![Bahngala](https://www.udayavani.com/wp-content/uploads/2024/08/Bahngala-415x277.jpg)
Kerala Style Recipe ಆಹಾ ಎಂಥಾ ರುಚಿ! ಕೇರಳದ ಪ್ರಸಿದ್ಧ ಖಾದ್ಯ ‘ಏತಕ್ಕ ಅಪ್ಪಂ’
'ಏತಕ್ಕ ಅಪ್ಪಂ' ಸುಲಭವಾಗಿ ತಯಾರಿಸೋದು ಹೇಗೆ...
Team Udayavani, Jul 12, 2024, 5:39 PM IST
![ಆಹಾ ಎಂಥಾ ರುಚಿ! ಕೇರಳದ ಪ್ರಸಿದ್ಧ ಖಾದ್ಯ ‘ಏತಕ್ಕ ಅಪ್ಪಂ’](https://www.udayavani.com/wp-content/uploads/2024/07/Ethakka-Appam-620x372.jpg)
ನೇಂದ್ರ ಬಾಳೆಯನ್ನು ಸಾಮಾನ್ಯವಾಗಿ ಬಾಳೆಹಣ್ಣಿನ ರಾಜ ಎಂದು ಕರೆಯುತ್ತಾರೆ. ಇದು ಭಾರತದ ಕೇರಳದಲ್ಲಿ ಅತ್ಯಂತ ಜನಪ್ರಿಯ ಬಾಳೆಹಣ್ಣಾಗಿದೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ. ಈ ಬಾಳೆ ಹಣ್ಣು ತಿನ್ನುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ಸಹಾಯ ಮಾಡುವುದರ ಜೊತೆಗೆ, ಪೊಟ್ಯಾಷಿಯಂ,ವಿಟಮಿನ್ ಎ,ಬಿ6, ಖನಿಜಾಂಶ ಮತ್ತು ನಾರಿನಾಂಶ ಹೆಚ್ಚು ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.ಈ ಬಾಳೆ ಹಣ್ಣಿನಿಂದ ಹಲವು ಬಗೆಯ ತಿಂಡಿ-ತಿನಿಸುಗಳನ್ನು ಮಾಡುತ್ತಾರೆ. ಉದಾಃ ಚಿಪ್ಸ್, ಜಾಮೂನ್, ಫ್ರೈ, ಪೋಡಿ(ಬಜ್ಜಿ) ಹೀಗೆ ಹತ್ತು ಹಲವು..
ಇಂದು ನಾವು ನಿಮಗಾಗಿ ಕೇರಳದ ಪ್ರಸಿದ್ಧ ಖಾದ್ಯವಾದ ‘ಏತಕ್ಕ ಅಪ್ಪಂ‘ ಹೇಗೆ ತಯಾರಿಸುವುದು ಎಂಬುದನ್ನು ತಿಳಿಸುತ್ತೇವೆ ಬನ್ನಿ…
ಏತಕ್ಕ ಅಪ್ಪಂ
ಬೇಕಾಗುವ ಸಾಮಗ್ರಿಗಳು
ನೇಂದ್ರ ಬಾಳೆಹಣ್ಣು-4, ಮೈದಾಹಿಟ್ಟು-1ಕಪ್, ಅಕ್ಕಿ ಹಿಟ್ಟು-2ಚಮಚ, ಜೀರಿಗೆ-ಅರ್ಧ ಟೀ ಸ್ಪೂನ್, ಕಪ್ಪು ಎಳ್ಳು-1ಚಮಚ, ಅರಿಶಿನ ಪುಡಿ-ಅರ್ಧ ಟೀ ಸ್ಪೂನ್, ಸಕ್ಕರೆ-2ಚಮಚ, ಕರಿಯಲು-ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.(ಮೈದಾ ಬದಲು ಗೋಧಿ ಹಿಟ್ಟು ಹಾಕಬಹುದು).
ತಯಾರಿಸುವ ವಿಧಾನ
ಮೊದಲಿಗೆ ನೇಂದ್ರ ಬಾಳೆ ಹಣ್ಣಿನ ಸಿಪ್ಪೆಯನ್ನು ತೆಗೆದು ಮಧ್ಯ ಭಾಗದಲ್ಲಿ ಕಟ್ ಮಾಡಿ ಉದ್ದನೆ ಸೀಳಿ ಇಟ್ಟುಕೊಳ್ಳಿ. ನಂತರ ಒಂದು ಬೌಲ್ಗೆ ಮೈದಾ, ಅಕ್ಕಿ ಹಿಟ್ಟು, ಜೀರಿಗೆ, ಕಪ್ಪು ಎಳ್ಳು, ಅರಿಶಿನ ಪುಡಿ, ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.(ಹಿಟ್ಟು ತುಂಬಾ ನೀರಾಗಬಾರದು).
ತದನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಹೆಚ್ಚಿಟ್ಟುಕೊಂಡ ನೇಂದ್ರ ಬಾಳೆ ಹಣ್ಣುನ್ನು ಮಾಡಿಟ್ಟ ಹಿಟ್ಟಿನ ಮಿಶ್ರಣಕ್ಕೆ ಮುಳುಗಿಸಿ ಎಣ್ಣೆಗೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಕರಿಯಿರಿ.
ಬಿಸಿ-ಬಿಸಿಯಾಗಿ ಟೇಸ್ಟಿಯಾದ ಏತಕ್ಕ ಅಪ್ಪಂ ನ್ನು ಟೀ, ಕಾಫಿ ಜೊತೆ ತಿನ್ನುತ್ತಿದ್ದರೆ ಸೂಪರ್ ಆಗಿರುತ್ತದೆ. ತಪ್ಪದೇ ಇಂದೇ ಟ್ರೈ ಮಾಡಿ ಹೇಗಿದೆ ಎಂದು ಕಾಮೆಂಟ್ ಮಾಡಿ.
-ಶ್ರೀರಾಮ್ ಜಿ. ನಾಯಕ್
ಟಾಪ್ ನ್ಯೂಸ್
![Bahngala](https://www.udayavani.com/wp-content/uploads/2024/08/Bahngala-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?](https://www.udayavani.com/wp-content/uploads/2024/08/Iran1-150x84.jpg)
Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?
![Temple Story: ಕಮಂಡಲ ಗಣಪತಿ ದೇವಸ್ಥಾನ.. ಇಲ್ಲಿನ ಪವಾಡಕ್ಕೆ ಇಲ್ಲಿಗೆ ಬರುವ ಭಕ್ತರೇ ಸಾಕ್ಷಿ](https://www.udayavani.com/wp-content/uploads/2024/08/kamndala-150x71.jpg)
Temple Story: ಕಮಂಡಲ ಗಣಪತಿ ದೇವಸ್ಥಾನ.. ಇಲ್ಲಿನ ಪವಾಡಕ್ಕೆ ಇಲ್ಲಿಗೆ ಬರುವ ಭಕ್ತರೇ ಸಾಕ್ಷಿ
![Movies: ಬಂಡವಾಳ ಸ್ವಲ್ಪ ಲಾಭಾಂಶ ಜಾಸ್ತಿ..ಸಣ್ಣ ಬಜೆಟ್ನಲ್ಲಿ ದೊಡ್ಡ ಹಿಟ್ ಕೊಟ್ಟ ಚಿತ್ರಗಳು](https://www.udayavani.com/wp-content/uploads/2024/08/1-2-150x90.jpg)
Movies: ಬಂಡವಾಳ ಸ್ವಲ್ಪ ಲಾಭಾಂಶ ಜಾಸ್ತಿ..ಸಣ್ಣ ಬಜೆಟ್ನಲ್ಲಿ ದೊಡ್ಡ ಹಿಟ್ ಕೊಟ್ಟ ಚಿತ್ರಗಳು
![ವಿದೇಶಿ ಪ್ರವಾಸ ಕಥನ 7: Corniche Beach- ಅಬುಧಾಬಿಯ ವಾಕಿಂಗ್ ಕೊರ್ನಿಚ್ ಬೀಚ್](https://www.udayavani.com/wp-content/uploads/2024/08/Cornich-150x104.jpg)
ವಿದೇಶಿ ಪ್ರವಾಸ ಕಥನ 7: Corniche Beach- ಅಬುಧಾಬಿಯ ವಾಕಿಂಗ್ ಕೊರ್ನಿಚ್ ಬೀಚ್
![why do they give condoms to Olympic athletes](https://www.udayavani.com/wp-content/uploads/2024/08/1-main-150x83.jpg)
Olympics ಆಡಲು ಬರುವವರಿಗೆ ಯಾಕೆ ಅಷ್ಟೊಂದು ಕಾಂಡೋಮ್ಸ್; ಏನಿದರ ರಹಸ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.