Snake Island: ಇದು ಹಾವುಗಳ ಸಾಮ್ರಾಜ್ಯ… ಈ ಪ್ರದೇಶವನ್ನು ಆಳುವುದೇ ಹಾವುಗಳು

ಇಲ್ಲಿದ್ದ ಹಾವುಗಳಿಂದ ಒಂದು ಕುಟುಂಬವೇ ನಾಶವಾಗಿದೆಯಂತೆ

ಸುಧೀರ್, Aug 26, 2023, 5:15 PM IST

Snake Island: ಇದು ಹಾವುಗಳ ಸಾಮ್ರಾಜ್ಯ… ಈ ಪ್ರದೇಶವನ್ನು ಆಳುವುದೇ ಹಾವುಗಳು

ಹಾವುಗಳ ಹೆಸರು ಕೇಳಿದರೆ ಸಾಕು ಮೈಯೆಲ್ಲಾ ಒಮ್ಮೆ ಜುಂ ಎನ್ನುತ್ತೆ…ಈಗಿನ ಕಾಲದಲ್ಲಿ ಹಾವುಗಳ ಸಂಖ್ಯೆ ವಿಪರೀತ ಕಡಿಮೆಯಾಗಿದೆ ಈ ಹಿಂದೆ ದಿನಕ್ಕೊಂದಾದರೂ ಹಾವುಗಳು ಕಣ್ಣಿಗೆ ಕಾಣುತ್ತಿತ್ತು ಆದರೆ ಈಗ ಅದು ತುಂಬಾ ವಿರಳವಾಗಿದೆ. ಆದರೆ ಇಲ್ಲೊಂದು ಪ್ರದೇಶವಿದೆ ಇಲ್ಲಿ ಹಾವು ಬಿಟ್ಟರೆ ಬೇರೆ ಯಾವುದೇ ಪ್ರಾಣಿಗಳು ಕಾಣಲು ಸಿಗುವುದಿಲ್ಲವಂತೆ. ದೇಶದ ನಾನಾ ಜಾತಿಯ ವಿಷಪೂರಿತ ಹಾವುಗಳಿಂದ ಹಿಡಿದು ಸಾಮಾನ್ಯ ವಿಷ ರಹಿತ ಹಾವುಗಳು ಕಾಣ ಸಿಗುವುದು ಈ ಪ್ರದೇಶದಲ್ಲಿ ಮಾತ್ರವಂತೆ, ಅದಕ್ಕಿಂತಲೂ ಮಿಗಿಲಾಗಿ ಇಲ್ಲಿನ ಪ್ರದೇಶವನ್ನು ಅಳುವುದೇ ಈ ಹಾವುಗಳು.

ಬನ್ನಿ ಹಾಗಾದರೆ ಹಾವುಗಳೇ ಇರುವ ಆ ಪ್ರದೇಶ ಯಾವುದು, ಯಾವೆಲ್ಲಾ ಪ್ರಭೇದದ ಹಾವುಗಳು ಇಲ್ಲಿವೆ ಜೊತೆಗೆ ಇಲ್ಲಿರುವ ಹಾವುಗಳ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ತಿಳಿದುಕೊಳ್ಳೋಣ…

ಬ್ರೆಜಿಲ್‌ನ ಸಾವೋ ಪೌಲೋದಿಂದ ಕೇವಲ 21 ಕಿಲೋಮೀಟರ್‌ ದೂರದಲ್ಲಿರುವ ಇಲ್ಹಾ ಡ ಕ್ವಿಮಾಡ ಗ್ರಾಂಡೇ ಎಂಬ ಹೆಸರಿನ ಈ ದ್ವೀಪ ಬಹುಶಃ ಮಾನವನಿಗೆ ಕಾಲಿಡಲು ಸಾಧ್ಯವಾಗದೇ ಇರುವ ಕೆಲವೇ ಕೆಲವು ವಿಸ್ಮಯ ಪ್ರದೇಶಗಳಲ್ಲಿ ಇದೂ ಒಂದಿರಬೇಕು ಹಾಗಾಗಿ ಇದನ್ನು ಹಾವಿನ ದ್ವೀಪ ಎಂದು ಹೆಸರುವಾಸಿಯಾಗಿದೆ. ಅಷ್ಟು ಮಾತ್ರವಲ್ಲದೆ ಹಾವುಗಳೇ ತುಂಬಿರುವುದರಿಂದ ಈ ದ್ವೀಪ ಜನಸಂಪರ್ಕದಿಂದ ಕೂಡ ದೂರ ಉಳಿದುಬಿಟ್ಟಿದೆ.

ಈ ಐಲ್ಯಾಂಡ್ ನಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಹಾವುಗಳು ಕಾಣಸಿಗುತ್ತವೆಯಂತೆ ವಿಶ್ವದ ಅತ್ಯಂತ ವಿಷಕಾರಿ ಹಾವುಗಳು ಎಲ್ಲಾದರೂ ಇದೆ ಎಂದಿದ್ದರೆ ಅವು ಇಲ್ಲಿ ಮಾತ್ರ. ಗೋಲ್ಡನ್ ಲ್ಯಾನ್ಸ್ ಹೆಡ್ ಹಾವು ಸೇರಿದಂತೆ ಸಾವಿರಾರು ಪ್ರಭೇದದ ಹಾವುಗಳು ಇಲ್ಲಿವೆಯಂತೆ.

ಅಂದಹಾಗೆ, ಸ್ನೇಕ್ ಐಲ್ಯಾಂಡ್‌ನ ನಿಜವಾದ ಹೆಸರು ಇಲ್ಹಾ ಡ ಕ್ವಿಮಡಾ ಗ್ರಾಂಡೆ. ಇದು ಸಾವೊ ಪಾಲೊದಿಂದ ಕೇವಲ 90 ಮೈಲುಗಳಷ್ಟು ದೂರದಲ್ಲಿದೆ. ಜನರು ದ್ವೀಪಕ್ಕೆ ಹೋಗಲು ಸಾಧ್ಯವಿಲ್ಲ. ಬ್ರೆಜಿಲಿಯನ್ ನೌಕಾಪಡೆಯು ತಮ್ಮ ಸ್ವಂತ ಸುರಕ್ಷತೆ ಮತ್ತು ಹಾವುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾರು ದ್ವೀಪಕ್ಕೆ ಭೇಟಿ ನೀಡಲು ಅನುಮತಿಸಬೇಕೆಂದು ನಿರ್ಧರಿಸುತ್ತಾರೆ. ಆದಾಗ್ಯೂ, ಕೆಲವು ವಿಜ್ಞಾನಿಗಳು ಮತ್ತು ನೌಕಾ ಅಧಿಕಾರಿಗಳು ಮಾತ್ರ ದ್ವೀಪಕ್ಕೆ ಭೇಟಿ ನೀಡಬಹುದು.

ಜನ ಸಾಮಾನ್ಯರ ಪ್ರವೇಶಕ್ಕೆ ಅವಕಾಶವಿಲ್ಲ:
ಬ್ರೆಜಿಲಿಯನ್ ನೌಕಾಪಡೆ ಇಲ್ಲಿನ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದು ದ್ವೀಪಕ್ಕೆ ಜನ ಸಾಮಾನ್ಯರಿಗೆ ಪ್ರವೇಶ ನಿಷೇಧಿಸಲಾಗಿದೆ, ಪರಿಸರ ಅಧ್ಯಯನ ನಡೆಸುವ ಸಂಶೋಧಕರಿಗೆ ಹಾಗೂ ನೌಕಾಪಡೆಯ ಸಿಬಂದಿಗಳು ಮಾತ್ರ ತಮ್ಮ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪ್ರವೇಶಿಸಲು ಇಲ್ಲಿನ ಸರಕಾರ ಅನುಮತಿ ನೀಡಿದೆ.

ಮಾಂಸವನ್ನೇ ಕರಗಿಸಬಲ್ಲ ವಿಷಪೂರಿತ ಹಾವುಗಳು :
ಈ ದ್ವೀಪದಲ್ಲಿ ಗೋಲ್ಡನ್ ಲ್ಯಾನ್ಸ್ಹೆಡ್ ಮತ್ತು ಬೋತ್ರೋಪ್ಸ್ ಇನ್ಸುಲಾರಿಸ್ ಎಂಬ ವಿಷಪೂರಿತ ಹಾವುಗಳು ವಾಸಿಸುತ್ತಿದ್ದು ಇವುಗಳ ಮುಖ್ಯ ಆಹಾರ ಪಕ್ಷಿಗಳು, ಈ ಹಾವುಗಳು ಒಮ್ಮೆ ಕುಟುಕಿದರೆ ಪಕ್ಷಿ ಸತ್ತೇ ಹೋಗುತ್ತದೆ ಅಷ್ಟು ಮಾತ್ರವಲ್ಲದೆ ಮನುಷ್ಯನಿಗೆ ಕಚ್ಚಿದರೂ ದೇಹ ಮತ್ತು ಚರ್ಮವನ್ನು ಕರಗಿಸುವ ಶಕ್ತಿ ಈ ಹಾವಿನ ವಿಷಕ್ಕೆ ಇದೆ ಎನ್ನಲಾಗಿದೆ. ಪಕ್ಷಿಗಳು ಈ ದ್ವೀಪಕ್ಕೆ ಬರಲು ಹೆದರುತ್ತವೆಯಂತೆ, ಅಲ್ಲದೆ ಪಕ್ಷಿಗಳು ತಮ್ಮ ವಲಸೆ ಹೋಗುವ ಸಂದರ್ಭದಲ್ಲಿ ಈ ದ್ವೀಪದಲ್ಲಿ ವಿಶ್ರಾಂತಿ ಪಡೆಯಲು ಬಂದಾಗ ವಿಷಪೂರಿತ ಹಾವುಗಳ ದಾಳಿಗೆ ತುತ್ತಾಗುತ್ತವೆಯಂತೆ.

ಕಾಲಿಟ್ಟಲ್ಲೆಲ್ಲಾ ಹಾವುಗಳೇ:
ಈ ದ್ವೀಪದಲ್ಲಿ ಎಲ್ಲಿ ನೋಡಿದರು ಹಾವುಗಳೇ ಕಾಣುತ್ತವೆಯಂತೆ ಸಂಶೋಧಕರು ಹೇಳುವ ಪ್ರಕಾರ ಇಲ್ಲಿ ಪ್ರತಿ ಚದರ ಮೀಟರ್‌ಗೆ 5 ಹಾವುಗಳು ಸಿಗುತ್ತವೆಯಂತೆ. ಇಲ್ಲಿಯವರೆಗೆ 2000- 4000 ಜಾತಿಯ ಹಾವುಗಳನ್ನು ಈ ದ್ವೀಪದಲ್ಲಿ ಗುರುತಿಸಲಾಗಿದೆ ಎಂದು ಹೇಳಾಗುತ್ತಿದೆ.

ಹಾವುಗಳಿಂದ ಕುಟುಂಬವೇ ನಾಶ:
ಈ ದ್ವೀಪದಲ್ಲಿ ಲೈಟ್ ಹೌಸ್ ಕೂಡ ಇದೆ. ಒಂದಾನೊಂದು ಕಾಲದಲ್ಲಿ ಈ ಜಾಗದಲ್ಲಿ ಜನ ವಾಸಿಸುತ್ತಿದ್ದರು ಎನ್ನುವುದಕ್ಕೆ ಈ ಲೈಟ್ ಹೌಸ್ ಸಾಕ್ಷಿಯಾಗಿದೆ. ಲೈಟ್‌ಹೌಸ್ ಕೀಪರ್ ಮತ್ತು ಅವರ ಕುಟುಂಬವು 1909 ಮತ್ತು 1920 ರ ನಡುವೆ ಸ್ನೇಕ್ ಐಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಕ್ರಮೇಣ ಈ ಹಾವುಗಳ ದಾಳಿಯಿಂದ ಈ ಕುಟುಂಬವೂ ನಾಶವಾಯಿತು ಎಂದು ಹೇಳಲಾಗಿದೆ.

110 ಎಕರೆ ಪ್ರದೇಶ, 4 ಲಕ್ಷಕ್ಕೂ ಹೆಚ್ಚು ಹಾವುಗಳು:
110 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ದ್ವೀಪದಲ್ಲಿ ಸುಮಾರು 4,30,000ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಇವೆಯೆಂದು ಗುರುತಿಸಲಾಗಿದೆ. ಈ ದ್ವೀಪದ ಗಾತ್ರಕ್ಕೆ ಹೋಲಿಸಿದರೆ ಹಾವುಗಳ ಸಂಖ್ಯೆಯೇ ಅಧಿಕ. ಒಮ್ಮೆ ಯೋಚಿಸಿ ಇಲ್ಲಿಗೆ ಪ್ರವೇಶ ಮಾಡಿದವರು ಮತ್ತೆ ಹಿಂದೆ ಬರುವ ಸಾಧ್ಯತೆ ಇದೆಯಾ ಎಂಬುದು.

– ಸುಧೀರ್ ಪರ್ಕಳ

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು

“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು

1-qewewq

Yakshagana ರಂಗದಿಂದ ಮರೆಯಾದ ಮೃದು ಮಧುರ ಮಾತುಗಳ ಕುಂಬಳೆ ಶ್ರೀಧರ್ ರಾವ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

1-qe

Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.