ಮೆಸೇಜ್ ಮೂಲಕ ಗುಜರಾತ್ ಗೆ ನ್ಯಾನೋ ತಂದಿದ್ದ ಮೋದಿ!

Ratan Tata: ಭಾರತೀಯ ಕ್ರಿಕೆಟ್‌ ಗೆ ರತನ್‌ ಟಾಟಾ ನೀಡಿದ ಕೊಡುಗೆ ಮರೆಯಲು ಅಸಾಧ್ಯ

Ratan Tata: ಭಾರತೀಯ ಕ್ರಿಕೆಟ್‌ ಗೆ ರತನ್‌ ಟಾಟಾ ನೀಡಿದ ಕೊಡುಗೆ ಮರೆಯಲು ಅಸಾಧ್ಯ

Jimmy Tata: ಮೊಬೈಲ್‌ ಬಳಸದೇ 2BHK ಮನೆಯಲ್ಲಿ ವಾಸಿಸುವ ರತನ್‌ ಟಾಟಾ ಸಹೋದರನ ಬಗ್ಗೆ ಗೊತ್ತಾ?

Jimmy Tata:ಮೊಬೈಲ್‌ ಬಳಸದೇ 2BHK ಮನೆಯಲ್ಲಿ ವಾಸಿಸುವ ರತನ್‌ ಟಾಟಾ ಸಹೋದರನ ಬಗ್ಗೆ ಗೊತ್ತಾ?

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Yadagiri: ಸಿಡಿಲು ಬಡಿದು ರೈತ ಸಾವು

Yadagiri: ಸಿಡಿಲು ಬಡಿದು ರೈತ ಸಾವು

10-panaji

Panaji: ದೀಪಾವಳಿಗೆ ಸಿಗಲಿದೆ ಗೋವಾ ಜನರಿಗೆ ಗಿಫ್ಟ್‌

SC-Meet-CM

Valmiki Nigama: ಹಣ ದುರ್ಬಳಕೆಯಾದರೂ ಈ ವರ್ಷದ ಅನುದಾನ ಕೊಡಲು ಸೂಚಿಸಿರುವೆ: ಸಿದ್ದರಾಮಯ್ಯ

Davanagere: ವರದಕ್ಷಿಣೆ ಸಂಬಂಧ ಪತ್ನಿಯ ಸಾವಿಗೆ ಕಾರಣವಾಗಿದ್ದ ಪತಿಗೆ ಕಠಿಣ ಕಾರಾಗೃಹ ಶಿಕ್ಷೆ

Davanagere: ವರದಕ್ಷಿಣೆ ಸಂಬಂಧ ಪತ್ನಿಯ ಸಾವಿಗೆ ಕಾರಣವಾಗಿದ್ದ ಪತಿಗೆ ಕಠಿಣ ಕಾರಾಗೃಹ ಶಿಕ್ಷೆ

9-gangavathi

Anegundi ಸ್ವಚ್ಛ ಗ್ರಾಮಕ್ಕೆ ಸಹಕರಿಸಿ: ಸಿಇಓ ರಾಹುಲ್ ರತ್ನಂ ಪಾಂಡೆ;ಗ್ರಾ.ಪಂ. ಸಾಮಾನ್ಯ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.