StruggleTo Success:ನೀಲಿ ತಾರೆ ಟು ಸೂಪರ್‌ ಸ್ಟಾರ್‌ ನಟಿಯ ಪಯಣ-ಕರೆಂಜಿತ್‌ Untold Story!


Team Udayavani, Aug 31, 2024, 6:25 PM IST

1

ಸಿನಿಮಾರಂಗದಲ್ಲಿ ಅವಕಾಶದ ಬೆನ್ನೇರಿ ಯಶಸ್ಸಿನ ಮೆಟ್ಟಿಲನ್ನು ಹತ್ತುವ ಸಾಲಿನಲ್ಲಿ ನೂರಾರು ಮಂದಿ ಪ್ರಯತ್ನದಲ್ಲಿ ನಿರತರಾಗಿರುತ್ತಾರೆ. ಇಂದು ಯಶಸ್ಸು ಸಾಧಿಸಿ ಉತ್ತುಂಗಕ್ಕೇರಿರುವ ಕಲಾವಿದರು ಕ್ಯಾಮೆರಾ ಹಿಂದೆ ಪಟ್ಟಿರುವ ಕಷ್ಟ ದೊಡ್ಡ ಪರದೆ ಮೇಲೆ ಅವರನ್ನು ನೋಡಿ ಖುಷಿ ಪಡುವ ನಮ್ಮಂತ ಪ್ರೇಕ್ಷಕರಿಗೆ ಗೊತ್ತಿರುವುದಿಲ್ಲ.

ಒಂದು ಕಾಲದಲ್ಲಿ ದಿನ ಕಳೆಯಲು ಪೇಪರ್‌ ಮಾರುತ್ತಿದ್ದ ಕಲಾವಿದೆ ಇಂದು ಬಾಲಿವುಡ್‌ ಟಾಪ್‌ ಸ್ಟಾರ್‌ ಆಗಿ ಮಿಂಚಿರುವ ಕಥೆಯಿದು. ಆದರೆ ಆಕೆಯ ಸಾಧನೆಯ ಹಾದಿಯಲ್ಲಿ ನಡೆದು ಬರುವಾಗ ಸಿಕ್ಕ ಕಲ್ಲುಮುಳ್ಳು ಒಂದೆಡೆರೆಡಲ್ಲ.

ನಾವು ಹೇಳ್ತಾ ಇರೋದು ಬಾಲಿವುಡ್‌ನಲ್ಲಿ ʼಬೇಬಿ ಡಾಲ್‌ʼ ಪಡ್ಡೆ ಹುಡುಗರ ಮನದಲ್ಲಿ ಚಿಟ್ಟೆಯಂತೆ ಹಾರಿದ ಮೋಹಕ ಬೆಡಗಿ ಸನ್ನಿ ಲಿಯೋನ್ ಬಗ್ಗೆ. ಕೆನಡಾದಲ್ಲಿ ಜನಿಸಿದ ಸನ್ನಿ ಲಿಯೋನ್‌ ಭಾರತೀಯ ಸಿನಿಮಾರಂಗದಲ್ಲಿ ಇಂದು ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು.

ಆರಂಭಿಕ ಜೀವನ..

ಮೇ 13, 1981 ರಂದು ಕೆನಡಾದ ಒಂಟಾರಿಯೊದಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಸನ್ನಿ ಲಿಯೋನ್‌ ಅವರ ಬಾಲ್ಯ ನಾಮ ಕರೆಂಜಿತ್ ಕೌರ್ ವೋಹ್ರಾ.( ಸನ್ನಿ ಲಿಯೋನ್‌ – ಸ್ಟೇಜ್‌ ನೇಮ್)‌ ಟಿಬೆಟ್‌ನಿಂದ ಬಂದು ದೆಹಲಿಯಲ್ಲಿ ಬೆಳೆದ ತಂದೆ ಹಿಮಾಚಲ ಪ್ರದೇಶದ ತಾಯಿ ಆರೈಕೆಯಲ್ಲಿ ಬೆಳೆದ ಅವರು ವಯಸ್ಕ ಚಿತ್ರರಂಗಕ್ಕೆ ಬಂದಾಗ ತನ್ನ ನಾಮವನ್ನು ಸನ್ನಿ ಲಿಯೋನ್‌ ಎಂದು ಬದಲಾಯಿಸಿಕೊಂಡರು.

ʼಸನ್ನಿ ಲಿಯೋನ್‌ʼ ಎನ್ನುವ ಹೆಸರು ಬಂದದ್ದು ಹೇಗೆ..?;  ‘ಸನ್ನಿ’ ಎನ್ನುವುದು ಕರೆನ್ಜೀತ್ ಕೌರ್ ಸಹೋದರನ ಹೆಸರು. ಸಂದೀಪ್‌ ಸಿಂಗ್‌ ಎನ್ನುವ ಸಹೋದರನನ್ನು ಕುಟುಂಬದಲ್ಲಿ ಸನ್ನಿ ಎಂದು ಕರೆಯುತ್ತಿದ್ದರು. ಮ್ಯಾಗ್‌ಜಿನ್‌ ನಲ್ಲಿ ನನ್ನ ಹೆಸರು ಮರೆಮಾಚಲು ನಾನು ʼಸನ್ನಿʼ ಹೆಸರನ್ನು ಬಳಸಿಕೊಂಡೆ ಎಂದು ಸಂದರ್ಶನವೊಂದರಲ್ಲಿ ಸನ್ನಿ ಲಿಯೋನ್‌ ಹೇಳಿದ್ದರು.

ಪೇಪರ್‌ ಮಾರಾಟ ಮಾಡುತ್ತಿದ್ದ ಆ ದಿನಗಳು.. :

13ನೇ ವಯಸ್ಸಿನಲ್ಲಿ ಸನ್ನಿಯ ಕುಟುಂಬವು ಮಿಚಿಗನ್‌ನ ಫೋರ್ಟ್ ಗ್ರಾಟಿಯೊಟ್‌ಗೆ ಸ್ಥಳಾಂತರಗೊಂಡಿತು. ಆ ನಂತರ ಕ್ಯಾಲಿಫೋರ್ನಿಯಾದ ಲೇಕ್ ಫಾರೆಸ್ಟ್‌ಗೆ ಸ್ಥಳಾಂತರಗೊಂಡು ತನ್ನ ಅಜ್ಜ – ಅಜ್ಜಿಯ ಆರೈಕೆಯಲ್ಲಿ ಬೆಳದರು.

ತಂದೆ – ತಾಯಿಗೆ ನೆರವಾಗಲೆಂದು ಚಿಕ್ಕವಯಸ್ಸಿನಲ್ಲೇ ದುಡಿಮೆಗೆ ಕಾಲಿಟ್ಟ ಅವರು, ಮೊದಲಿಗೆ ಪೆಟ್ರೋಲ್‌ ಬಂಕ್‌ ಗಳಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದವರೆಗೆ ಜರ್ಮನ್ ಬೇಕರಿ ಮತ್ತು ನಂತರ ತೆರಿಗೆ ಮತ್ತು ಪೆನ್ಷನ್ ಸಂಸ್ಥೆಯಲ್ಲಿ ಕೆಲಸ ಮಾಡಿದರು. ಬಿಡುವಿನ ವೇಳೆ ಪೇಪರ್‌ ಮಾರಾಟ ಮಾಡುವ ಕೆಲಸ ಹಾಗೂ ಬೇಬಿ ಸಿಟ್ಟಿಂಗ್‌ ಕೆಲಸವನ್ನು ಮಾಡಿ ತಂದೆ – ತಾಯಿಗೆ ನೆರವಾಗುತ್ತಿದ್ದರು.

ನೋಡಲು ಅಂದವಾಗಿದ್ದ ಸನ್ನಿ ಲಿಯೋನ್‌ ಕೆಲಸದ ವೇಳೆ ಅದೊಂದು ದಿನ ಪೆಂಟ್‌ಹೌಸ್ ಮ್ಯಾಗಜೀನ್‌ಗಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳಿಂದ ಅವರಿಗೆ ವಯಸ್ಕ(ನೀಲಿ) ಚಿತ್ರರಂಗದಿಂದ ಆಫರ್‌ ಗಳು ಬರಲು ಶುರುವಾಗುತ್ತದೆ. ಮಾಡೆಲಿಂಗ್ ಆಫರ್ ಬರುವ ಮುನ್ನ ಸನ್ನಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು.

2003ರಲ್ಲಿ ಅವರು ವಿವಿದ್ ಎಂಟರ್‌ ಟೈನ್‌ ಮೆಂಟ್ ಎಂಬ ನೀಲಿ ಚಿತ್ರ ತಯಾರಿ ವಿಡಿಯೋ ತಯಾರಿಕಾ ಸಂಸ್ಥೆಯೊಂದಿಗೆ 3 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ನೀಲಿ ಚಿತ್ರ ಉದ್ಯಮಕ್ಕೆ ಕಾಲಿಟ್ಟಿದ್ದರು.

ನೀಲಿ ಚಿತ್ರರಂಗ ಪ್ರವೇಶ  ಪಡೆದ ವಿಚಾರ ಸನ್ನಿ ಲಿಯೋನ್‌ ಅವರ ಕುಟುಂಬಕ್ಕೆ ಇದು ಧಕ್ಕೆ ತರುವಂತೆ ಮಾಡಿತ್ತು. ಈ ಎಲ್ಲ ಸವಾಲುಗಳ ನಡುವೆಯೇ ಸನ್ನಿ ರಾತ್ರೋ ರಾತ್ರಿ ವಯಸ್ಕ ಚಿತ್ರರಂಗದಲ್ಲಿ ಖ್ಯಾತಿಯನ್ನು ಗಳಿಸಲು ಶುರು ಮಾಡಿದರು. ಅವರ ಒಂದೊಂದು ವಯಸ್ಕ ವಿಡಿಯೋಗಳು ಮಿಲಿಯನ್‌ ಗಟ್ಟಲೆ ವೀಕ್ಷಣೆ ಕಾಣುವ ಮೂಲಕ ಅವರು ಆ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಗಳಿಸಿ ಅವರ ಲೈಫ್‌ ಹೈಫೈ ಶೈಲಿಗೆ ಹೊಂದಿಕೊಂಡಿತು.

2009 ರಿಂದ ತಮ್ಮ ಸಂಗಾತಿ ಡೇನಿಯಲ್ ವೇಬರ್ ಜೊತೆ ಸೇರಿ ತಮ್ಮದೇ ಸಂಸ್ಥೆ ಸ್ಥಾಪಿಸಿ ನೀಲಿ ಚಿತ್ರಗಳಲ್ಲಿ ನಟಿಸಿ ನಿರ್ಮಿಸಿತೊಡಗಿದರು. ಇವರ ವಿಡಿಯೋಗಳಿಗೆ ಭಾರತೀಯ ಮೂಲದವರೇ ಹೆಚ್ಚು ವೀಕ್ಷಕರಾದ ಕಾರಣ ಅವರ ಆದಾಯ ಭಾರತದಿಂದಲೇ ಹೆಚ್ಚಾಗಿ ಬರುತ್ತಿತ್ತು.

ಮನೆಯವರ ವಿರೋಧದ ನಡುವೆಯೇ ವಯಸ್ಕ ಕ್ಷೇತ್ರದಲ್ಲಿ ತೊಡಗಿಕೊಂಡ ಸನ್ನಿ ಲಿಯೋನ್‌ 2013ರಲ್ಲಿ ಈ ಕ್ಷೇತ್ರಕ್ಕೆ ಗುಡ್‌ ಬೈ ಹೇಳಿ ಭಾರತದಲ್ಲೇ ನೆಲೆಸಿದರು.

ರಿಯಾಲಿಟಿ ಶೋನಿಂದ ಬಾಲಿವುಡ್‌ಗೆ ಎಂಟ್ರಿ..: ನೀಲಿ ಚಿತ್ರತಾರೆಯಾಗಿ ಗುರುತಿಸಿಕೊಂಡಿದ್ದ ಸನ್ನಿ ಲಿಯೋನ್‌ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್‌ ಬಾಸ್‌ ಹಿಂದಿ ಸೀಸನ್‌ -5ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದು ದೊಡ್ಡ ಸಂಚಲನ ಸೃಷ್ಟಿಸಿತ್ತು. ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಬಿಗ್‌ ಬಾಸ್‌ ನಲ್ಲಿ ಸನ್ನಿ ಲಿಯೋನ್‌ ಅವರ ವ್ಯಕ್ತಿತ್ವಕ್ಕೆ ಅಭಿಮಾನಿಗಳಾಗಿದ್ದರು. ದೊಡ್ಮನೆಯೊಳಗೆ ಎಂಟ್ರಿ ಆಗಿದ್ದ ನಿರ್ದೇಶಕ ಮಹೇಶ್‌ ಭಟ್‌ ಸನ್ನಿ ಲಿಯೋನ್‌ ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದಿದ್ದರು.

ಸಾಲು ಸಾಲು ಅವಕಾಶ.. ಸೋತರೂ ಮಿಂಚಿದ್ದ ಸನ್ನಿ..

ಅದರಂತೆ ಪೂಜಾ ಭಟ್‌ ನಿರ್ದೇಶನದ ʼಜಿಸ್ಮ್-2ʼ ಸಿನಿಮಾದಲ್ಲಿ ಸನ್ನಿ ಲಿಯೋನ್‌ ನಟಿಸಿದ್ದರು. ಈ ಸಿನಿಮಾ ಕಮರ್ಷಿಯಲ್‌ ಹಿಟ್‌ ಆದ ಬಳಿಕ ಸನ್ನಿ ಲಿಯೋನ್‌ ‌ʼಜ್ಯಾಕ್ ಪಾಟ್ʼ, ʼಏಕ್ ಪಹೇಲಿ ಲೀಲಾʼ, ʼಬಲ್ವಿಂದರ್ ಸಿಂಗ್ ಫೇಮಸ್ ಹೋ ಗಯಾʼ, ʼಹೇಟ್ ಸ್ಟೋರಿ- 2ʼ, ʼರಾಗಿಣಿ ಎಂಎಂಎಸ್‌ -2ʼ ಸೇರಿದಂತೆ ಸಾಲು ಸಾಲು ಸಿನಿಮಾದಲ್ಲಿ ಸನ್ನಿ ಲಿಯೋನ್‌ ನಟಿಸಿದರು. ಆದರೆ ನಿರಂತರ ಅವಕಾಶ ಕೊಟ್ಟರು ಅವರ ಸಿನಿಮಾಗಳಲ್ಲಿ ಗ್ಲಾಮರಸ್‌ ಸೀನ್‌ ಗಳು ಸದ್ದು ಮಾಡುತ್ತಿತ್ತು ವಿನಃ ಆ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಸೋತದ್ದೇ ಹೆಚ್ಚು.

ವರದಿಗಳ ಪ್ರಕಾರ, ನಟಿ 2014 ರಿಂದ 2019 ರವರೆಗೆ 14 ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಸನ್ನಿ ಲಿಯೋನ್ ತನ್ನ ಪತಿ (ಡೇನಿಯಲ್ ವೆಬರ್) ಮತ್ತು ಮಕ್ಕಳೊಂದಿಗೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.  ಆಶರ್ ಮತ್ತು ನೋಹ್ ಎನ್ನುವ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ದಂಪತಿ ಪಡೆದಿದ್ದು, ನಿಶಾ ಎನ್ನುವ ಮಗುವನ್ನು ದತ್ತು ಪಡೆದಿದ್ದಾರೆ.

ನಟಿಯಾಗಿ ಮಾತ್ರವಲ್ಲದೆ ಸನ್ನಿ ಲಿಯೋನ್‌ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಶಾರುಖ್‌ ಖಾನ್‌ ಅವರ ʼರಯೀಸ್‌ʼ ಸಿನಿಮಾದಲ್ಲಿನ ʼಲೈಲಾʼ ಹಾಡಿಗೆ ಅವರು 3 ಕೋಟಿ ರೂ.ಪಡೆದಿದ್ದರು.

ಅವರ ಜೀವನದ ಕಥೆಯನ್ನುಆಧಾರಿಸಿ ʼಕರೆಂಜಿತ್ ಕೌರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ʼ ಎನ್ನುವ ವೆಬ್‌ ಸರಣಿ ಕೂಡ ಬಂದಿದೆ.

ಸಮಾಜ ಸೇವೆ, ನಿರೂಪಕಿಯಾಗಿಯೂ ಫೇಮಸ್..;‌ ನಟಿಯಾಗಿ ಮಾತ್ರವಲ್ಲದೆ ಸನ್ನಿ ಲಿಯೋನ್‌ ಶಾಲೆಗಳನ್ನು ಕೂಡ ದತ್ತು ಪಡೆದಿದ್ದಾರೆ. ಪ್ರಾಣಿದಯ ಸಂಘ ʼಪೇಟಾʼದಲ್ಲಿ ಗುರುತಿಸಿಕೊಂಡಿದ್ದಾರೆ.

ದೊಡ್ಡ ಪರದೆಯಲ್ಲಿ ಮೋಹಕ ಪಾತ್ರಗಳಲ್ಲಿ ನಟಿಸಿದ ಸನ್ನಿ ಲಿಯೋನ್‌,  ಕಿರುತೆರೆಯ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಂಟಿವಿ ಜನಪ್ರಿಯ ಶೋ ʼMTV ಸ್ಪ್ಲಿಟ್ಸ್ವಿಲ್ಲಾ 15ʼ ನಲ್ಲಿ ನಿರೂಪಕಿಯಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.

ನೀಲಿ ಚಿತ್ರಗಳಲ್ಲಿ ನಟಿಸಿದ್ದರ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದು ಹೀಗೆ.. ನನ್ನ ಸ್ವ-ಇಚ್ಛೆಯಿಂದಲೇ ನಾನು ನೀಲಿ ಚಿತ್ರ ಉದ್ಯಮಕ್ಕೆ ಹೋದೆ. ಅದು ನನಗೆ ಉದ್ಯಮವಾಗಿ ಕಂಡಿತು. ಅಲ್ಲಿ ನಾನು ಅವಕಾಶವನ್ನಷ್ಟೆ ನೋಡಿದೆ. ನಾನೊಬ್ಬ ಉದ್ಯಮಶೀಲೆಯಂತೆ ಆ ಅವಕಾಶದ ಬಗ್ಗೆ ಯೋಚಿಸಿದೆ. ಆ ಉದ್ಯಮ ಪ್ರವೇಶ ಮಾಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ” ಎಂದಿದ್ದರು.

ಟಾಪ್ ನ್ಯೂಸ್

1-rrrrr

Rahul Gandhi ನಂಬರ್ ಒನ್ ಉಗ್ರ: ಕೇಂದ್ರ ಸಚಿವ ಬಿಟ್ಟು ವಿವಾದ

BJP Symbol

Kejriwal ರಾಜೀನಾಮೆ ನೀಡಿರುವುದು ಅಪರಾಧದ ತಪ್ಪೊಪ್ಪಿಗೆ: ಬಿಜೆಪಿ ಲೇವಡಿ

Vande-Metro

Metro Train: ದೇಶದ ಮೊದಲ “ವಂದೇ ಭಾರತ್‌ ಮೆಟ್ರೋ’ಗೆ ಸೆ.16ರಂದು (ನಾಳೆ) ಪ್ರಧಾನಿ ಚಾಲನೆ

mohan bhagwat

Hindu ಎಂದರೆ ಧಾರ್ಮಿಕ ನಂಬಿಕೆ, ಜಾತಿ ಲೆಕ್ಕಿಸದೆ ಉದಾರತೆ, ಸದ್ಭಾವನೆ ಇರುವವರು

MB Patil ತುಚ್ಛ ಮಾತು ಯತ್ನಾಳ ಮನೆತನದ ಸಂಸ್ಕೃತಿ ಅಲ್ಲ

MB Patil ತುಚ್ಛ ಮಾತು ಯತ್ನಾಳ ಮನೆತನದ ಸಂಸ್ಕೃತಿ ಅಲ್ಲ

NIPAH

Kerala ನಿಫಾ ವೈರಸ್‌ ಸೋಂಕಿನಿಂದ 24 ವರ್ಷದ ಯುವಕ ಮೃ*ತ್ಯು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?

1

South Indian actors: ನಾಗಾರ್ಜುನ್‌ ಟು ವಿಜಯ್; ದಕ್ಷಿಣ ಭಾರತದ ಶ್ರೀಮಂತ‌ ನಟರು ಯಾರ‍್ಯಾರು

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

Paris ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಹೆಚ್ಚು ಯಶಸ್ಸು ಸಿಕ್ಕಿದ್ಹೇಗೆ? ಇಲ್ಲಿದೆ ವಿವರ

Olympics Vs Para; ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಹೆಚ್ಚು ಯಶಸ್ಸು ಸಿಕ್ಕಿದ್ಹೇಗೆ?

MUST WATCH

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

ಹೊಸ ಸೇರ್ಪಡೆ

Madikeri: ತಹಶೀಲ್ದಾರ್‌ ಸಹಿ ನಕಲಿ ಆರೋಪ: ವಿಷ ಸೇವಿಸಿದ್ದ ನೌಕರ ಸಾವು

Madikeri: ತಹಶೀಲ್ದಾರ್‌ ಸಹಿ ನಕಲಿ ಆರೋಪ: ವಿಷ ಸೇವಿಸಿದ್ದ ನೌಕರ ಸಾವು

1-rrrrr

Rahul Gandhi ನಂಬರ್ ಒನ್ ಉಗ್ರ: ಕೇಂದ್ರ ಸಚಿವ ಬಿಟ್ಟು ವಿವಾದ

ಸುಳ್ಯ: ಬೈಕ್‌ ಗಳ ನಡುವೆ ಅಪಘಾತ

Sullia: ಬೈಕ್‌ ಗಳ ನಡುವೆ ಅಪಘಾತ

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

Onion

Discount: ಬೆಂಗಳೂರಿನಲ್ಲೂ ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಈರುಳ್ಳಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.