ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ಸೃಷ್ಟಿ ಅದಕ್ಕಾಗಿ ಮೀಸಲಿಟ್ಟದ್ದು ತಮ್ಮ ಜೀವನದ ಅಮೂಲ್ಯ 2 ವರ್ಷಗಳನ್ನು

Team Udayavani, Sep 21, 2021, 3:49 PM IST

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ಲಕ್ಷ ಮಂದಿ ಬರೆಯುವ ಯುಪಿಎಸ್‌ ಪರೀಕ್ಷೆಯನ್ನು ಒಂದೇ ಪ್ರಯತ್ನದಲ್ಲಿ ತೇರ್ಗಡೆಯಾಗುವುದು ಕನಸಿನ ಮಾತು ಎಂಬ ಮಾತನ್ನು ಕೇಳುತ್ತಲೇ ಬೆಳೆದವಳು ಆಕೆ. ಆದರೆ ಮನಸ್ಸು ಧನಾತ್ಮಕ ಯೋಚನೆಯನ್ನು ಮಾತ್ರ ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಿದ್ದರಿಂದ ಆ ಮಾತುಗಳೆಲ್ಲ ಗಾಳಿಯಲ್ಲೇ ತೇಲಿ ಹೋದವು. ಆ ಮಾತುಗಳೆಲ್ಲ ಸುಳ್ಳೆಂಬಂತೆ ಆಕೆ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ ಪರೀಕ್ಷೆಯನ್ನು ತೇರ್ಗಡೆಯಾದಳು. ಅದೂ 5 ನೇ ರ್‍ಯಾಂಕ್‌ನೊಂದಿಗೆ. ಸಾಧನೆಗೆ ಪ್ರಯತ್ನ ಮತ್ತು ಏಕಾಗ್ರತೆ ಮಾತ್ರ ಮುಖ್ಯ ಎಂಬುದನ್ನು ಅವಳು ನಿರೂಪಿಸಿದ್ದಳು.

ಆಕೆಯ ಹೆಸರು ಸೃಷ್ಟಿ ದೇಶ್‌ಮುಖ್‌. ರಾಜಸ್ತಾನದ ಬೋಪಾಲ ಆಕೆಯ ಊರು. 2018ರ ಯುಪಿಎಸ್‌ ಫ‌ಲಿತಾಂಶ ಪ್ರಕಟವಾದಾಗ ಆಕೆಗೆ 23 ವಯಸ್ಸು. ಚಂಚಲ ಮನಸ್ಸಿನ ಜತೆ ಓಲಾಡುವ ಯುವ ಜನತೆಗೆ ಆಕೆ ಮಾದರಿ. ಪಡೆದದ್ದು ದೇಶದಲ್ಲಿ ಐದನೇ ರ್‍ಯಾಂಕ್‌. ಹೆತ್ತವರೇ ನಿರೀಕ್ಷಿಸದ ಸಾಧನೆಯದು. ಐಐಟಿ ಯ ಎಂಟ್ರೆನ್ಸ್‌ ಪರೀಕ್ಷೆಯನ್ನು ಪಾಸಾಗದ ಹುಡುಗಿ ಐಎಎಸ್‌ ಪರೀಕ್ಷೆಯಲ್ಲಿ 5 ನೇ ರ್‍ಯಾಂಕ್‌ ಪಡೆದಳೆಂದರೆ ನಂಬುವುದು ಕಷ್ಟವೇ. ಆದರೆ ಸಾಧನೆಗೆ ಯಾವುದೇ ಹಂಗಿಲ್ಲ.

ಬಾಲ್ಯದ ಕನಸು
ಐಎಎಸ್‌ ಅಧಿಕಾರಿ ಆಗಬೇಕೆಂಬು ಆಕೆಯ ಬಾಲ್ಯದ ಕನಸು. ಎಲ್ಲ ಮಕ್ಕಳು ತಮ್ಮ ಆಟದಲ್ಲಿ ನಿರತರಾಗಿದ್ದರೆ ಸೃಷ್ಟಿ ಮಾತ್ರ ಓದುತ್ತಿದ್ದಳು. ಕೇಳಿದರೆ ನಾನು ಐಎಎಸ್‌ ಅಧಿಕಾರಿ ಆಗಬೇಕೆನ್ನುತ್ತಿದ್ದಳು ಎಂಬುದನ್ನು ಆಕೆಯ ತಾಯಿ ನೆನಪಿಸಿಕೊಳ್ಳುತ್ತಾರೆ. ಇಂಜಿನಿಯರಿಂಗ್‌ ಪದವಿ ಮುಗಿಸಿದ ಬಳಿಕ ಐಎಎಸ್‌ ತರಬೇತಿಗೆ ಸೇರ್ಪಡೆಗೊಂಡ ಸೃಷ್ಟಿ ಅದಕ್ಕಾಗಿ ಮೀಸಲಿಟ್ಟದ್ದು ತಮ್ಮ ಜೀವನದ ಅಮೂಲ್ಯ 2 ವರ್ಷಗಳನ್ನು. ದಿನದ ಐದಾರು ಗಂಟೆಗಳನ್ನು ಕೇವಲ ಓದಿಗಾಗಿ ಮೀಸಲಿಡುತ್ತಿದ್ದರು. ಸ್ತ್ರೀ ಸಶಕ್ತೀಕರಣದ ಕುರಿತು ಒಂದಷ್ಟು ಯೋಜನೆಗಳನ್ನು ರೂಪಿಸಿಕೊಂಡಿದ್ದ ಸೃಷ್ಟಿಗೆ ಅದನ್ನು ಕಾರ್ಯ ರೂಪಕ್ಕೆ ತರಬೇಕಾದರೆ ಅಧಿಕಾರ ಬೇಕೆಂಬುದು ಸ್ಪಷ್ಟವಾಗಿತ್ತು. ಗುರಿ ಸ್ಪಷ್ಟವಿದ್ದಾಗ ಯಾವುದೇ ಪರೀಕ್ಷೆಗಳೂ ಕಷ್ಟವಾಗುವುದಿಲ್ಲ.

ದಿನ ಪತ್ರಿಕೆಯೇ ಹೆಚ್ಚು ಸಹಾಯಕ
ದಿನ ಪತ್ರಿಕೆಯನ್ನು ದಿನಾ ಓದುತ್ತಿದ್ದೆ. ಜತೆಗೆ ಇದ ಸುದ್ದಿ ವಾಹಿನಿಗಳನ್ನೂ ವೀಕ್ಷಿಸುತ್ತಿದ್ದೆ. ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿದ್ದರೆ ಸಾಧನೆಯ ಹಾದಿ ಸುಲಭ ಎನ್ನುತ್ತಾರೆ ಸೃಷ್ಟಿ. ಯುವ ಭಾರತ ಇಂದು ತಂತ್ರಜ್ಞಾನಗಳಿಗೆ ದಾಸರಾಗುತ್ತಿರುವ ಬಗ್ಗೆ ಆಕೆ ಖೇದ ವ್ಯಕ್ತ ಪಡಿಸುತ್ತಾರೆ. ತಂತ್ರಜ್ಞಾನಗಳನ್ನು ಉತ್ತಮ ಕೆಲಸಗಳಿಗೆ ಬಳಸಿಕೊಳ್ಳಬೇಕೆಂಬುದು ಸೃಷ್ಟಿಯ ಮಾತು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.