ಮನೆಯಲ್ಲೇ ಸುಲಭವಾಗಿ ತಯಾರಿಸಿ ಯಮ್ಮಿ…ಯಮ್ಮಿ.. ವೆಜ್ ಮೋಮೋಸ್

ಸಾಮಾನ್ಯವಾಗಿ ಈ ಮೋಮೋಸ್‌ ಖಾದ್ಯ ವು ತಿನ್ನಲು ತುಂಬಾನೇ ಮೃದು ಹಾಗೂ ರುಚಿಕರ.

ಶ್ರೀರಾಮ್ ನಾಯಕ್, Aug 12, 2022, 6:00 PM IST

thumb web exclusive ram

ಮೋಮೋಸ್‌ ಭಕ್ಷ್ಯವು ಮೂಲತಃ ಟಿಬೆಟ್ ಹಾಗೂ ನೇಪಾಳ ದೇಶಗಳದ್ದಾಗಿದ್ದರೂ, ಇದು ಜಗತ್ತಿನಾದ್ಯ೦ತ ಜನಪ್ರಿಯತೆಗಳಿಸಿಕೊ೦ಡಿದೆ ಎಂದರೆ ತಪ್ಪಾಗುವುದಿಲ್ಲ. ಈಗಂತೂ ಭಾರತದಲ್ಲಿಯೂ ಕೂಡ ಈ ಮೋಮೋಸ್‌ ಎ೦ಬ ಭಕ್ಷ್ಯವು ಬಹಳ ಜನಪ್ರಿಯವಾಗಿದೆ..ಅದರಲ್ಲೂ ಮೋಮೋಸ್‌ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಮಕ್ಕಳಿಂದ ದೊಡ್ಡವರ ತನಕ ಇಷ್ಟ ಪಡುವ ತಿನಿಸಾಗಿದೆ .ಇದರಲ್ಲಿ ವೆಜ್ ಹಾಗೂ ನಾನ್ ವೆಜ್ ಕೂಡ ಮಾಡಬಹುದಾಗಿದೆ .ಇದು ಅಸ್ಸಾಂ ,ಮಹಾರಾಷ್ಟ್ರ, ಸಿಕ್ಕಿಂ, ಅರುಣಾಚಲ ಪ್ರದೇಶದಂತಹ ರಾಜ್ಯ ಗಳಲ್ಲಿ ಇದು ಜನಪ್ರಿಯ ಭಕ್ಷ್ಯವಾಗಿದೆ .

ಸಾಮಾನ್ಯವಾಗಿ ಈ ಮೋಮೋಸ್‌ ಖಾದ್ಯ ವು ತಿನ್ನಲು ತುಂಬಾನೇ ಮೃದು ಹಾಗೂ ರುಚಿಕರ. ಬಹುತೇಕ ಮಂದಿ ಇದನ್ನು ಮೈದಾದಿಂದ ತಯಾರಿಸುತ್ತಾರೆ.ಮೋಮೋಸ್‌ಯಿಂದ ಬಗೆಬಗೆಯ ತಿಂಡಿ-ತಿನಿಸುಗಳನ್ನು ಮಾಡಬಹುದಾಗಿದೆ ಆದರೆ ನಾವು ಇಂದು ನಿಮಗಾಗಿ “ವೆಜ್ ಟೇಬಲ್ ಮೋಮೋಸ್‌” ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ….

ಬೇಕಾಗುವ ಸಾಮಗ್ರಿಗಳು
ಮೈದಾ 1 ಕಪ್ ,ಕ್ಯಾರೆಟ್ 1/2 ಕಪ್, ಕ್ಯಾಬೇಜ್ 1/2 ಕಪ್, ಈರುಳ್ಳಿ 2, ಎಣ್ಣೆ 8 ಚಮಚ, ಶುಂಠಿ ಸ್ವಲ್ಪ, ಹಸಿ ಮೆಣಸು 2, ಕೊತ್ತಂಬರಿ ಸೊಪ್ಪು ಸ್ವಲ್ಪ,ಕಾಳು ಮೆಣಸಿನ ಪುಡಿ 1/4 ಚಮಚ, ಸಣ್ಣ ಗಾತ್ರದ ಲಿಂಬೆ 1, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಒಂದು ಬೌಲ್ ಗೆ ಮೈದಾ ಮತ್ತು ಉಪ್ಪನ್ನು ಸೇರಿಸಿ ಸ್ವಲ್ಪ ನೀರನ್ನು ಸೇರಿಸುತ್ತಾ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಎಣ್ಣೆಯನ್ನು ಸವರಿ ಚೆನ್ನಾಗಿ ಮೃದು ಮಾಡಿಕೊಳ್ಳಿ ತದನಂತರ 20 ನಿಮಿಷಗಳ ಕಾಲ ಹಾಗೇ ಬಿಡಿ .

ತುರಿದ ಕ್ಯಾಬೇಜ್ ,ಕ್ಯಾರೆಟ್ ಹಾಗೂ ಸಣ್ಣದಾಗಿ ಹಚ್ಚಿಕೊಂಡ ಈರುಳ್ಳಿಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ತರಕಾರಿಯಲ್ಲಿ ನೀರಿನ ಅಂಶವಿರುವುದರಿಂದ ಕಾಟನ್ ಬಟ್ಟೆಯಿಂದ ನೀರಿನ ಅಂಶವನ್ನು ತೆಗೆಯಬೇಕು . ನಂತರ ಒಂದು ಬೌಲ್ ಗೆ ಆ ತರಕಾರಿಗಳನ್ನೆಲ್ಲಾ ಹಾಕಿ ನಂತರ ಅದಕ್ಕೆ ಕಾಳು ಮೆಣಸಿನ ಪುಡಿ ,ಕೊತ್ತಂಬರಿ ಸೊಪ್ಪು, ಲಿಂಬೆ ರಸ ,ಹಾಗೂ ಎಣ್ಣೆವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ .

ನಂತರ ಕಲಸಿ ಇಟ್ಟುಕೊಂಡಂತಹ ಮೈದಾ ಹಿಟ್ಟನ್ನು ಸಣ್ಣ -ಸಣ್ಣ ಪೂರಿ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಲಟ್ಟಿಸಿಕೊಳ್ಳಬೇಕು. ತದನಂತರ ಲಟ್ಟಿಸಿಕೊಂಡ ಹಿಟ್ಟಿನ ಒಳಗೆ ಕಲಸಿ ಇಟ್ಟ ತರಕಾರಿ ಮಿಶ್ರಣವನ್ನು ಹಾಕಿಕೊಂಡು ಮೋದಕವನ್ನು ಮಡಚುವ ರೀತಿಯಲ್ಲಿ ಮಡಚಿಕೊಳ್ಳಬೇಕು ನಂತರ ಮೋಮೋಸ್‌ ನ್ನು ಹಬೆಯಲ್ಲಿ 15ನಿಮಿಷಗಳ ಕಾಲ ಬೇಯಿಸಿರಿ. ಈಗ ಬಿಸಿ ಬಿಸಿಯಾದ ವೆಜ್  ಮೋಮೋಸ್‌ ನ್ನು ಕೆಂಪು ಚಟ್ನಿ ಜೊತೆ ಸವಿಯಬಹುದು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.