40 ಉಪಗ್ರಹಗಳನ್ನು ಸುಟ್ಟ ಸೌರಮಾರುತ…ಏನಿದು ಸೌರಮಾರುತ?


Team Udayavani, Feb 11, 2022, 11:10 AM IST

40 ಉಪಗ್ರಹಗಳನ್ನು ಸುಟ್ಟ ಸೌರಮಾರುತ

ಸ್ಪೇಸ್‌ ಎಕ್ಸ್‌ ಸಂಸ್ಥೆಯಿಂದ ಕಳೆದ ವಾರ ಉಡಾವಣೆಗೊಂಡಿದ್ದ ಸುಮಾರು 49 ಲಘು ಉಪಗ್ರಹಗಳ ಗುತ್ಛದಲ್ಲಿ (ಸ್ಟಾರ್‌ ಲಿಂಕ್‌ ಉಪಗ್ರಹಗಳು) 40 ಉಪಗ್ರಹಗಳು ಬಾಹ್ಯಾಕಾಶದಲ್ಲಿ ಹಠಾತ್ತಾಗಿ ಸೃಷ್ಟಿಯಾದ ಸೌರಮಾರುತಗಳಿಂದಾಗಿ ನಾಶಗೊಂಡಿವೆ. ಸೌರ ಮಾರುತಗಳೆದ್ದಾಗ, ಈ ಉಪಗ್ರಹಗಳು ಇನ್ನೂ ಪ್ರಾಥಮಿಕ ಕಕ್ಷೆಯಲ್ಲೇ ಸುತ್ತುತ್ತಿದ್ದವು. ಯಾವ ಕಾರ್ಯಕ್ಕಾಗಿ ಈ ಉಪಗ್ರಹಗಳನ್ನು ಕಳುಹಿಸಲಾಗಿತ್ತು, ಉಳಿದ ಉಪಗ್ರಹಗಳ ಪರಿಸ್ಥಿತಿ ಏನಾಗಿದೆ, ಅಷ್ಟಕ್ಕೂ ಸೌರ ಮಾರುತಗಳೆಂದರೇನು ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಉಪಗ್ರಹಗಳ ಕಾರ್ಯ
ಸ್ಪೇಸ್‌ ಎಕ್ಸ್‌ ಸಂಸ್ಥೆಯ ಮಾಲಕ ಎಲಾನ್‌ ಮಸ್ಕ್, ಹಲವಾರು ಉದ್ಯಮಗಳನ್ನು ನಡೆಸುತ್ತಿದ್ದಾರೆ. ಅವುಗಳಲ್ಲೊಂದು ಸ್ಟಾರ್‌ಲಿಂಕ್‌. ಇದು, ಇಂಟರ್ನೆಟ್‌ ಸೇವೆಗಳನ್ನು ಒದಗಿಸುತ್ತದೆ. ಈ ಸೇವೆಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಫೆ. 3ರಂದು ಸ್ಪೇಸ್‌ ಎಕ್ಸ್‌ ಕಂಪೆನಿಯ ಫಾಲ್ಕನ್‌ 9 ರಾಕೆಟ್‌ನಲ್ಲಿ 49 ಲಘು ಉಪಗ್ರಹಗಳನ್ನಿಟ್ಟು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಸ್ಪೇಸ್‌ ಎಕ್ಸ್‌ ಸಂಸ್ಥೆ, ಇಂಥ ನೂರಾರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಕಳೆದ ವಾರ 49 ಉಪಗ್ರಹಗಳನ್ನು ಕಳುಹಿಸಿತ್ತು.

220 ಕಿ.ಮೀ. ಎತ್ತರದಲ್ಲಿ ಆದ ಅವಘಡ
ಕಳೆದ ವಾರ ಕಳುಹಿಸಲಾಗಿದ್ದ 49 ಉಪಗ್ರಹಗಳು ತಮ್ಮ ಪ್ರಾಥಮಿಕ ಕಕ್ಷೆಗೆ ಸೇರ್ಪಡೆಗೊಂಡಿದ್ದವು. ಈ ಕಕ್ಷೆ ಭೂಮಿಯ ಮೇಲ್ಮೆ„ಯಿಂದ ಸುಮಾರು 240 ಕಿ.ಮೀ. ಎತ್ತರದಲ್ಲಿದೆ. ಇವು ಮುಂದಕ್ಕೆ ಭೂಮಿಯಿಂದ 550 ಕಿ.ಮೀ. ಎತ್ತರದಲ್ಲಿರುವ ಕಕ್ಷೆಯನ್ನು ತಲುಪಬೇಕಿತ್ತು. ಆದರೆ ಅಷ್ಟರಲ್ಲಿ ಸೂರ್ಯನಿಂದ ಉಂಟಾದ ಸೌರ ಮಾರುತಗಳು ಅಪ್ಪಳಿಸಿದ ಪರಿಣಾಮ ಅವು ಉರಿದು ಹೋಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸೌರ ಮಾರುತಗಳಲ್ಲಿ ನಾಲ್ಕು ವಿಧ
ಸೌರ ಮಾರುತಗಳಲ್ಲಿ ಸೋಲಾರ್‌ ಫ್ಲೇರ್‌, ಕೊರೊನಲ್‌ ಮಾಸ್‌ ಎಜೆಕ್ಷನ್‌, ಜಿಯೋಮೆಟ್ರಿಕ್‌ ಸ್ಟಾರ್ಮ್ ಹಾಗೂ ಸೋಲಾರ್‌ ಪಾರ್ಟಿ ಕಲ್‌ ಇವೆಂಟ್‌ ಎಂದು ನಾಲ್ಕು ವಿಧಗಳಿವೆ. ಸೂರ್ಯನ ಮೇಲ್ಮೆ„ಯಲ್ಲಿ ಆಗುವ ಭಾರೀ ದೊಡ್ಡ ಸ್ಫೋಟದಿಂದ ಏಳು ಮಾರುತಗಳನ್ನು “ಸೋಲಾರ್‌ ಫ್ಲೇರ್‌’ ಎಂದು ಕರೆಯಲಾಗುತ್ತದೆ. ಸೂರ್ಯನ ಮೇಲ್ಮೈಯಲ್ಲಿರುವ ಪ್ಲಾಸ್ಮಾ ಸ್ಫೋಟದಿಂದ ಏಳುವ ಅಲೆಗಳನ್ನು “ಸೋಲಾರ್‌ ಮಾಸ್‌ ಎಜೆಕ್ಷನ್‌’ ಎಂದು ಕರೆಯುತ್ತಾರೆ. ಇವು ಕೆಲವೊಮ್ಮೆ “ಸೋಲಾರ್‌ ಫ್ಲೇರ್‌’ ಅಲೆಗಳನ್ನೂ ಹೊಂದಿರುತ್ತವೆ. ಒಮ್ಮೊಮ್ಮೆ ಸೂರ್ಯನ ಹಾಗೂ ಭೂಮಿಯ ಗುರುತ್ವಾಕರ್ಷಣ ರೇಖೆಗಳ ಸಮಾಗಮದಿಂದ ಏಳುವ ಅಲೆಗಳಿಗೆ “ಜಿಯೋಮೆಟ್ರಿಕ್‌ ಸ್ಟಾರ್ಮ್’ ಎಂದು ಹೆಸರು. ಇನ್ನು, ಸೂರ್ಯನ ಮೇಲ್ಮೈಯಲ್ಲಿರುವ ಶಕ್ತಿಯ ಕಣಗಳು ಬಿರುಗಾಳಿಯಂತೆ ಚದುರುವುದಕ್ಕೆ “ಸೋಲಾರ್‌ ಪಾರ್ಟಿಕಲ್‌ ಇವೆಂಟ್‌’ ಎಂದು ಕರೆಯುತ್ತಾರೆ.

40 ಉಪಗ್ರಹ ಸುಟ್ಟಿದ್ದು ಇದೇ ಅಲೆ!
ಸ್ಪೇಸ್‌ ಎಕ್ಸ್‌ನ 40 ಉಪಗ್ರಹಗಳನ್ನು ಸುಟ್ಟಿರುವುದು “ಕೊರೊನಲ್‌ ಮಾಸ್‌ ಎಜೆಕ್ಷನ್‌’ (ಸಿಎಂಇ) ಮಾದರಿಯ ಮಾರುತ. ಇವು, ಸೂರ್ಯನ ಹೊರವಲಯವಾದ ಕೊರೊನಾದಲ್ಲಿರುವ ಪ್ಲಾಸ್ಮಾ ಹಾಗೂ ಸೂರ್ಯನನ್ನು ಸುತ್ತುವರಿದಿರುವ ಗುರುತ್ವಾಕರ್ಷಣ ಶಕ್ತಿವಲಯಗಳಿಂದ ಹೊರಹೊಮ್ಮುವ ದೈತ್ಯ ಅಲೆಗಳು.

ಭೂಮಿಯ ಮೇಲೆ ಹಾದು ಹೋಯಿತೇ?
40 ಉಪಗ್ರಹಗಳನ್ನು ನಾಶಪಡಿಸಿದ ಸೌರ ಮಾರುತ, ಭೂಮಿಯನ್ನು ಫೆ. 9-10ರಂದು ಅಪ್ಪಳಿಸುವ ಸಾಧ್ಯತೆಗಳಿದ್ದವು. ಭಾರತೀಯ ಕಾಲ ಮಾನದ ಪ್ರಕಾರ, ಫೆ. 9ರ ಬೆಳಗ್ಗೆ 11:18ರಿಂದ ಫೆ. 10ರ ಮಧ್ಯಾಹ್ನ 3:23ರೊಳಗೆ ಭೂಮಿಯ ಅಂತರಿಕ್ಷವನ್ನು ಹಾದುಹೋಗುವ ಸಾಧ್ಯತೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದವು. ಈ ಮಾರುತ ಹಾದುಹೋಗಿರುವ ಬಗ್ಗೆ ವಿಜ್ಞಾನಿಗಳು ಸ್ಪಷ್ಟಪಡಿಸಬೇಕಿದೆ.

ಏನಿದು ಸೌರಮಾರುತ?
ಇವನ್ನು ಇಂಗ್ಲಿಷ್‌ನಲ್ಲಿ ಸೋಲಾರ್‌ ಸ್ಟಾರ್ಮ್ ಎಂದು ಕರೆಯುತ್ತಾರೆ. ಇದನ್ನು ಅತ್ಯುಷ್ಣ ಹವೆಯ ದೈತ್ಯ ಅಲೆಯೆಂದರೂ ತಪ್ಪಾಗಲಾರದು. ಭೂಮಿಯ ಮೇಲೆ ಅಗ್ನಿಪರ್ವತಗಳು ಸ್ಫೋಟ ಗೊಳ್ಳುವಂತೆ ಸೂರ್ಯನ ಮೇಲ್ಮೆ„ಯಲ್ಲಿ ಆಗುವ ರಾಸಾಯನಿಕ ಕ್ರಿಯೆಗಳಲ್ಲಿ ಆಗುವ ಸ್ಫೋಟದ ಮೂಲಕ ಈ ದೈತ್ಯ ಅಲೆಗಳು ಉತ್ಪತ್ತಿಯಾಗುತ್ತವೆ. ಈ ಅಲೆಗಳು ಇಡೀ ಸೌರಮಂಡಲದ ಮೇಲೆ ತನ್ನ ದುಷ್ಪರಿಣಾಮವನ್ನು ಬೀರಬಲ್ಲವು.

ಭಾರತೀಯ ತಜ್ಞರು ಎಚ್ಚರಿಸಿದ್ದರು!
ಭಾರತೀಯ ವೈಜ್ಞಾನಿಕ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್‌) ಸಂಸ್ಥೆಯಡಿ ಕಾರ್ಯನಿರ್ವಹಿಸುವ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಇನ್‌ ಸ್ಪೇಸ್‌ ಸೈನ್ಸಸ್‌ನ(ಸಿಇಎಸ್‌ಎಸ್‌) ತಜ್ಞರು, ಫೆ. 6ರಂದು ಒಂದು ಟ್ವೀಟ್‌ ಮಾಡಿ, ಸೂರ್ಯನ ದಕ್ಷಿಣ ಧ್ರುವದ ಮೇಲ್ಮೆ„ನಿಂದ ಒಂದು ಉಂಗುರಾಕಾರದ ಅಲೆಯೊಂದು ಎದ್ದಿದೆ ಎಂದು ಜಾಗತಿಕ ವಿಜ್ಞಾನಿಗಳ ಸಮುದಾಯಕ್ಕೆ ತಿಳಿಸಿದ್ದರು. ಈ ಅಲೆಯನ್ನು ಸೋಲಾರ್‌ ಆ್ಯಂಡ್‌ ಹೀಲಿಯೋಸ್ಪೆರಿಕ್‌ ಅಬ್ಸರ್ವೇಟರಿ (ಎಸ್‌ಒಎಚ್‌ಒ) ಮಿಷನ್‌ನ ಲಾರ್ಜ್‌ ಆ್ಯಂಗಲ್‌ ಆ್ಯಂಡ್‌ ಸ್ಪೆಕ್ಟೋಮೆಟ್ರಿಕ್‌ ಕೊರೊನಾಗ್ರಾಫ್ (ಎಲ್‌ಎಎಸ್‌ಸಿಒ) ಸಂಸ್ಥೆಗಳು ದಾಖಲಿಸಿವೆ ಎಂದೂ ಸಿಐಎಸ್‌ಎಸ್‌ ತಜ್ಞರು ತಿಳಿಸಿದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.