‘ಬೇಡರ ವೇಷ’ ಯಾವ ಕಾರಣಕ್ಕಾಗಿ ಶುರುವಾಯಿತು ಗೊತ್ತಾ? ಇಲ್ಲಿದೆ ರೋಚಕ ಸತ್ಯ!

ರುದ್ರಾಂಬಿಕಾಳನ್ನು ಕೊಲೆ ಮಾಡಲು ಮುಂದಾದಾಗ ಅದೇ ಊರಿನ 12 ಮಂದಿ ಆತನನ್ನು ಜೀವಂತವಾಗಿ ಸುಟ್ಟು ಹಾಕುತ್ತಾರೆ

Team Udayavani, Mar 30, 2021, 8:30 AM IST

್ಹಗ್ಹಗಹ

ಹೋಳಿ ಹುಣ್ಣಿಮೆ ಬಂದರೆ ಎಲ್ಲೆಲ್ಲೂ ಬಣ್ಣಗಳದ್ದೇ ಕಲರವ. ಎಲ್ಲಾ ಕಷ್ಟಗಳನ್ನು ಮರೆತು ಪರಸ್ಪರ ಸಾಮರಸ್ಯದಿಂದ ಬಣ್ಣ ಹಚ್ಚುತ್ತ ಪ್ರೀತಿ ಹಂಚುವ ಹಬ್ಬವೇ ಹೋಳಿ ಹುಣ್ಣಿಮೆ. ಈ ಹಬ್ಬದ ಮತ್ತೊಂದು ವಿಶೇಷ ಅಂದರೆ ಶಿರಸಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ‘ಬೇಡರ ವೇಷ’ ಆಚರಣೆ.

ಸಾಮಾನ್ಯವಾಗಿ ಬೇಡರ ವೇಷದ ಆಚರಣೆ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಆದ್ರೆ ಈ ಆಚರಣೆಯ ಹಿನ್ನೆಲೆ ಏನು ಎಂಬುದು ಕೆಲವರಿಗೆ ಮಾತ್ರ ತಿಳಿದಿದೆ. ಇಂದು ನಾವು ಹೋಳಿ ಹುಣ್ಣಿಮೆಯಲ್ಲಿ ಬೇಡರ ವೇಷವನ್ನು ಏಕೆ ಹಾಕುತ್ತಾರೆ. ಅದರ ಹಿಂದಿನ ಇತಿಹಾಸ ಏನು ಎಂಬುದನ್ನ ತಿಳಿಯೋಣ. ಇದಕ್ಕೂ ಮುನ್ನ ಬೇಡರ ವೇಷ ಅಂದ್ರೆ ಏನು ಎಂಬುದನ್ನ ಇಲ್ಲಿ ಗಮನಿಸೋಣ.

ಬೇಡರ ವೇಷ ಅಂದರೆ ಇದೊಂದು ಜಾನಪದ ನೃತ್ಯ. ಕರ್ನಾಟದ ಶಿರಸಿ ಭಾಗದಲ್ಲಿ ಇದು ಪ್ರಚಲಿತದಲ್ಲಿದೆ. ಹೋಳಿ ಹುಣ್ಣಿಮೆ ಹಬ್ಬದಂದು ವಿಶೇಷ ರೀತಿಯಲ್ಲಿ ವೇಷಭೂಷಣ ತೊಟ್ಟು ರಾತ್ರಿ ಇಡೀ ನೃತ್ಯ ಮಾಡುತ್ತಾರೆ. ಮುಖಕ್ಕೆ ಬಿಳಿ, ಕೆಂಪು, ಕಪ್ಪು ಬಣ್ಣ ಬಳಿದುಕೊಂಡು, ಗಡ್ಡ ಮೀಸೆ ಕಟ್ಟಿಕೊಂಡು, ಸೊಂಟಕ್ಕೆ ಬಣ್ಣದ ಬಟ್ಟೆ ಕಟ್ಟಿಕೊಂಡು ಕಾಲುಗಳಿಗೆ ಗೆಜ್ಜೆ ಕಟ್ಟಿಕೊಂಡು ತಲೆಗೆ ಮತ್ತು ಬೆನ್ನಿಗೆ ನವಿಲುಗರಿ ಕಟ್ಟಿಕೊಂಡು ರಸ್ತೆಗೆ ಬಂದರೆ ಎಂತವರಿಗೂ ಎದೆಯಲ್ಲಿ ನಡುಕ ಹುಟ್ಟುತ್ತದೆ. ಇವರನ್ನು ನಿಯಂತ್ರಿಸಲು ಬೆನ್ನಿಗೆ ಹಗ್ಗ ಕಟ್ಟಿ ಇಬ್ಬರು ಹಿಡಿದಿರುತ್ತಾರೆ.

ಹೋಳಿ ಹುಣ್ಣಿಮೆಯ ರಾತ್ರಿ ಈ ಬೇಡ ವೇಷಧಾರಿಗಳು ವೀರಾವೇಷದಿಂದ ಕುಣಿಯುತ್ತಾರೆ. ರಸ್ತೆ ತುಂಬೆಲ್ಲ ತಮಟೆ, ಡೋಲುಗಳ ನಾದಕ್ಕೆ ಹೆಜ್ಜೆ ಹಾಕುವ ಇವರನ್ನು ನೋಡಲು ಜನ ಸಾಗರವೇ ಸೇರಿರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಮುಂಡಗೋಡ ತಾಲೂಕುಗಳಲ್ಲಿ ಈ ಆಚರಣೆ ಚಿರ ಪರಿಚಿತ.

ನಗರದ ಬೀದಿಗಳಲ್ಲಿ ನಡುರಾತ್ರಿ ಮೇಳೈಸುವ ಈ ಜಾನಪದೀಯ ಸಂಪ್ರದಾಯವನ್ನು ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿರುತ್ತಾರೆ.

ಬೇಡರ ವೇಷ ಶುರುವಾಗಿದ್ದು ಯಾವಾಗಿನಿಂದ : ನಮಗೆ ಬೇಡರ ವೇಷ ಅಂದರೆ ಗೊತ್ತಾಗಿದೆ. ಇದೀಗ ಈ ವೇಷ ಎಂದಿನಿಂದ ಪ್ರಚಲಿತಕ್ಕೆ ಬಂತು ಎಂಬುದನ್ನ ತಿಳಿದುಕೊಳ್ಳೋಣ. 300 ವರ್ಷಗಳ ಹಿಂದೆ ಅಂದರೆ ಸ್ವತಂತ್ರ ಪೂರ್ವದಲ್ಲಿ ವಿಜಯ ನಗರ ಅರಸರ ಆಳ್ವಿಕೆ ಮುಗಿದ ನಂತರ ಶಿರಸಿ ಸೇರಿದಂತೆ ದಕ್ಷಿಣ ಭಾರತದ  ಹಲವಾರು ಪ್ರದೇಶಗಳನ್ನು ‘ಸೋಂದ’ ಮನೆತನವು ವಶಪಡಿಸಿಕೊಂಡಿತು. ಈ ವೇಳೆ ಶಿರಸಿಯನ್ನು ಕಲ್ಯಾಣ ಪಟ್ಟಣ ಎಂದು ಕರೆಯಾಗುತ್ತಿತ್ತು.ಈ ಸೋಂದ ಮನೆತನಕ್ಕೆ ಯಾವಾಗಲೂ ಇದ್ದ ಒಂದೇ ಒಂದು ಉಪಟಳ ಅಂದರೆ ಮುಸಲ್ಮಾನರ ದಾಳಿ. ಇದರಿಂದ ನೊಂದು ಬೆಂದ ಈ ಮನೆತನವು, ಮುಸಲ್ಮಾನರ ದಾಳಿಯನ್ನು ತಡೆಯಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡಿತು. ಆ ವ್ಯಕ್ತಿಯೇ ‘ಮಲ್ಲೇಶಿ’. ಮಲ್ಲೇಶಿಯು ಬೇಡ ಸಮುದಾಯಕ್ಕೆ ಸೇರಿದ್ದು, ಶೂರ-ಧೀರನಾಗಿದ್ದ. ಅಲ್ಲದೆ ಈ ಹಿಂದೆ ವಿಜಯನಗರ ಅರಸರ ಕಾಲದ ಸೇನೆಯಲ್ಲಿ ಕೆಲಸವನ್ನೂ ಮಾಡಿದ್ದ.

ಮಲ್ಲೇಶಿಯು ಮೊದ ಮೊದಲು ತನಗೆ ನೇಮಿಸಿದ ಕೆಲಸವನ್ನು ಶ್ರದ್ಧೆಯಿಂದಲೇ ಮಾಡಿದ್ದ. ನಂತರದ ದಿನಗಳಲ್ಲಿ ಕ್ರೂರಿ ಮತ್ತು ಕಾಮಾಂಧನಾಗಿ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ. ಇದೇ ಸಂದರ್ಭದಲ್ಲಿ ಸ್ಥಳೀಯ ಮುಖಂಡನಾಗಿದ್ದ ದಾಸಪ್ಪನಿಗೆ ಒಬ್ಬಳು ಮಗಳಿದ್ದು, ಅವಳ ಹೆಸರು ರುದ್ರಾಂಬಿಕಾ. ಈ ಹೆಣ್ಣಿನ ಮೇಲೆ ಮಲ್ಲೇಶಿಯ ಕಣ್ಣು ಬಿದ್ದು, ನಾನು ಇವಳನ್ನು ಮದುವೆಯಾಗುತ್ತೇನೆ ಎಂದು, ಮದುವೆಯನ್ನೂ ಆದ.

ಮದುವೆಯಾದ ನಂತರವೂ ಮಲ್ಲೇಶಿಯ ದುರಾಡಳಿತ ನಿಲ್ಲಲಿಲ್ಲ. ಇದರಿಂದ ರುದ್ರಾಂಬಿಕಾ ಕೂಡ ಸಿಟ್ಟಿಗೆದ್ದು ಮಲ್ಲೇಶಿಯನ್ನು ಕೊಲ್ಲಬೇಕೆಂದು ಯೋಜನೆ ರೂಪಿಸಿದ್ದಳು.

ಒಂದು ಹೋಳಿ ಹುಣ್ಣಿಮೆಯ ರಾತ್ರಿ ಮಲ್ಲೇಶಿಯು ಕುಣಿಯುತ್ತಿರುವ ಸಂದರ್ಭದಲ್ಲಿ ಪತಿಯ ಕಣ್ಣಿಗೆ ರುದ್ರಾಂಬಿಕಾ ಆಸಿಡ್ ಹಾಕುತ್ತಾಳೆ. ಇದರಿಂದ ಸಿಟ್ಟಿಗೆದ್ದ ಮಲ್ಲೇಶಿ ರುದ್ರಾಂಬಿಕಾಳನ್ನು ಕೊಲೆ ಮಾಡಲು ಮುಂದಾದಾಗ ಅದೇ ಊರಿನ 12 ಮಂದಿ ಆತನನ್ನು ಜೀವಂತವಾಗಿ ಸುಟ್ಟು ಹಾಕುತ್ತಾರೆ.

ಇದಾದ ಮೇಲೆ ತನ್ನ ಗಂಡನ ಚಿತೆಯಲ್ಲಿ ಹೋಗಿ ರುದ್ರಾಂಬಿಕಾ ಕೂಡ ಪ್ರಾಣ ಬಿಡುತ್ತಾಳೆ. ಈ ರುದ್ರಾಂಬಿಕಾಳ ತ್ಯಾಗದ ಪ್ರತಿರೂಪವಾಗಿ ಅಲ್ಲಿನ ಜನರು ಪ್ರತೀ ವರ್ಷ ಬೇಡರ ವೇಷ ಹಾಕಿಕೊಂಡು ಅವಳ ನೆನಪು ಮಾಡಿಕೊಂಡು ಕುಣಿಯುತ್ತಾರೆ. ಈ ಆಚರಣೆ ಇಂದಿಗೂ ನಡೆದು ಬಂದಿದೆ.

ಗಿರೀಶ ಗಂಗನಹಳ್ಳಿ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

Devegowda

Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್‌.ಡಿ.ದೇವೇಗೌಡ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.