ವೃತ್ತಿ- ಪ್ರವೃತ್ತಿಯಲ್ಲಿ ಪ್ರಾಮಾಣಿಕತೆ ಮೇಳೈಸಲಿ

ಬಾಳಿಗೆ ಬೆಳಕಾಗಿ ಬಾಳು ನವರೂಪ ತಾಳುವ ಪ್ರಕ್ರಿಯೆಯೇ ವೃತ್ತಿ-ಪ್ರವೃತ್ತಿ.

Team Udayavani, Feb 23, 2022, 5:55 AM IST

ವೃತ್ತಿ- ಪ್ರವೃತ್ತಿಯಲ್ಲಿ ಪ್ರಾಮಾಣಿಕತೆ ಮೇಳೈಸಲಿ

ವೃತ್ತಿ- ಪ್ರವೃತ್ತಿಗಳು ಬದುಕಿನ ಬಂಡಿಯ ಎರಡು ಗಾಲಿಗಳಿದ್ದಂತೆ. ವೃತ್ತಿ ಬದುಕಿನ ರಥಯಾತ್ರೆಯ ಸಾಧನವಾದರೆ, ಪ್ರವೃತ್ತಿ ಎಂಬುದನ್ನು ಹವ್ಯಾಸ, ಉಪವೃತ್ತಿ ಎಂಬುದಾಗಿ ವ್ಯಾಖ್ಯಾನಿಸಬಹುದು. ಬದುಕಿನಲ್ಲಿ ಪ್ರವೃತ್ತಿ, ವೃತ್ತಿಯಾಗಿ ಗುಣಾತ್ಮಕವಾಗಿ ಮಾರ್ಪಾಡಾಗುವ ಹಲವು ಉದಾ ಹರಣೆಗಳು ನಮಗೆ ಕಾಣಸಿಗುತ್ತವೆ. ಬಾಳಿಗೆ ಬೆಳಕಾಗಿ ಬಾಳು ನವರೂಪ ತಾಳುವ ಪ್ರಕ್ರಿಯೆಯೇ ವೃತ್ತಿ-ಪ್ರವೃತ್ತಿ.

ನಾವು ನೋಡುವ ದೃಷ್ಟಿಕೋನ ದಿಂದಾಗಿ ವೃತ್ತಿ -ಪ್ರವೃತ್ತಿಗಳಲ್ಲಿ ಮೇಲು- ಕೀಳು ಎಂಬ ಭಾವನೆ ಮೂಡಿವೆಯೇ ಹೊರತು ನಿಜಕ್ಕಾದರೂ ಅಂಥ ತಾರತ ಮ್ಯವೇ ಇಲ್ಲ. ವೃತ್ತಿ-ಪ್ರವೃತ್ತಿಗಳ ಧ್ಯೇಯೋದ್ದೇಶವೇ ಸಮಾಜಮುಖೀ, ಪ್ರಗತಿ ಪರ ಮತ್ತು ಜನಪರ. ಇವೆರಡೂ ಸಮಾಜಸೇವೆಗೆ ಉಜ್ವಲ ಅವಕಾಶ ನೀಡುವ ವಾಹಕಗಳು.
ನಾವು ಯಾವುದೇ ವೃತ್ತಿ-ಪ್ರವೃತ್ತಿ ಯನ್ನು ನಿರ್ವಹಿಸುತ್ತಿರುವಾಗ “ಸೇವಾಹೀ ಪರಮೋ ಧರ್ಮಃ’ ಎಂಬ ಧರ್ಮೋಕ್ತಿಯನ್ನು ಅನುಸರಿ ಸುವುದು ಮುಖ್ಯ. ನಮ್ಮ ವೃತ್ತಿ- ಪ್ರವೃತ್ತಿಯ ನೈಜಮುಖ ಕೆಲವೊಂದು ಸಂದರ್ಭಗಳಲ್ಲಿ ಗೋಚರವಾಗುತ್ತದೆ. ಉದಾ: ಪ್ರಾಕೃತಿಕ ಸಂಕ್ಷೋಭೆ, ಯುದ್ಧ ದಂತಹ ಸಂದರ್ಭಗಳಲ್ಲಿ ಹಲವು ವೃತ್ತಿ- ಪ್ರವೃತ್ತಿಗಳ ಮಹತ್ವ ಬೆಳಕಿಗೆ ಬರುತ್ತವೆ. ಇದೇ ವೇಳೆ ಇಲ್ಲಿ ಅನೆೃತಿಕತೆ ನುಸುಳಿದರೆ ಇವುಗಳು ದಂಧೆಗಳಾಗಿ ಮಾರ್ಪಟ್ಟು ಸಮಾಜದ ಅಗೌರವ, ತಿರಸ್ಕಾರಕ್ಕೆ ಪಾತ್ರರಾಗಬೇಕಾದೀತು.

ಬದುಕಿನ ವೃತ್ತಿಗಳ ನಿರ್ಧರಿಸುವಿಕೆ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಿಧಿಯದ್ದೇ. ಇಲ್ಲಿ ವಿಧಿಯ ನಿರ್ಧಾರವೇ ಅಂತಿಮ. ಹಾಗಿರುವಾಗ ಬಸವಣ್ಣನವರ “ಕಾಯಕವೇ ಕೆೃಲಾಸ’ ತಣ್ತೀವನ್ನು ನಂಬಿ, ಅಳವಡಿಸಿ ವಿಧಿ ನಮಗೆ ದಯಪಾಲಿಸಿದ ವೃತ್ತಿ -ಪ್ರವೃತ್ತಿಯನ್ನು ನಾವು ಅತ್ಯಂತ ಶ್ರದ್ಧೆ, ಪ್ರಾಮಾಣಿಕತೆ, ಧೀಮಂತಿಕೆ, ಸ್ವಂತಿಕೆ, ಪ್ರಬುದ್ಧತೆಗಳಿಂದ ನಿರ್ವಹಿಸಬೇಕು. ನಮ್ಮ ವೃತ್ತಿ-ಪ್ರವೃತ್ತಿಗಳು ಈ ಗುಣಗಳ ಮೇಲೆ ನೆಲೆ ನಿಂತರೆ ಚಂದ. ಈ ಎಲ್ಲ ಗುಣಗಳು ಸಂಸ್ಕಾರ, ಸುಸಂಸ್ಕೃತಿಯ ಬಗೆಬಗೆಯ ಚಹರೆಗಳೂ ಹೌದು. ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಹೃದಯ ಸಿರಿವಂತಿಕೆ ಬೇಕು ಮತ್ತು ಸಮಾಜ ಮುನ್ನಡೆಯಲು ಎಲ್ಲ ವೃತ್ತಿಗಳ ಕೊಡುಗೆ ಅತ್ಯಗತ್ಯ. ಆದ ಕಾರಣ ಆಯಾಯ ರಂಗದ ವೃತ್ತಿಪರರು ತಮ್ಮ ತಮ್ಮ ರಂಗದಲ್ಲಿ ಪ್ರಬುದ್ಧತೆ ಮೆರೆದು ನೆೃತಿಕತೆಯಿಂದ ಕಾರ್ಯಾ ಚರಿಸಿದರೆ ಸಮಷ್ಟಿಗೂ ಶುಭಕರ, ವೆೃಯಕ್ತಿಕವಾಗಿಯೂ ಶ್ರೇಯಸ್ಕರ.

ವೃತ್ತಿ ಕ್ಷೇತ್ರ ಯಾವುದಾದರೇನಂತೆ ಮಹಾನ್‌ ಸಾಧನೆಗೆೃದು ಸಮಾಜದಲ್ಲಿ ತಮ್ಮ ತಮ್ಮ ವೃತ್ತಿಗಳಿಗೂ ಮತ್ತು ವ್ಯಕ್ತಿಗತವಾಗಿ ಗೌರವ ಕೊಟ್ಟು ಯಶಸ್ಸನ್ನು ಕಂಡ ಸಾಧಕರ ಹಲವು ಉದಾಹರಣೆ ಗಳು ನಮ್ಮಲ್ಲಿವೆ. ತೆರೆಮರೆಯ ಕಾಯಿ ಯಂತೆ ಕಾರ್ಯಾಚರಿಸುವ ಇಂತಹ ಸಾಧಕರು ಇನ್ನೂ ಅದೆಷ್ಟೋ ಸಂಖ್ಯೆಯಲ್ಲಿದ್ದಾರೆ. ಸಣ್ಣ- ಪುಟ್ಟ ಕುಲಕಸುಬುಗಳಲ್ಲಿ ನೂತನ ಆವಿಷ್ಕಾರ/ಇನ್ನಿತರ ವಿಧಾನಗಳ ಮುಖೇನ ರಾಷ್ಟ್ರಸೇವೆಗೈಯುವ ಅನೇಕಾ ನೇಕ ಸಾಧಕರು ನಮ್ಮ ನಡುವಿದ್ದಾರೆ. ಇವರೆಲ್ಲರೂ ವೃತ್ತಿ- ಪ್ರವೃತ್ತಿಯ ಕಡೆ ನೋಡದೆ ಯಾವುದೇ ಪ್ರತಿಫ‌ಲ ಅಪೇಕ್ಷಿಸದೇ ನಿಷ್ಕಾಮ ಮನೋಭಾವ ದಿಂದ ದುಡಿದು ಸಮಾಜದ ಅಭ್ಯುದಯದ ಕಡೆಗೆ ದೃಷ್ಟಿ ಹರಿಸುವ ವರ್ಗದವರು. ಇವರನ್ನೆಲ್ಲ ಸಮಾಜ ತನ್ನ ಆದರ್ಶವನ್ನಾಗಿಸಿಕೊಳ್ಳಬೇಕು ಮತ್ತು ಅನುಸರಿಸಬೇಕು.

“ಸತ್‌ ಸಂಕಲ್ಪದಿಂದ ಸಂಕಲ್ಪ ಸಿದ್ಧಿ’ ಎಂಬ ಮಂತ್ರದಂತೆ ವೃತ್ತಿ- ಪ್ರವೃತ್ತಿಯನ್ನು ಸಿದ್ಧಿಸಿ ಸ್ವಾಮಿ ವಿವೇಕಾನಂದರ “ಸರಳ ಜೀವನ ಉನ್ನತ ಚಿಂತನೆ’ ಎಂಬ ನುಡಿಯಂತೆ ಇವೆರಡನ್ನು ಸಾಕ್ಷಾತ್ಕರಿಸಬೇಕು. ಆಗ ಜೀವನವು ಆತಂಕ- ಖನ್ನತೆ ಮುಕ್ತ ವಾಗಿ, ಸುಂದರವಾಗಿ ಅರಳಿ ಸಮಾಜ ದೊಂದಿಗೆ ರಾಷ್ಟ್ರವೂ ಆರೋಗ್ಯಪೂರ್ಣ ವಾಗುವುದು ಮತ್ತು ನವ ಅರುಣೋದ ಯತ್ತ ಸಾಗುವುದು. ಆದ ಕಾರಣ ನಮ್ಮ ವೃತ್ತಿ-ಪ್ರವೃತ್ತಿಗಳೆರಡೂ ಪ್ರಾಮಾಣಿಕತೆ ಯಿಂದ ಆಪ್ಯಾಯಮಾನವಾಗಿರಲಿ.

- ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

ಟಾಪ್ ನ್ಯೂಸ್

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.