ಗಣೇಶ ಚತುರ್ಥಿ: ಗಣೇಶನಿಂದ ನಾವು ಕಲಿಯೋದೇನು ? ಹೇಗಿರಬೇಕು ಸಾಂಪ್ರದಾಯಿಕ ಆಚರಣೆ

ಗಣೇಶನನ್ನು ಗಣೇಶ ಚತುರ್ಥಿಯ 10 ದಿನಗಳವರೆಗೆ ಇಟ್ಟರೆ ಅತ್ಯಂತ ಶುಭ ಎಂಬ ನಂಬಿಕೆ ಇದೆ.

ದಿನೇಶ ಎಂ, Aug 28, 2022, 5:45 PM IST

CHAUTI GANESHA uv web exclusive thumb copy CHAUTI

ಮಹಾ ಗಣಪತಿಯ ರೂಪ ಕೇವಲ ಆಕಾರವಲ್ಲ ಅದು ಜೀವನ ಸಂದೇಶಗಳ ಸಮೂಹ ಶಕ್ತಿ. ಜಗತ್ತನ್ನು ಜನರು ನೋಡುವ ಬಗೆ ಅವರವರ ದೃಷ್ಟಿಕೋನಗಳನ್ನು ಆಧರಿಸಿರುತ್ತವೆ. ದೃಷ್ಟಿಕೋನಗಳು ವೈಯಕ್ತಿಕ ಜೀವನಾನುಭವಗಳು ಮತ್ತು ಸುತ್ತಲಿನ ವಾತಾವರಣಗಳ ಪ್ರಭಾವವನ್ನು ಒಳಗೊಂಡಿರುತ್ತವೆ. ನಾವು ಕೂಡ ಗಣಪತಿಯನ್ನು ನೋಡುವ ಬಗೆ ಕೇವಲ ಮೇಲ್ನೋಟದ ನೋಟ ಸಾಲದು, ಆಂತರ್ಯದ ಅನುಭವಗಳ ಮಂಥನ ಮಾಡಿ ಒಳದೃಷ್ಟಿಯಿಂದ ನೋಡಿ ಕಲಿಯುವುದು ಗಣಪತಿಯಿಂದ ಬಹಳಷ್ಟಿದೆ.

ಗಣಪತಿಯ ಸಣ್ಣ ಕಣ್ಣು ಸೂಕ್ಷ್ಮ ದೃಷ್ಟಿಯ ಸಂಕೇತ, ಅಗಲವಾದ ಕಿವಿಗಳು ಎಲ್ಲವನ್ನೂ ತಾಳ್ಮೆಯಿಂದ ಆಲಿಸುವ ಗುಣದ ಸಂಕೇತ, ಉದ್ದವಾದ ಸೊಂಡಿಲು– ಕೇವಲ ವಾಸನೆಗಳ ಆಘ್ರಾಣಕಲ್ಲಾ. ಎಲ್ಲಾ ಬಗೆಯ ಜ್ಞಾನಗಳ ಆಘ್ರಾಣಿನಿಸಿಕೊಳ್ಳುವ ಮತ್ತು ಸುತ್ತಲಿನ ಪರಿಸರದ ಸ್ಪಂದನೆಯನ್ನು ಅರಿಯುವ ಅಗತ್ಯತೆಯ ಸೂಚಕ. ಗಣೇಶನ ದೊಡ್ಡ ಹೊಟ್ಟೆಯದ್ದು ಕೇವಲ ಹಸಿವಲ್ಲ, ಅದು ಜ್ಞಾನದ ಹಸಿವಿನ ಸೂಚಕ. ಮೋದಕಾದಿ ತಿನಿಸುಗಳು ಸಿಹಿ – ಸಂತೋಷಗಳನ್ನು ದಯಪಾಲಿಸುವ ಮಂಗಳಕರ ಮಹಾಗಣಪತಿಯ ಸೂಚಕ.

ವಿನಾಯಕ ಚೌತಿ ಎಂದೂ ಕರೆಯಲ್ಪಡುವ ಈ ಹಬ್ಬವು ಭಾರತದಾದ್ಯಂತ ಆಚರಿಸುವ ಅತಿ ದೊಡ್ಡ ಹಬ್ಬವಾಗಿದೆ.  ಜಾತಿ – ಮತಗಳ ಬೇಧವಿಲ್ಲದೆ ಒಟ್ಟಾಗಿ ಭಾವೈಕ್ಯತೆಯ ಪ್ರತೀಕವಾದ ಹಬ್ಬವೆಂದರೆ ಅದು ಗಣೇಶ ಚತುರ್ಥಿ. ಗಣೇಶ ಹಬ್ಬವನ್ನು ಒಂದು ದಿನದಿಂದ 11 ದಿನಗಳವರೆಗೂ ಆಚರಿಸಲಾಗುತ್ತದೆ.  ಆಚರಣೆಯ ಬಳಿಕ ನಿಗದಿತ ದಿನಗಳಲ್ಲಿ ಮಾತ್ರ ಗಣೇಶನನ್ನು ವಿಸರ್ಜನೆ ಮಾಡಬೇಕು. ಅದರಲ್ಲೂ  ಗಣೇಶನನ್ನು ಗಣೇಶ ಚತುರ್ಥಿಯ 10 ದಿನಗಳವರೆಗೆ ಇಟ್ಟರೆ ಅತ್ಯಂತ ಶುಭ ಎಂಬ ನಂಬಿಕೆ ಇದೆ.   ಚತುರ್ಥಿಯಲ್ಲಿ 16 ಆಚರಣೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ  4 ಪ್ರಮುಖ ಆಚರಣೆಗಳು ಮುಖ್ಯವಾಗುತ್ತದೆ.

ಗಣೇಶ ಚತುರ್ಥಿಯ 4 ಪ್ರಮುಖ ಆಚರಣೆಗಳು ಹೀಗಿವೆ:

ಆವಾಹನೆ ಮತ್ತು ಪ್ರಾಣ ಪ್ರತಿಷ್ಠಾಪನೆ : -ಪ್ರಜ್ವಲನ’ ಮತ್ತು ‘ಸಂಕಲ್ಪ’ ಮಾಡಿದ ನಂತರ ಇದು ಮೊದಲ ಹೆಜ್ಜೆಯಾಗಿದೆ. ಮಂತ್ರ ಪಠಣದೊಂದಿಗೆ, ಗಣಪತಿಯನ್ನು ಸ್ಥಾಪಿಸಿದ ಮೂರ್ತಿಗೆ ಭಕ್ತಿ ಪೂರ್ವಕವಾಗಿ ಆಹ್ವಾನಿಸಲಾಗುತ್ತದೆ, ಇದು ‘ಮೂರ್ತಿ’ ಅಥವಾ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಆಚರಣೆಯಾಗಿದೆ.

ಷೋಡಶೋಪಚಾರ:  ಷೋಡಶೋಪಚಾರದ ಪೂಜೆಯು 16 ಬಗೆಯ ಪೂಜೆಯ ವಿಧಾನಗಳನ್ನು ಒಳಗೊಂಡಿರುತ್ತದೆ, ಈ 16 ಬಗೆಯ ಉಪಚಾರಗಳೆಂದರೆ… ಗಣೇಶನ ಪಾದಗಳನ್ನು ತೊಳೆದ ನಂತರ, ವಿಗ್ರಹವನ್ನು ಹಾಲು, ತುಪ್ಪ, ಜೇನುತುಪ್ಪ, ಮೊಸರು, ಸಕ್ಕರೆಯಿಂದ ಕೂಡಿದ ಪಂಚಾಮೃತ ಅಭಿಷೇಕ ನಂತರ ಪರಿಮಳಯುಕ್ತ ಎಣ್ಣೆ ಮತ್ತು ಗಂಗಾಜಲದಿಂದ ಅಭಿಷೇಕ. ನಂತರ ಹೊಸ ವಸ್ತ್ರ, ಹೂವುಗಳು, ಮುರಿಯದ ಅಕ್ಷತೆಯ ಅಕ್ಕಿ, ಹಾರ, ಸಿಂಧೂರ ಮತ್ತು ಚಂದನದ ಜೊತೆಗೆ ಗಣೇಶನನ್ನು ಅಲಂಕರಿಸಿ.  ಮೋದಕ, ವೀಳ್ಯದೆಲೆ, ತೆಂಗಿನಕಾಯಿ (ನೈವೇದ್ಯ)  ಧೂಪ, ದೀಪ, ಸ್ತೋತ್ರಗಳು, ಮಂತ್ರಗಳನ್ನು ಪಠಿಸುವ ಮೂಲಕ ಪೂಜಿಸಲಾಗುತ್ತದೆ.

ಉತ್ತರಪೂಜೆ : ಈ ಆಚರಣೆಯನ್ನು ವಿಸರ್ಜನಕ್ಕೆ ಮೊದಲು ನಡೆಸಲಾಗುತ್ತದೆ. ಅತ್ಯಂತ ಸಂತೋಷ ಮತ್ತು ಭಕ್ತಿಯಿಂದ, ಎಲ್ಲಾ ವಯೋಮಾನದ ಜನರು ಉತ್ಸವದಲ್ಲಿ ಭಾಗವಹಿಸುತ್ತಾರೆ.  ಜನರು ಹಾಡುತ್ತಾ, ನೃತ್ಯ ಮಾಡುತ್ತಾ… ಮಂತ್ರಗಳ ಪಠಣ, ಆರತಿ, ಹೂವುಗಳ ಜೊತೆಗೆ ವಿದಾಯ ಹೇಳುವ ವಿಶೇಷ ಆಚರಣೆ.

ಗಣಪತಿ ವಿಸರ್ಜನೆ : ಮುಂದಿನ ವರ್ಷ ಜ್ಞಾನ ರೂಪಿಯಾಗಿ ಭಗವಂತ ಹಿಂತಿರುಗಲಿ ಎಂದು ಹಾರೈಸಿ ಗಣೇಶನ ಮೂರ್ತಿಯನ್ನು ಜಲಮೂಲಗಳಲ್ಲಿ ವಿಸರ್ಜಿಸಲಾಗುತ್ತದೆ.

 “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗುಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ।। ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆಜಸವು ಜನಜೀವನಕೆ”  – ಮಂಕುತಿಮ್ಮ

ಡಿ.ವಿ.ಜಿಯ ಈ ಕಗ್ಗದಂತೆ, ಹಿರಿಯರ ಪ್ರತಿ ಆಚರಣೆಗಳ ಹಿಂದೆ ಜೀವನ ಸಾರ ಸಾರುವ ಮತ್ತು ವೈಜ್ಞಾನಿಕ, ತಾತ್ವಿಕ ಸತ್ಯಗಳನ್ನೊಳಗೊಂಡ ದೈವಿಕ ಜ್ಞಾನದ ಸ್ಪರ್ಶವಿರುತ್ತದೆ. ಹೊಸ ತಲೆಮಾರು ಅದನ್ನರಿತು ಮೂಲ ಉದ್ದೇಶ, ಆಚರಣೆಗಳಿಗೆ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಆಚರಣೆಗಳನ್ನು ಆಡಂಬರದ ಡಂಬಾಚಾರಿಕೆ ಇಲ್ಲದೆ ಆಚರಿಸುವ ಕಡೆ ಗಮನಕೊಡಬೇಕಿದೆ, ಇದನ್ನು ಅರಿಯೋಣ, ಅರಿತು ಬಾಳೋಣ, ಅರಿವೇ ಗುರು, ಗುರುವೇ ದೇವರು.

  • ದಿನೇಶ ಎಂ

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿನಾಯಕ ಗಣಗಳ ನಾಯಕ…ಗಣಪತಿಯ ಮದುವೆ ಬಗ್ಗೆ ಪುರಾಣ ಕಥೆಯಲ್ಲೇನಿದೆ…

ವಿನಾಯಕ ಗಣಗಳ ನಾಯಕ…ಗಣಪತಿಯ ಮದುವೆ ಬಗ್ಗೆ ಪುರಾಣ ಕಥೆಯಲ್ಲೇನಿದೆ…

web exclusive news ojijofkbh

ಭಾಂದವ್ಯ ಬೆಸೆಯುವ ರಾಷ್ಟ್ರೀಯ ಹಬ್ಬ ಗಣೇಶ ಚತುರ್ಥಿ

ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

thumb gauri

ಗೌರಿಯ ಪ್ರಥಮ ಪೂಜೆ…ತವರಲ್ಲಿ ಮಾಡಿದ ಮೊದಲ ಹಬ್ಬ

ಗಣೇಶೋತ್ಸವ ಸ್ಪೆಷಲ್ ; ವಿಶ್ವನಾಯಕ ವಿನಾಯಕ

ಗಣೇಶೋತ್ಸವ ಸ್ಪೆಷಲ್ ; ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳಲ್ಲಿ ಬೆಳಗುವ ಬೆಳಕ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.