ಒಂದು ಸಿನಿಮಾ ಮಾಡಿ ಮುಂದಿನ ಸಲ್ಮಾನ್‌, ಶಾರುಖ್‌ ಎನ್ನಿಸಿಕೊಂಡಿದ್ದಾತ ದಿಢೀರ್‌ ನಾಪತ್ತೆ..!

ರಾತ್ರೋ ರಾತ್ರಿ ಸೂಪರ್‌ ಸ್ಟಾರ್‌ ಆಗಿದ್ದಾತನಿಗೆ ಆಗಿದ್ದೇನು?

ಸುಹಾನ್ ಶೇಕ್, Jul 17, 2024, 7:21 PM IST

14

ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಎಷ್ಟೋ ಮಂದಿ ದಿನ ರಾತ್ರಿಯನ್ನದೆ ಅಲೆದಾಡುತ್ತಾರೆ. ಇದರಲ್ಲಿ ಕೆಲ ಮಂದಿಗೆ ಅವಕಾಶದ ಬಾಗಿಲು ತೆರೆದೆರೆ ಇನ್ನು ಕೆಲವರು ಅವಕಾಶ ವಂಚಿತರಾಗಿಯೇ ಉಳಿದು ಬಿಡುತ್ತಾರೆ.

ಚಿತ್ರರಂಗದಲ್ಲಿ ಅವಕಾಶ ಸಿಕ್ಕಿ, ಸ್ಟಾರ್‌ ಪಟ್ಟ ಸಿಕ್ಕ ಬಳಿಕ ಎಲ್ಲವನ್ನೂ ಬಿಟ್ಟು ದೂರ ದೂರಿಗೆ ಹೋಗಿ ನೆಲೆಸಿದ ಕಲಾವಿದನ ಸ್ಟೋರಿಯಿದು.

ನಕುಲ್ ಕಪೂರ್ (Nakul Kapoor). 2001 -2002ರ ಸಮಯದಲ್ಲಿ ಬಾಲಿವುಡ್‌ ನ (Bollywood) ಬಣ್ಣದ ಲೋಕದಲ್ಲಿ ಚಾಕ್ಲೇಟ್‌ ಬಾಯ್‌ ಆಗಿ ಮೆರೆದ ನಟ ಈತ. ಚಿತ್ರರಂಗಕ್ಕೆ ಕಾಲಿಡುವ ಮುನ್ನ ನಕುಲ್‌ ಮಿಂಚಿದ್ದು 1998ರಲ್ಲಿ ಬಂದ ಮ್ಯೂಸಿಕ್‌ ವಿಡಿಯೋ ಆಲ್ಬಂನಲ್ಲಿ. ʼಹೋ ಗಯಿ ಹೈ ಮೊಹಬ್ಬತ್ ತುಮ್ಸೆʼ ಎನ್ನುವ ಮ್ಯೂಸಿಕ್‌ ವಿಡಿಯೋದಲ್ಲಿ ಹ್ಯಾಂಡ್ಸಮ್‌ ಹುಡುಗನಾಗಿ, ಲವರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದರು.

2001ರಲ್ಲಿ ʼಆಜಾ ಮೇರೆ ಯಾರ್ʼ ಎನ್ನುವ ಸಿನಿಮಾದಲ್ಲಿ ನಟಿಸುತ್ತಾರೆ. ಈ ಸಿನಿಮಾದಲ್ಲಿ ನಕುಲ್‌ ಗಮನ ಸೆಳೆಯುತ್ತಾರೆ. ಆದರೆ  ಅದಕ್ಕೂ ಹೆಚ್ಚು ಸಿನಿ ಪ್ರೇಕ್ಷಕರಿಗೆ ನಕುಲ್‌ ಇಷ್ಟವಾಗುವುದು ಅವರ ಮುಂದಿನ ಸಿನಿಮಾದ ಮೂಲಕ.

ದೀಪಕ್‌ ಆನಂದ್‌ ನಿರ್ದೇಶನ ಮಾಡಿದ, 2002ರಲ್ಲಿ ಬಂದ “ತುಮ್ ಸೆ ಅಚ್ಚಾ ಕೌನ್ ಹೈ” (Tum Se Achcha Kaun Hai) ಎನ್ನುವ ಪ್ರೇಮ ಕಥೆಯ ಸಿನಿಮಾ ನಕುಲ್‌ ಅವರಿಗೆ ದೊಡ್ಡ ನೇಮ್‌ – ಫೇಮ್‌ ತಂದುಕೊಟ್ಟಿತು. ಈ ಸಿನಿಮಾ ರಾತ್ರೋ ರಾತ್ರಿ ಸ್ಟಾರ್‌ ಪಟ್ಟವನ್ನು ತಂದುಕೊಟ್ಟಿತು.

ಪ್ರೇಮಾ ಕಥೆಯ ಸಿನಿಮಾದಲ್ಲಿ ನಟಿಸಿದ ನಕುಲ್‌ ಅವರನ್ನು ಜನ ಮುಂದಿನ ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್ ಇವರೇ ಎಂದು ಕರೆಯಲು ಶುರು ಮಾಡಿದರು. ಅಂದು ಮಾಧ್ಯಮಗಳಲ್ಲೂ ಇದೇ ವಿಚಾರ ಹೆಚ್ಚು ಹರಿದಾಡಿತ್ತು.

“ತುಮ್ ಸೆ ಅಚ್ಚಾ ಕೌನ್ ಹೈ”  ಸಿನಿಮಾದಲ್ಲಿ ಆರತಿ ಚಾಬ್ರಿಯಾ, ರುಚಿ ಬಫ್ನಾ, ಕಿಮ್ ಶರ್ಮಾ ಮತ್ತು ರತಿ ಅಗ್ನಿಹೋತ್ರಿ ಮುಂತಾದವರು ನಟಿಸಿದ್ದರು.

ಒಂದೇ ಒಂದು ಸಿನಿಮಾದಿಂದ ಫೇಮ್‌ ಆ ಬಳಿಕ ದಿಢೀರ್ ನಾಪತ್ತೆ.. “ತುಮ್ ಸೆ ಅಚ್ಚಾ ಕೌನ್ ಹೈ” ಸಿನಿಮಾವನ್ನು ನೋಡಿ ಜನ ಈ ಹುಡುಗ ಮುಂದೆ ಬಾಲಿವುಡ್‌ ನಲ್ಲಿ ಕಮಾಲ್‌ ಮಾಡುತ್ತಾನೆ ಎನ್ನುವ ಮಾತುಗಳನ್ನಾಡುತ್ತಿದ್ದರು. ಆದರೆ ತನ್ನ ಮೊದಲ ಸಿನಿಮಾದ ಬಳಿಕ ನಕುಲ್‌ ಇದ್ದಕ್ಕಿದ್ದಂತೆ ಇಂಡಸ್ಟ್ರಿ ಬಿಟ್ಟು ನಾಪತ್ತೆ ಆಗಿದ್ದರು.

ಕೆಲ ಸಮಯದ ಬಳಿಕ ನಕುಲ್‌ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿ ಹರಿದಾಡಲು ಪ್ರಾರಂಭವಾಯಿತು. ಅಪಘಾತವೊಂದರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಕೆಲವೆಡೆ ಹರಿದಾಡಲು ಶುರುವಾದರೆ, ಇನ್ನೂ ಕೆಲವೆಡೆ ಅನಾರೋಗ್ಯದಿಂದ ನಕುಲ್‌ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡಿತು.

ಈ ಸುದ್ದಿಗಳು ಎಲ್ಲೆಡೆ ಹಬ್ಬಿದಾಗ ಅದೊಂದು ದಿನ ನಕುಲ್‌ ಪ್ರತ್ಯಕ್ಷವಾಗಿ ತನಗೇನೂ ಆಗಿಲ್ಲ. ನಾನು ಬದುಕಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಆಧ್ಯಾತ್ಮಿಕತೆ ಮತ್ತು ಧ್ಯಾನದ ಕಡೆ ಒಲವು ಬೆಳೆಸಿಕೊಂಡಿದ್ದ ಅವರು ಇಂದು ಕೆನಡಾದಲ್ಲಿ ವಾಸಿಸುತ್ತಿದ್ದಾರೆ.

ಇಂದು ಅವರು ಕೆನಡಾದಲ್ಲಿ ‘ಡಿವೈನ್ ಲೈಟ್’ ಎನ್ನುವ ತಮ್ಮ ಯೋಗ ಕೇಂದ್ರದಲ್ಲಿ ಯೋಗವನ್ನು ಅಭ್ಯಾಸ ಮಾಡುವುದರ ಜೊತೆಗೆ ಯೋಗವನ್ನು ಕಲಿಸುವ ತರಬೇತಿದಾರರಾಗಿ ಜೀವನವನ್ನು ಸಾಗಿಸುತ್ತಿದ್ದಾರೆ.

ಚಿತ್ರರಂಗದಿಂದ ಹತ್ತಾರು ವರ್ಷದಿಂದ ದೂರವಿದ್ದರೂ ಅವರ ಒಂದು ಸಿನಿಮಾದಿಂದ ಅವರನ್ನು ಇಂದಿಗೂ ಬಾಲಿವುಡ್‌ ನಲ್ಲಿ ಗುರುತಿಸಲಾಗುತ್ತದೆ.

ಟಾಪ್ ನ್ಯೂಸ್

Manipal: ನೀರಿನಲ್ಲಿ ಮುಳುಗಿದ ಪ್ರಕರಣ, ಚಿಕಿತ್ಸೆ ಫಲಿಸದೆ ಇನ್ನೋರ್ವ ವಿದ್ಯಾರ್ಥಿಯೂ ಮೃತ್ಯು

Manipal: ನೀರಿನಲ್ಲಿ ಮುಳುಗಿದ ಪ್ರಕರಣ, ಚಿಕಿತ್ಸೆ ಫಲಿಸದೆ ಇನ್ನೋರ್ವ ವಿದ್ಯಾರ್ಥಿಯೂ ಮೃತ್ಯು

Road; ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೊಂಡ ಗುಂಡಿಗಳು; ಹೆದ್ದಾರಿ ಅಧಿಕಾರಿಗಳು ಗಮನಿಸಲಿ!

Road; ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೊಂಡ ಗುಂಡಿಗಳು; ಹೆದ್ದಾರಿ ಅಧಿಕಾರಿಗಳು ಗಮನಿಸಲಿ!

Thirthahalli: ಮದ್ಯಪಾನ ಮಾಡಿ ವಾಹನ ಚಾಲನೆ… ಚಾಲಕನಿಗೆ 10 ಸಾವಿರ ದಂಡ ವಿಧಿಸಿದ ನ್ಯಾಯಾಲಯ

Thirthahalli: ಮದ್ಯಪಾನ ಮಾಡಿ ವಾಹನ ಚಾಲನೆ… ಚಾಲಕನಿಗೆ 10 ಸಾವಿರ ದಂಡ ವಿಧಿಸಿದ ನ್ಯಾಯಾಲಯ

ARMY (2)

Jammu and Kashmir ಚುನಾವಣೆ ಕಾವು ತೀವ್ರ: ಸ್ವತಂತ್ರ ಸರಕಾರ ರಚನೆಯಾಗುವುದೇ?

ಸಿದ್ದರಾಮಯ್ಯ ಅವರ ಜನಪ್ರೀಯತೆ ಕುಗ್ಗಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ: ಸಂತೋಷ್ ಲಾಡ್

Hubballi: ಸಿದ್ದರಾಮಯ್ಯ ಅವರ ಜನಪ್ರಿಯತೆ ಕುಗ್ಗಿಸಲು ಬಿಜೆಪಿ ಹುನ್ನಾರ…: ಸಂತೋಷ್ ಲಾಡ್

20-kaup-1

Kaup ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ;ಅಧ್ಯಕ್ಷರಾಗಿ ಹರಿಣಾಕ್ಷಿ,ಉಪಾಧ್ಯಕ್ಷರಾಗಿ ಸರಿತಾ

Bangladesh Journalist: ಸರೋವರದಲ್ಲಿ ಬಾಂಗ್ಲಾದೇಶದ ಪತ್ರಕರ್ತೆಯ ಮೃತದೇಹ ಪತ್ತೆ…

Bangladesh Journalist: ಬಾಂಗ್ಲಾ ಸರೋವರದಲ್ಲಿ ಪತ್ರಕರ್ತೆಯ ಮೃತದೇಹ ಪತ್ತೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-k-a-big

#MeToo; ಹೇಮಾ ಕಮಿಟಿ ವರದಿ:ತಂದೆಯಿಂದಾದ ದೌರ್ಜನ್ಯ ನೆನಪಿಸಿಕೊಂಡ ಖುಷ್ಬು

14

Actress: “ನಾನು 3 ವರ್ಷದಿಂದ ಸೆ**ಕ್ಸ್‌ ಮಾಡಿಲ್ಲ, ಕಿಸ್‌ ಮಾಡಿಲ್ಲ..” ಎಂದ ಖ್ಯಾತ ನಟಿ.!

1-dsadsa

Bheema ಯಶಸ್ಸಿನ ಬೆನ್ನಲ್ಲೇ ಸಲಗ ಗ್ಯಾಂಗ್ ಜತೆ ದುನಿಯಾ ವಿಜಿ ಮತ್ತೊಂದು ಸಿನಿಮಾ

Aamir Khan: 59ರ ವಯಸ್ಸಿನಲ್ಲಿ 3ನೇ ಮದುವೆ ಆಗ್ತಾರಾ ಆಮೀರ್?; ನಟ ಹೇಳಿದ್ದೇನು?

Aamir Khan: 59ರ ವಯಸ್ಸಿನಲ್ಲಿ 3ನೇ ಮದುವೆ ಆಗ್ತಾರಾ ಆಮೀರ್?; ನಟ ಹೇಳಿದ್ದೇನು?

Stree 2; ಗೆಲುವಿನ ಹಾದಿಯಲ್ಲಿ ಸ್ತ್ರೀ; ಬಾಕ್ಸಾಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್

Stree 2; ಗೆಲುವಿನ ಹಾದಿಯಲ್ಲಿ ಸ್ತ್ರೀ; ಬಾಕ್ಸಾಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Manipal: ನೀರಿನಲ್ಲಿ ಮುಳುಗಿದ ಪ್ರಕರಣ, ಚಿಕಿತ್ಸೆ ಫಲಿಸದೆ ಇನ್ನೋರ್ವ ವಿದ್ಯಾರ್ಥಿಯೂ ಮೃತ್ಯು

Manipal: ನೀರಿನಲ್ಲಿ ಮುಳುಗಿದ ಪ್ರಕರಣ, ಚಿಕಿತ್ಸೆ ಫಲಿಸದೆ ಇನ್ನೋರ್ವ ವಿದ್ಯಾರ್ಥಿಯೂ ಮೃತ್ಯು

Road; ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೊಂಡ ಗುಂಡಿಗಳು; ಹೆದ್ದಾರಿ ಅಧಿಕಾರಿಗಳು ಗಮನಿಸಲಿ!

Road; ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೊಂಡ ಗುಂಡಿಗಳು; ಹೆದ್ದಾರಿ ಅಧಿಕಾರಿಗಳು ಗಮನಿಸಲಿ!

21-tumkur

Kunigal: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಗಮನ ಸೆಳೆದ ತಾ.ಪಂ ಇಓ 

Thirthahalli: ಮದ್ಯಪಾನ ಮಾಡಿ ವಾಹನ ಚಾಲನೆ… ಚಾಲಕನಿಗೆ 10 ಸಾವಿರ ದಂಡ ವಿಧಿಸಿದ ನ್ಯಾಯಾಲಯ

Thirthahalli: ಮದ್ಯಪಾನ ಮಾಡಿ ವಾಹನ ಚಾಲನೆ… ಚಾಲಕನಿಗೆ 10 ಸಾವಿರ ದಂಡ ವಿಧಿಸಿದ ನ್ಯಾಯಾಲಯ

ARMY (2)

Jammu and Kashmir ಚುನಾವಣೆ ಕಾವು ತೀವ್ರ: ಸ್ವತಂತ್ರ ಸರಕಾರ ರಚನೆಯಾಗುವುದೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.