Yakshagana ಬಡಗುತಿಟ್ಟು ರಂಗದ ವೈಶಿಷ್ಟ್ಯ ಕೋರೆ ಮುಂಡಾಸಿನ ಕಿರಾತ ವೇಷ

ಪರಂಪರೆಯ ಸೊಬಗು ಮರೆಯಾಗುತ್ತಿರುವುದು ವಿಪರ್ಯಾಸ

ವಿಷ್ಣುದಾಸ್ ಪಾಟೀಲ್, Apr 13, 2023, 10:27 PM IST

1-dsfdsf

ಹಿರಿಯ ಕಲಾವಿದ ಕೃಷ್ಣಮೂರ್ತಿ ಉರಾಳ

ಯಕ್ಷಗಾನ ರಂಗದಲ್ಲಿ ಪ್ರತಿಯೊಂದು ವೇಷವೂ, ಪಾತ್ರವೂ ತನ್ನದೇ ಆದ ಸ್ಥಾನಮಾನ, ವೈಶಿಷ್ಟ್ಯವನ್ನು ಹೊಂದಿದೆ. ವೇಷ ಅಂದರೆ ಸಾಮಾನ್ಯವಾಗಿ ಪರಿಗಣಿಸಿದರೆ ರಂಗದ ಮೇಲೆ ಬರುವ ಬಾಲ ಗೋಪಾಲ, ಸ್ತ್ರೀ ವೇಷಗಳಿಂದ ಹಿಡಿದು ಎಲ್ಲವೂ ವೇಷಗಳೇ, ಆದರೆ ವರ್ಣ ವೈವಿಧ್ಯ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಕೆಲ ವೇಷಭೂಷಣಗಳು ಮಹತ್ವ ಹೊಂದಿದ್ದು ಈಗ ರಂಗದಿಂದ ಮರೆಯಾಗುತ್ತಿರುವುದು ವಿಪರ್ಯಾಸ .

ಯಕ್ಷ ಪರಂಪರೆಯಲ್ಲಿ ತೆಂಕು ತಿಟ್ಟು ಮತ್ತು ಬಡಗು ತಿಟ್ಟಿನಲ್ಲಿ ಪೌರಾಣಿಕ ಪ್ರಸಂಗಗಳ ಪಾತ್ರಗಳು ತನ್ನದೇ ಆದ ಕಲ್ಪನೆ ಮತ್ತು ವಿಶಿಷ್ಟತೆಗಳೊಂದಿಗೆ ಜನಮಾನಸದಲ್ಲಿ ನೆಲೆಯಾಗಿದ್ದವು. ಬಣ್ಣದ ವೇಷಧಾರಿಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿತ್ತು. ಗೌರವದ ಸ್ಥಾನಮಾನವನ್ನೂ ನೀಡಲಾಗಿತ್ತು.ಅದೇ ರೀತಿ ಕಿರಾತ ವೇಷಗಳಿಗೂ ಬಡಗುತಿಟ್ಟಿನಲ್ಲಿ ವಿಭಿನ್ನತೆ ಮತ್ತು ಪ್ರಾಧಾನ್ಯತೆ ಇತ್ತು.

ಕಾಡು ಜನಾಂಗದ ನಾಯಕ ಕಿರಾತನ ಪಾತ್ರ ಹಿಂದಿನ ವನವಾಸಿ ಜೀವನವನ್ನು ಯಕ್ಷರಂಗದಲ್ಲಿ ಪ್ರತಿನಿಧಿಸುವ ಪಾತ್ರಗಳಾಗಿತ್ತು.ಹಲವು ಪ್ರಸಂಗಗಳಲ್ಲಿ ಕಿರಾತನ ಪಾತ್ರ ಗಮನ ಸೆಳೆಯುವ ಆಕರ್ಷಕ ಪ್ರಧಾನ ಪಾತ್ರದಂತೆ ಕಂಗೊಳಿಸುತ್ತಿತ್ತು. ಈಗ ಆ ಪಾತ್ರ ರಂಗದಿಂದ ನೈಜ ಚಿತ್ರಣ ಕಳೆದುಕೊಂಡು ಮರೆಯಾಗುತ್ತಿದೆ. ಇತರ ಪಾತ್ರಗಳಂತೆ ಆಹಾರ್ಯ,ನಾಟಕೀಯ ವೇಷಭೂಷಣಗಳಿಂದ ಪ್ರತ್ಯೇಕತೆಯನ್ನು ಕಳೆದುಕೊಂಡಿದೆ.

ವೇಷಭೂಷಣ, ರಂಗ ಪ್ರಸ್ತುತಿ ಮತ್ತು ನಾಟ್ಯ ಸೇರಿ ಇತರ ರಂಗ ನಿರ್ವಹಣೆಯಲ್ಲೂ ಕಿರಾತ ಪಾತ್ರಕ್ಕೆ ಮಹತ್ವವಿದೆ. ಪೌರಾಣಿಕ ಪ್ರಸಂಗಗಳಾದ ಇಂದ್ರ ಕೀಲಕ, ಶಶಿಪ್ರಭಾ ಪರಿಣಯ, ಮೀನಾಕ್ಷಿ ಕಲ್ಯಾಣ, ರತ್ನಾವತಿ ಕಲ್ಯಾಣ ಮೊದಲಾದ ಪ್ರಸಂಗಗಳಲ್ಲಿ ಕಿರಾತ ಪಾತ್ರಕ್ಕೆ ಉತ್ತಮ ಅವಕಾಶವಿದೆ.

ಈಗಿನ ಕಲಾವಿದರು ಕೆಲವರು ಪಾತ್ರಕ್ಕೆ ಪರಿಪೂರ್ಣ ನ್ಯಾಯ ಒದಗಿಸಲು ಸಮರ್ಥರಿದ್ದರೂ ಪರಂಪರೆಯ ಆಹಾರ್ಯ ಮತ್ತು ರಂಗ ನಿರ್ವಹಣೆ ತೋರಲು ಮನ ಮಾಡದಿರುವುದು ನೋವಿನ ಸಂಗತಿ.

ವಿಶೇಷವಾಗಿ ಕೆಂಪು ಕೋರೆ ಮುಂಡಾಸಿನ , ಕಣ್ಣಿನ ಸುತ್ತಲೂ ಕೆಂಪು ಬಣ್ಣ ಎದ್ದು ಕಾಣುವಂತೆ ಮೇಕಪ್, ಮಾವಿನ ಸೊಪ್ಪು ಕಟ್ಟಿಕೊಂಡು ಕಾಡಾ ಡಿಯಂತೆ ಕಾಣಿಸಿಕೊಳ್ಳುವುದು ವಿಶೇಷ. ಪಾತ್ರಕ್ಕೆ ಒಡ್ಡೋಲಗದ ಅವಕಾಶವನ್ನೂ ರಂಗದಲ್ಲಿ ನೀಡಲಾಗಿದೆ. ಪ್ರತ್ಯೇಕತೆಯನ್ನೂ ನೋಡಲು ಭಾಷಾ ಭಿನ್ನತೆಯೂ ಪಾತ್ರಕ್ಕಿದೆ. ಲೆಲೆಲೆಲೆಲೆ…ಎಂದು ಕೂಗುತ್ತಾ ರಂಗ ಪ್ರವೇಶಿಸುವುದು ಕ್ರಮವಿದೆ. ಹಿಂದೆ ಕಿರಾತ ಪ್ರವೇಶದ ವೇಳೆ  ಹುಲ್ಲಿನ ರಾಶಿಗೆ ಬೆಂಕಿ ಹಾಕಿ ಸುತ್ತು ಬರುವ ಕ್ರಮವೂ ಇತ್ತು ಎನ್ನುವುದು ಹಿರಿಯ ಪ್ರೇಕ್ಷಕರು ಮತ್ತು ಕಲಾವಿದರ ನೆನಪು.

ಕಿರಾತ ಪಡೆ ಎನ್ನುವ ಹಾಗೆ ಬಾಲ ಕಲಾವಿದರು ಜತೆಯಾಗಿ ರಂಗದಲ್ಲಿ ಬೇಟೆ ಮೊದಲಾದ ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಹಾಸ್ಯ ರಸಾಯನವನ್ನೂ ಉಣಬಡಿಸಲು ಅವಕಾಶವಿದೆ.

ಕಿರಾತ ಪಾತ್ರಗಳಿಗೆ ಬಡಗುತಿಟ್ಟಿನಲ್ಲಿ ಹಾರಾಡಿ ಮಹಾಬಲ ಗಾಣಿಗರು ಪರಿಪೂರ್ಣ ನ್ಯಾಯ ಒದಗಿಸಿ ಪ್ರಖ್ಯಾತಿಯನ್ನು ಪಡೆದಿದ್ದರು ಎಂದು ಹಿರಿಯ ಕಲಾವಿದರು ನೆನಪಿಸಿಕೊಳ್ಳುತ್ತಾರೆ. ಪೇತ್ರಿ ಮಾಧವ ನಾಯ್ಕ್ ಸೇರಿ ಇನ್ನೂ ಅನೇಕರು ಕಿರಾತ ಪಾತ್ರಗಳಿಗೆ ಜೀವ ತುಂಬಿದ ಹಿರಿಯ ಕಲಾವಿದರು. ಹಿಂದಿನ ಪರಂಪರೆಯ ಪರಿಪೂರ್ಣ ಮುಖವರ್ಣಿಗೆಯೊಂದಿಗೆ, ಕೋರೆ ಮುಂಡಾಸಿನೊಂದಿಗೆ ಹಿರಿಯ ಕಲಾವಿದ ಕೃಷ್ಣಮೂರ್ತಿ ಉರಾಳ ಅವರು ಪಾತ್ರಕ್ಕೆ ಜೀವ ತುಂಬುವ ಕಲಾವಿದರಲ್ಲಿ ಒಬ್ಬರು.

ವಿಶೇಷವಾಗಿ ಜೋಡಾಟದಲ್ಲಿ ಮೀನಾಕ್ಷಿ ಕಲ್ಯಾಣ ಪ್ರಸಂಗದಲ್ಲಿ ಕಿರಾತ ವೇಷವನ್ನು ಜೋಡಿ ಮುಂಡಾಸು ಕಟ್ಟಿ ಪ್ರಸ್ತುತಪಡಿಸುವ ಕ್ರಮವಿದೆ. ಅದು ಪ್ರಸಂಗದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಬುಕ್ಕಿಗುಡ್ಡೆ ಮಹಾಬಲ ನಾಯ್ಕ್ ಅವರು ಜೋಡಿ ಮುಂಡಾಸಿನ ಕಿರಾತ ಪಾತ್ರವನ್ನು ಅಮೋಘವಾಗಿ ಪ್ರಸ್ತುತಪಡಿಸುವ ಅನುಭವಿ ಕಲಾವಿದರು.

ಬಡಗು ತಿಟ್ಟು ರಂಗದಿಂದ ಮರೆಯಾಗುತ್ತಿರುವ ಹಲವು ಪಾತ್ರಗಳಲ್ಲಿ ನೈಜ ಚಿತ್ರಣದ ಕಿರಾತ ಪಾತ್ರವೂ ಒಂದು. ಈ ಕುರಿತಾಗಿ ಕಲಾವಿದರು ವಿಶೇಷ ಆಸಕ್ತಿ ವಹಿಸಿ ಪಾತ್ರಗಳ ನೈಜತೆ ಉಳಿಸಿಕೊಳ್ಳಬೇಕಾಗಿರುವುದು ಸದ್ಯದ ಅಗತ್ಯತೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.