ಇಂಗ್ಲೆಂಡ್‌ ಅಂಪಾಯರ್‌ ಇಯಾನ್‌ ಗೂಲ್ಡ್‌ ಗುಡ್‌ಬೈ

ಭಾರತ-ಶ್ರೀಲಂಕಾ ಪಂದ್ಯವೇ ಕೊನೆಯದು

Team Udayavani, Jul 7, 2019, 5:49 AM IST

umpire

ಲಂಡನ್‌: ವಿಶ್ವಕಪ್‌ ಕ್ರಿಕೆಟ್‌ ಎನ್ನುವುದು ಅನೇಕ ಹಿರಿಯ ಕ್ರಿಕೆಟಿಗರ ಪಾಲಿಗೆ ವಿದಾಯ ಕೂಟವಾಗುವುದು ವಿಶೇಷವೇನಲ್ಲ. ಈ ಸಾಲಿನಲ್ಲಿ ಅಂಪಾಯರ್‌ ಕೂಡ ಕಾಣಿಸಿಕೊಳ್ಳುತ್ತಿರುವುದು ತುಸು ಅಚ್ಚರಿಯೆನಿಸಿದೆ. ಹೀಗೆ ವಿದಾಯ ಹೇಳುವ ಅಂಪಾಯರ್‌ ಆತಿಥೇಯ ಇಂಗ್ಲೆಂಡಿನ ಇಯಾನ್‌ ಗೂಲ್ಡ್‌.

ಭಾರತ-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಅಂಪಾಯರ್‌ ಆಗಿ ಸೇವೆ ಸಲ್ಲಿಸಿದ 61ರ ಹರೆಯದ ಇಯಾನ್‌ ಗೂಲ್ಡ್‌ ಪಾಲಿಗೆ ಇದೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೆಂದೂ, ಈ ಮುಖಾಮುಖೀ ಮುಗಿದೊಡನೆ ಅವರು ತಮ್ಮ ಅಂಪಾಯರಿಂಗ್‌ ಬಾಳ್ವೆಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ತಿಳಿಸಿದೆ.

ಇಯಾನ್‌ ಗೂಲ್ಡ್‌ 74 ಟೆಸ್ಟ್‌ಗಳಲ್ಲಿ ಅಂಪಾಯರಿಂಗ್‌ ಸೇವೆ ಸಲ್ಲಿಸಿದ್ದಾರೆ. ಭಾರತ-ಶ್ರೀಲಂಕಾ ನಡುವಿನ ಮುಖಾಮುಖೀ ಅವರ 140ನೇ ಏಕದಿನ ಪಂದ್ಯವಾಗಿದೆ.

ಇದು ಇಯಾನ್‌ ಗೂಲ್ಡ್‌ ಕರ್ತವ್ಯ ನಿಭಾಯಿಸಿದ 4ನೇ ಐಸಿಸಿ ವಿಶ್ವಕಪ್‌ ಪಂದ್ಯಾವಳಿ. ಮೊಹಾಲಿಯಲ್ಲಿ ನಡೆದ 2011ರ ಭಾರತ-ಪಾಕಿಸ್ಥಾನ ನಡುವಿನ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಕರ್ತವ್ಯ ನಿಭಾಯಿಸಿದ ಹೆಗ್ಗಳಿಕೆ ಇವರದ್ದಾಗಿದೆ.

ಮೊದಲು ವಿಕೆಟ್‌ ಕೀಪರ್‌
ಯಶಸ್ವಿ ವಿಕೆಟ್‌ ಕೀಪರ್‌ ಆಗಿದ್ದ ಇಯಾನ್‌ ಗೂಲ್ಡ್‌ 1983ರ ವಿಶ್ವಕಪ್‌ ವೇಳೆ ಇಂಗ್ಲೆಂಡ್‌ ತಂಡದಲ್ಲಿದ್ದರು. ಒಟ್ಟು18 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆಬಳಿಕ ಮಿಡ್ಲ್ ಸೆಕ್ಸ್‌ ಕೌಂಟಿಗೆ ಕೋಚ್‌ ಆಗಿ ದುಡಿದರು.

ಕೀಪರ್‌ ಹಾಗೂ ಕೋಚಿಂಗ್‌ಗಿಂತಲೂ ಮಿಗಿಲಾಗಿ ಅಂಪಾಯರ್‌ ಆಗಿದ್ದ ವೇಳೆ ಗೂಲ್ಡ್‌ ಹೆಚ್ಚು ಜನಪ್ರಿಯರಾಗಿದ್ದರು. 13 ವರ್ಷಗಳ ಹಿಂದೆ ಇಂಗ್ಲೆಂಡ್‌-ಶ್ರೀಲಂಕಾ ನಡುವಿನ ಟಿ20 ಪಂದ್ಯದಲ್ಲಿ ಅಂಪಾಯರ್‌ ಆಗಿ ಪದಾರ್ಪಣೆ ಮಾಡಿದ್ದರು. ಐದೇ ದಿನಗಳ ಬಳಿಕ ಈ ಎರಡು ತಂಡಗಳ ನಡುವಿನ ಏಕದಿನ ಪಂದ್ಯದಲ್ಲೂ ಅಂಪಾಯರ್‌ ಆಗಿ ಕರ್ತವ್ಯ ಆರಂಭಿಸಿದರು.

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.