Ma’nene;ಸ್ಮಶಾನದಲ್ಲಿದ್ದ ಶವ ಮನೆಗೆ ತಂದು ಸಂಭ್ರಮಿಸ್ತಾರೆ! ಇದು ವಿಚಿತ್ರ ಅಚ್ಚರಿ ಸಂಪ್ರದಾಯ

ಅದೃಷ್ಟ ಖುಲಾಯಿಸುವ ನಿಗೂಢ ಆಚರಣೆ; ಇದೇನಿದು?

Team Udayavani, Sep 22, 2024, 10:00 AM IST

Ma’nene; ಪ್ರತಿ ವರ್ಷ ಶ*ವಗಳಿಗೆ ವಿಶಿಷ್ಟ ಗೌರವ!: ಅಚ್ಚರಿಗೊಳಪಡಿಸುವ ಸಂಪ್ರದಾಯ

ಯಾರಾದರು ಶವದೊಂದಿಗೆ ದಿನ ಕಳೆಯಲು ಬಯಸುತ್ತಾರೆಯೇ? ಬಯಸಿದರೂ ದಿನಗಟ್ಟಲೆ ಸಾಧ್ಯವೇ? ಇದು ಕೇಳಿಸಿಕೊಳ್ಳಲು ಭಯಾನಕವೆನಿಸಿದರೂ ಇಂತಹದ್ದೊಂದು ವಿಚಿತ್ರ ಸಂಪ್ರದಾಯ ಇಂಡೋನೇಷ್ಯಾದಲ್ಲಿ ಚಾಲ್ತಿಯಲ್ಲಿದೆ. ಇದೇನಪ್ಪಾ ಶವದೊಂದಿಗೆ ದಿನ ಕಳೆಯೋದಾ ಅಂತ ಪ್ರಶ್ನೆ ಮೂಡೋದು ಸಹಜ. ಈ ಕುರಿತ ಮಾಹಿತಿ ಇಲ್ಲಿದೆ.

ಇಂಡೋನೇಷ್ಯಾದ ದಕ್ಷಿಣ ಸುಲವೆಸಿ (South Sulawesi) ಬೆಟ್ಟಗಳಲ್ಲಿ ವಾಸಿಸುವ  ಟೊರಾಜನ್‌ (Torajan) ಎಂಬ ಜನಾಂಗದವರು ತಮ್ಮದೇ ವಿಶೇಷ ಸಂಪ್ರದಾಯದಿಂದ ಗುರುತಿಸಿಕೊಂಡಿದ್ದಾರೆ. ಇಲ್ಲಿಯ ಜನರು ಶವಗಳನ್ನು ಬಹಳ ಗೌರವದಿಂದ ನಡೆಸಿಕೊಳ್ಳುತ್ತಾರೆ ಹಾಗೆಯೇ ಅವುಗಳಿಗೆ ಆಹಾರವನ್ನು ನೀಡುವುದರ ಜತೆಗೆ ಜೀವವಿರುವವರಂತೆಯೇ ಬಟ್ಟೆಗಳನ್ನು ತೊಡಿಸುತ್ತಾರೆ. ಈ ಸಂಪ್ರದಾಯವನ್ನು ‘ಮಾ ನೆನೆ’ (Ma’nene) ಅಥವಾ ‘ಶವಗಳನ್ನು ಸ್ವಚ್ಛಗೊಳಿಸುವ ಸಮಾರಂಭ’ ಎಂದು ಕರೆಯಲಾಗುತ್ತದೆ.

ಈ ಸಂಪ್ರದಾಯದ ಹಿಂದೆ ಒಂದು ಕಥೆಯಿದೆ: ಸುಮಾರು ವರ್ಷಗಳ ಹಿಂದೆ ಪಾಂಗ್‌ ರುಮಾಸೆಕ್‌ ಎಂಬ ಬೇಟೆಗಾರನು ಟೊರಾಜನ್‌ ಕಾಡಿಗೆ ತೆರಳಿದ್ದಾಗ ಆತನಿಗೆ ಅನಾಥವಾಗಿ ಬಿದ್ದಿದ್ದ ಒಂದು ಅಸ್ಥಿಪಂಜರವು ಕಾಣಿಸಿತ್ತು. ಅಸ್ಥಿಪಂಜರವನ್ನು ಕಂಡ ಪಾಂಗ್‌ ರುಮಾಸೆಕ್‌ ಮರಣ ಹೊಂದಿದ ವ್ಯಕ್ತಿಯ ಹಣೆಬರಹಕ್ಕೆ ಬೇಸರಗೊಂಡ ಆ ಅಸ್ಥಿಪಂಜರಕ್ಕೆ ಬಟ್ಟೆಯನ್ನು ತೊಡಿಸಿ ನಂತರ ಅದನ್ನು ನೋಡಿಕೊಂಡನಂತೆ. ಅಂದಿನಿಂದ ಆತನ ಅದೃಷ್ಟ ಖುಲಾಯಿಸಿದ್ದು, ಕೃಷಿಯಲ್ಲಿಯೂ ಬಹಳ ಲಾಭವಾಗಿತ್ತೆಂಬ ನಂಬಿಕೆ ಇದೆ. ಅಂದಿನಿಂದ ಈ ಆಚರಣೆಯಲ್ಲಿ ಜನ ತೊಡಗಿಸಿಕೊಂಡಿದ್ದು ವಿಶಿಷ್ಟ ಆಚರಣೆ ಮಾಡುವುದರಿಂದ ಸುಗ್ಗಿಯಲ್ಲಿ ಅಧಿಕ ಫಸಲು ಬರುವುದು ಎಂಬ ನಂಬಿಕೆಯೂ ಹೆಚ್ಚಾಯಿತು. ಈ ಎಲ್ಲಾ ಕಾರಣಕ್ಕಾಗಿ ಜನರು ಬಹಳ ಭಯ ಭಕ್ತಿಯಿಂದ ಅತ್ಯಪರೂಪದ ಆಚರಣೆಯನ್ನು ನಡೆಸಿಕೊಂಡು ಬಂದಿದ್ದಾರೆ.

4 ರಿಂದ 5 ದಿನಗಳವರೆಗೆ ಆಚರಿಸುವ ಈ ʼಮಾ ನೆನೆʼ ಸಮಾರಂಭವು ಆಗಸ್ಟ್‌ ತಿಂಗಳಲ್ಲಿ ನಡೆಸಲಾಗುತ್ತದೆ. ಈ ಸಮಯದಲ್ಲಿ ಸ್ಮಶಾನದಿಂದ ತಮ್ಮ ಸಂಬಂಧಿಕರ ದೇಹವನ್ನು ಇರಿಸಿದ ಶವಪೆಟ್ಟಿಗೆಗಳನ್ನು ಮನೆಗೆ ತರಲಾಗುತ್ತದೆ. ನಂತರ ಶವಪೆಟ್ಟಿಗೆಗಳಲ್ಲಿ ಇರಿಸಲಾದ ದೇಹಗಳನ್ನು ಹೊರತೆಗೆದು ಸ್ವಚ್ಛಗೊಳಿಸಿ, ಹೊಸ ಬಟ್ಟೆಗಳನ್ನು ತೊಡಿಸಿ ಇತರ ಹೊಸದಾದ ವಸ್ತುಗಳನ್ನು ಇಡುತ್ತಾರೆ. ತದನಂತರ  ಬಿಸಿಲಿನಲ್ಲಿ ದೇಹಗಳನ್ನು ಒಣಗಿಸಲು ಬಿಡಲಾಗುತ್ತದೆ.

ಸಂಬಂಧಿಕರು ಶುಚಿಗೊಂಡ ಶವದೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಈ ಸಂದರ್ಭ ಊರಿನ ಯುವಕರು ಒಟ್ಟು ಸೇರಿಕೊಂಡು ಹಾಡು ಕುಣಿತದೊಂದಿಗೆ ಕುಟುಂಬಕ್ಕೆ ಮನರಂಜನೆಯನ್ನು ನೀಡುತ್ತಾರೆ. ಎಲ್ಲಾ ಸಂಭ್ರಮ ಆಚರಣೆ ಮುಗಿದ ಬಳಿಕ ಶವವನ್ನು ಮರಳಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಮರಳಿ ಮನೆಗೆ ಬಂದು ಮನೆಯಲ್ಲಿ ಎಲ್ಲರೂ ಸೇರಿಕೊಂಡು ತಯಾರಿಸಿದ ಸಾಂಪ್ರದಾಯಿಕವಾದ ಆಹಾರವನ್ನು ಜತೆಯಾಗಿ ಸೇವಿಸುತ್ತಾರೆ. ಈ ಮೂಲಕ  ಸಮಾರಂಭವು ಪೂರ್ಣವಾಗುತ್ತದೆ.

ಇಲ್ಲಿ ಮತ್ತೊಂದು ವಿಶೇಷವೆಂದರೆ ಅಂತ್ಯಕ್ರಿಯೆ ಸಮಾರಂಭ. ಇಲ್ಲಿನ ಜನರು ಅಂತ್ಯಕ್ರಿಯೆಯ ಸಮಾರಂಭವನ್ನು ʼರಾಂಬೂ ಸೊಲೊʼ(Rambu Solo) ಎಂದು ಆಚರಿಸುತ್ತಾರೆ. ಇದೊಂದು ದುಬಾರಿ ಕಾರ್ಯಕ್ರಮವಾಗಿದ್ದು ಕುಟುಂಬಸ್ಥರು ಇದಕ್ಕೆಂದು ಸುಮಾರು ಹತ್ತಾರು ಸಾವಿರ ರೂಪಾಯಿಗಳನ್ನು ವ್ಯಯಿಸುತ್ತಾರೆ.

ಕೆಲವೊಮ್ಮೆ ಹಣದ ಕೊರತೆಯಿಂದಾಗಿ ಕುಟುಂಬದ ಓರ್ವ ವ್ಯಕ್ತಿಯು ಮರಣಹೊಂದಿದ ಬಳಿಕ ಅವರ ಅಂತ್ಯಕ್ರಿಯೆಯು ತಿಂಗಳ ಬಳಿಕವೋ, ವರ್ಷಗಳ ನಂತರವೂ ಈ ಕ್ರಮ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಆ  ಕುಟುಂಬವು ಅಂತ್ಯಕ್ರಿಯೆ ನಡೆಯುವ ದಿನಗಳವರೆಗೆ ರಾಸಾಯನಿಕ ಪದಾರ್ಥವನ್ನು ಬಳಸಿಕೊಂಡು ಮೃತ ದೇಹವನ್ನು ಮನೆಯಲ್ಲಿ ಇರಿಸಿಕೊಂಡು ಆತ/ ಆಕೆ ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವಂತೆ ನೋಡಿಕೊಳ್ಳುತ್ತಾರೆ. ದಿನಕ್ಕೆರಡು ಬಾರಿ ಆಹಾರ, ಪಾನೀಯ, ಹಾಗೂ ಸಿಗರೇಟನ್ನು ಮನೆಯವರು ಶವಕ್ಕೆ ನೀಡುತ್ತಾರೆ. ಅಂತ್ಯಕ್ರಿಯೆ ನಡೆಸುವವರೆಗೂ ಆತ್ಮವು ಭೂಮಿಯಲ್ಲಿಯೇ ಸಂಚರಿಸುತ್ತಾ ಇದ್ದು ಅಂತ್ಯಕ್ರಿಯೆಯ ಬಳಿಕ ಆತ್ಮಗಳ ಭೂಮಿ (land of spirits) ಯಾದ ‘ಪುಯಾ’ ಗೆ ತಮ್ಮ ಪಯಣವನ್ನು ಶುರು ಮಾಡುತ್ತದೆ ಎಂಬ ನಂಬಿಕೆ ಅಲ್ಲಿಯ ಜನರದ್ದಾಗಿದೆ.

ಮನೆಯಲ್ಲಿ ಇರಿಸಲಾದ ಶವವನ್ನು ಸಮಯಕ್ಕೆ ಸರಿಯಾಗಿ ಶುಚಿಗೊಳಿಸಿ, ಶುಭ್ರವಾದ ಬಟ್ಟೆಗಳನ್ನು ಶವಕ್ಕೆ ತೊಡಿಸಿ ಪ್ರಾರ್ಥನೆಯನ್ನು ನಡೆಸಲಾಗುತ್ತದೆ. ಜತೆಗೆ ಕೋಣೆಯ ಒಂದು ಮೂಲೆಯಲ್ಲಿ ಶೌಚಾಲಯದ ಸಾಂಕೇತಿಕವಾಗಿ ಒಂದು ಪಾತ್ರೆಯನ್ನು ಇಡಲಾಗುತ್ತದೆ. ಶವವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅವರ ಆತ್ಮವು ತೊಂದರೆ ನೀಡುವುದು ಎಂಬ ನಂಬಿಕೆಯಿಂದ ಕುಟುಂಬಸ್ಥರು ಮನೆಯಲ್ಲಿ ಶವವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವುದಿಲ್ಲ, ರಾತ್ರಿ ದೀಪವನ್ನೂ ಆರಿಸುವುದಿಲ್ಲ.

ಮರಣ ಹೊಂದಿದ ವ್ಯಕ್ತಿಯ ದೇಹವನ್ನು ಮನೆಯಲ್ಲಿ ಇರಿಸಿದಷ್ಟು ದಿನ ಸಾಕಷ್ಟು ಹಣವನ್ನು ಕೂಡಿ ಇಟ್ಟು ದೊಡ್ಡ ರೀತಿಯಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ. ಅಂತ್ಯಕ್ರಿಯೆಗೆ ದಿನ ಗೊತ್ತುಪಡಿಸಿದ ನಂತರ 12 ದಿನಗಳು ನಡೆಯುವ ಸಮಾರಂಭದಲ್ಲಿ ಡಜನ್‌ಗಟ್ಟಲೆ ಎಮ್ಮೆಗಳನ್ನು ಖರೀದಿಸಲಾಗುತ್ತದೆ. ನಂತರ ಅವುಗಳನ್ನು ಸಮಾರಂಭದಂದು ಬಲಿಕೊಡಲಾಗುತ್ತದೆ. ಇದಕ್ಕೆ ಕಾರಣ ಎಮ್ಮೆಗಳು ಮರಣ ಹೊಂದಿದ ವ್ಯಕ್ತಿಗೆ ವಾಹನದ ರೂಪದಲ್ಲಿ ಪುಯಾಗೆ ಹೋಗಲು ಸಹಾಯವಾಗುತ್ತವೆ ಎಂಬುದಾಗಿದೆ.

ಅಷ್ಟು ಮಾತ್ರವಲ್ಲದೆ ಸಮಾರಂಭಕ್ಕಾಗಿ ನೂರಾರು ಹಂದಿಗಳನ್ನೂ ಬಲಿಕೊಡಲಾಗುತ್ತದೆ. ಮರಣ ಹೊಂದಿದ ವ್ಯಕ್ತಿಯನ್ನು ʼಮಕುಲಾʼ ಎಂದು ಕರೆಯಲಾಗುತ್ತದೆ. ಆ ವ್ಯಕ್ತಿ ಬದುಕಿದ್ದಾಗ ಯಾವ ರೀತಿ ಗೌರವ ಕಾಳಜಿಯನ್ನು ನೀಡುತ್ತಿದ್ದರೋ ಅದೇ ರೀತಿ ಅವರ ಶವಕ್ಕೂ ಗೌರವ ಕಾಳಜಿಯನ್ನು ಅಲ್ಲಿನ ಜನರು ನೀಡುತ್ತಾರೆ. ಇಲ್ಲಿ ಮರಣ ಎನ್ನುವುದು ಕೇವಲ ಸಾಮಾಜಿಕ ಹಾಗೂ ಜೀವನದಲ್ಲಿ ನಡೆಯುವ ಒಂದು ಪ್ರಕ್ರಿಯೆಯಾಗಿದೆ. ಮರಣ ಹೊಂದಿದ ವ್ಯಕ್ತಿಯು ಸದಾ ಅವರೊಂದಿಗೆ ಇದ್ದು ಅವರನ್ನು ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಕೊನೆಯಲ್ಲಿ ಊರಿನ ಜನರಿಗೆಲ್ಲಾ ಭೋಜನ ಕೂಟ ಏರ್ಪಡಿಸಲಾಗುತ್ತದೆ.

ಇಲ್ಲಿನ ಜನರು ಮರಣ ಹೊಂದಿದ ತಮ್ಮ ಸಂಬಂಧಿಕರ ದೇಹವನ್ನು ತುಂಬಾ ಜಾಗರೂಕತೆಯಿಂದ ಸಮಾಧಿ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಶವಗಳು ಬೇಗ ಹಾಳಾಗಂತೆ ತಡೆಯಲು ವಿಶೇಷವಾದ ಎಲೆಗಳನ್ನು ಮತ್ತು ಗಿಡಮೂಲಿಕೆಗಳನ್ನು ಬಳಸಲಾಗುತ್ತಿತ್ತು. ಈಗ ಅದರ ಬದಲು ಫಾರ್ಮಲಿನ್‌ (Formalin) ನನ್ನು ದೇಹಕ್ಕೆ ಹಚ್ಚುತ್ತಾರೆ. ಇದರಿಂದ ದೇಹವು 100 ವರ್ಷಕ್ಕೂ ಮೀರಿ ಹಾಳಾಗದಂತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಈ ಸಂಪ್ರದಾಯವು ಸಾವು ಮತ್ತು ಬದುಕಿನ ನಡುವೆ ಕಾಣದೆ ಇರುವ ಆಂತರಿಕ ಸಂಬಂಧವನ್ನು ಸೂಚಿಸುತ್ತದೆ. ಇಂಡೋನೇಷ್ಯಾದ ಜನರು ಆಚರಿಸುವ ಈ ಸಮಾರಂಭವನ್ನು ಎರಡನೇ ಅಂತ್ಯಕ್ರಿಯೆ ಎಂದು ಕರೆಯುತ್ತಾರೆ. ಮರಣವಾಗಲಿ, ಅಂತ್ಯಕ್ರಿಯೆಯಾಗಲಿ ಯಾವುದೂ ಸಂಬಂಧದ ಕೊನೆಯಲ್ಲ. ದೇಹ ಕಣ್ಮರೆಯಾದರೂ ಆತ್ಮವಿದೆ ಎಂಬ ನಂಬಿಕೆಯೇ ದೊಡ್ಡದು. ಪ್ರತೀ ಎರಡು ಮೂರು ವರ್ಷಕ್ಕೆ ಶವವನ್ನು ಹೊರತೆಗೆದು ಅದಕ್ಕೆ ತಕ್ಕ ಗೌರವ ಪ್ರೀತಿಯನ್ನು ನೀಡಿ ಟೊರಾಜನ್‌ನ ಜನರು ತಮ್ಮ ಸಂಬಂಧವನ್ನು, ನಂಬಿಕೆಯನ್ನು ಅನೂಚಾನವಾಗಿ ಉಳಿಸಿಕೊಂಡು ಬರುತ್ತಿದ್ದಾರೆ.

-ಪೂರ್ಣಶ್ರೀ.ಕೆ

ಟಾಪ್ ನ್ಯೂಸ್

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡ ಸದೃಶ ಪ್ರಾಣಾಪಾಯದಿಂದ ಪಾರು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡಸದೃಶ ರೀತಿ ಪ್ರಾಣಾಪಾಯದಿಂದ ಪಾರು

River: ನದಿಯೇ ಜೀವನ ಸಾಕ್ಷಾತ್ಕಾರ!

River: ನದಿಯೇ ಜೀವನ ಸಾಕ್ಷಾತ್ಕಾರ!

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

India secures a win against Bangladesh in the chennai test

INDvsBAN; ಅʼಸ್ಪಿನ್‌ʼಗೆ ಬಾಂಗ್ಲಾ ತತ್ತರ: ಚೆನ್ನೈ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Development of 2-dose vaccine for HIV prevention: MIT

HIV vaccine; ಎಚ್‌ಐವಿ ತಡೆಗೆ 2 ಡೋಸ್‌ ಲಸಿಕೆ ಅಭಿವೃದ್ಧಿ: ಎಂಐಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

Harmanpreet Singh: ಹಾರ್ಮೋನಿಯಂ ಹುಚ್ಚಿದ್ದ ಹಳ್ಳಿಯ ಹುಡುಗ ಇದೀಗ ಹಾಕಿ ಸೂಪರ್‌ ಸ್ಟಾರ್‌

Harmanpreet Singh: ಹಾರ್ಮೋನಿಯಂ ಹುಚ್ಚಿದ್ದ ಹಳ್ಳಿಯ ಹುಡುಗ ಇದೀಗ ಹಾಕಿ ಸೂಪರ್‌ ಸ್ಟಾರ್‌

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡ ಸದೃಶ ಪ್ರಾಣಾಪಾಯದಿಂದ ಪಾರು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡಸದೃಶ ರೀತಿ ಪ್ರಾಣಾಪಾಯದಿಂದ ಪಾರು

River: ನದಿಯೇ ಜೀವನ ಸಾಕ್ಷಾತ್ಕಾರ!

River: ನದಿಯೇ ಜೀವನ ಸಾಕ್ಷಾತ್ಕಾರ!

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

India secures a win against Bangladesh in the chennai test

INDvsBAN; ಅʼಸ್ಪಿನ್‌ʼಗೆ ಬಾಂಗ್ಲಾ ತತ್ತರ: ಚೆನ್ನೈ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.