Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು


Team Udayavani, May 21, 2024, 6:07 PM IST

17

ಕೊಚ್ಚಿ: ಸಿನಿಮಾರಂಗದಲ್ಲಿ ಕಾಲಿವುಡ್‌, ಟಾಲಿವುಡ್‌ , ಬಾಲಿವುಡ್‌ ಹಾಗೂ ಸ್ಯಾಂಡಲ್‌ ವುಡ್‌ ಮಾಡದ ಸಾಧನೆಯನ್ನು ವರ್ಷದ ಕಳೆದ ಐದು ತಿಂಗಳಿನಲ್ಲಿ ಮಾಲಿವುಡ್‌ ಮಾಡಿ ತೋರಿಸಿದೆ. ಬಾಕ್ಸ್‌ ಆಫೀಸ್‌ ನಲ್ಲಿ ಮಲಯಾಳಂ ಸಿನಿಮಾಗಳು ಮೊಟ್ಟೆಯಿಡುವ ಚಿನ್ನದ ಕೋಳಿಗಳಾಗಿವೆ ಎಂದರೆ ತಪ್ಪಾಗದು.

2024ರ ವರ್ಷ ಮಾಲಿವುಡ್‌ ಗೆ ಚಿತ್ರರಂಗಕ್ಕೆ ಇದುವರೆಗೆ ಗೋಲ್ಡನ್‌ ಮೊಮೆಂಟ್‌ ಎಂದೇ ಹೇಳಬಹುದು. ವರ್ಲ್ಡ್‌ ವೈಡ್‌ ಮಲಯಾಳಂ ಸಿನಿಮಾಗಳು ಐದೇ ಐದು ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ.

ವಿಶೇಷವೆಂದರೆ ಈ 1000 ಕೋಟಿಯಲ್ಲಿ ಮೂರು ಸಿನಿಮಾಗಳು ಅತೀ ಹೆಚ್ಚು ಗಳಿಕೆಯನ್ನು ತಂದುಕೊಟ್ಟಿದೆ.

ಈ ಮೈಲಿಗಲ್ಲಿಗೆ ಮೂರು ಸಿನಿಮಾಗಳು  ಗಮನಾರ್ಹವಾಗಿ ಕೊಡುಗೆ ನೀಡಿವೆ. ಒಟ್ಟು ಆದಾಯದಲ್ಲಿ 55% ರಷ್ಟು ಈ ಮೂರು ಸಿನಿಮಾದಿಂದ ಬಂದಿದೆ ಎಂದು ʼಆನ್ ಮನೋರಮಾʼ ವರದಿ ತಿಳಿಸಿದೆ.

ಇದರಲ್ಲಿ ಮುಂಚೂಣಿಯಲ್ಲಿ ಬರುವ ಚಿತ್ರವೆಂದರೆ ಅದು ‘ಮಂಜುಮ್ಮೆಲ್ ಬಾಯ್ಸ್ʼ. ಈ ಚಿತ್ರಕ್ಕೆ ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ವರ್ಲ್ಡ್‌ ವೈಡ್ ‘ಮಂಜುಮ್ಮೆಲ್ ಬಾಯ್ಸ್ʼ 240.94 ಕೋಟಿ ರೂ. ಗಳಿಸಿದೆ.

ಇನ್ನು ಎರಡನೇಯದಾಗಿ ಪೃಥ್ವಿರಾಜ್ ಸುಕುಮಾರನ್ ಅವರ ʼಆಡುಜೀವಿತಂʼ ಮಾಲಿವುಡ್‌ ನಲ್ಲಿ ಮೋಡಿ ಮಾಡಿತು. 157.44 ಕೋಟಿ ರೂ. ಗಳಿಕೆ ಕಾಣುವ ಮೂಲಕ ದೊಡ್ಡ ಹಿಟ್‌ ಆಗಿ ಹೊರಹೊಮ್ಮಿತು.  ಇನ್ನು ಫಾಹದ್‌ ಫಾಸಿಲ್‌ ಅವರ ಕಾಮಿಡಿ ಕಥಾಹಂದರ ʼಆವೇಶಮ್‌ʼ ಕೂಡ 1000 ಕೋಟಿಗೆ ತನ್ನ ಕೊಡುಗೆಯನ್ನು ನೀಡಿದೆ. ಈ ಚಿತ್ರ ಒಟ್ಟು 153.52 ಕೋಟಿ ರೂಪಾಯಿಯ ಗಳಿಕೆ ಕಂಡಿದೆ.

ಈ ಮೂರು ಚಿತ್ರಗಳು ಸೇರಿ ಒಟ್ಟು 551 ಕೋಟಿ ರೂ.ಗಳಿಸಿದೆ. ಏಪ್ರಿಲ್ ಅಂತ್ಯದ ವೇಳೆಗೆ ಮಲಯಾಳಂ ಚಿತ್ರರಂಗ ವಿಶ್ವಾದ್ಯಂತ 985 ಕೋಟಿ ರೂ. ಗಳಿಕೆ ಕಂಡಿತ್ತು.

ಇತ್ತೀಚೆಗೆ ಬಂದಿರುವ ಪೃಥ್ವಿರಾಜ್‌ ಅಭಿನಯದ ʼಗುರುವಾಯೂರ್ ಅಮಬಲನಾಡಾಯಿಲ್ʼ ಕೆಲವೇ ದಿನಗಳಲ್ಲಿ 50 ಕೋಟಿ ಗಳಿಕೆ ಕಂಡಿದೆ. ಆ ಮೂಲಕ ಮಾಲಿವುಡ್‌ ಚಿತ್ರರಂಗ 1000 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

2024ರಲ್ಲಿ ಭಾರತೀಯ ಸಿನಿಮಾರಂಗಕ್ಕೆ ಮಾಲಿವುಡ್‌ ಒಂದೇ ಇದುವರೆಗೆ ಶೇ.20 ರಷ್ಟು ಕೊಡುಗೆಯನ್ನು ನೀಡಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವ ಸಿನಿಮಾಗಳೆಂದರೆ ʼಆಡುಜೇವಿತಂʼ, ʼಆವೇಶಮ್‌ʼ, ʼಪ್ರೇಮಲುʼ, ʼಮಂಜುಮ್ಮೆಲ್ ಬಾಯ್ಸ್ʼ ಹಾಗೂ ʼಭ್ರಮಯುಗಂʼ.

2023 ರಲ್ಲಿ ʼಕಣ್ಣೂರು ಸ್ಕ್ಯಾಡ್‌ʼ, ʼಆರ್‌ ಡಿಎಕ್ಸ್‌ʼ, ʼನೆರೂʼ, ʼರೋಮಚಂʼ, ‘ರೋಮಾಂಚಮ್’ ಸೇರಿ ಒಟ್ಟು 500 ಕೋಟಿ ಬ್ಯುಸಿನೆಸ್‌ ಮಾಡಿತ್ತು.

ಇದು ಯಶಸ್ಸಿನ ಆರಂಭವೆಂದರೆ ತಪ್ಪಾಗದು. ಏಕೆಂದರೆ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್‌ ಗೆ ಕಾದುಕುಳಿತಿದೆ.  ‘L2: ಎಂಪುರಾನ್’, ‘ಬರೋಜ್’, ‘ಟರ್ಬೋ’, ‘ಅಜಯಂತೇ ರಾಂಡಮ್ ಮೋಷನಂ’, ‘ಕಥನಾರ್: ದಿ ವೈಲ್ಡ್ ಸೋರ್ಸೆರರ್’.. ಸೇರಿದಂತೆ ಅನೇಕ ಚಿತ್ರಗಳು ಈ ವರ್ಷವೇ ರಿಲೀಸ್‌ ಆಗುವ ಸಾಧ್ಯತೆಯಿದೆ. ಹಾಗಾಗಿ ಈ ಸಿನಿಮಾಗಳು ಕೂಡ ಕೋಟಿ ಕಮಾಯಿ ಮಾಡಿದರೆ ಅಚ್ಚರಿ ಪಡಬೇಕಿಲ್ಲ.

ಟಾಪ್ ನ್ಯೂಸ್

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ‌ ಬಿಗಿ ಪೊಲೀಸ್ ಭದ್ರತೆ

Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ‌ ಬಿಗಿ ಪೊಲೀಸ್ ಭದ್ರತೆ

Belagavi; Letter to CM on division of Belgaum district after Dussehra: Hebbalkar

Belagavi; ದಸರಾ ಬಳಿಕ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಿಎಂಗೆ ಪತ್ರ: ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Devara: ಹೇಗಿದೆ ಜೂ.ಎನ್‌ಟಿಆರ್‌ ʼದೇವರʼ?: ನಿರೀಕ್ಷೆ-ನಿರಾಶೆ..ಪ್ರೇಕ್ಷಕರ ಅಭಿಪ್ರಾಯವೇನು?

Devara: ಹೇಗಿದೆ ಜೂ.ಎನ್‌ಟಿಆರ್‌ ʼದೇವರʼ?: ನಿರೀಕ್ಷೆ-ನಿರಾಶೆ..ಪ್ರೇಕ್ಷಕರ ಅಭಿಪ್ರಾಯವೇನು?

Spirit Movie: ಪ್ರಭಾಸ್‌ ʼಸ್ಪಿರಿಟ್‌ʼನಲ್ಲಿ ಖಡಕ್‌ ವಿಲನ್‌ ಆಗಲಿದ್ದಾರೆ ಈ ಬಿಟೌನ್‌ ದಂಪತಿ

Spirit Movie: ಪ್ರಭಾಸ್‌ ʼಸ್ಪಿರಿಟ್‌ʼನಲ್ಲಿ ಖಡಕ್‌ ವಿಲನ್‌ ಆಗಲಿದ್ದಾರೆ ಈ ಬಿಟೌನ್‌ ದಂಪತಿ

Actor Siddique: ಬಂಧನದ ಭೀತಿಯಿಂದ ತಲೆ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ

Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ

5

ಶಂಕರ್‌ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಿಂದ ಖ್ಯಾತ ನಟಿ ಔಟ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಿಂದ ಖ್ಯಾತ ನಟಿ ಔಟ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.