ನನ್ನ ಯಶಸ್ಸಿಗೆ ನಾನೇ ಕಾರಣ: ಶಮಿ


Team Udayavani, Jun 29, 2019, 9:32 AM IST

shami

ಲಂಡನ್‌ : ಕ್ರಿಕೆಟಿಗರು ಉತ್ತಮ ನಿರ್ವಹಣೆಯ ಮೂಲಕ ಗೆಲುವಿನ ರೂವಾರಿಯಾಗಿ ಮೂಡಿಬಂದಾಗ ತಮ್ಮ ಯಶಸ್ಸನ್ನು ಹೆಂಡತಿಗೆ, ದೇಶಕ್ಕೆ, ಯೋಧರಿಗೆ ಅರ್ಪಿಸುವುದುಂಟು. ಆದರೆ ವೆಸ್ಟ್‌ ಇಂಡೀಸ್‌ ವಿರುದ್ಧ ಅದ್ಭುತ ಬೌಲಿಂಗ್‌ ಮಾಡಿದ ಮೊಹಮ್ಮದ್‌ ಶಮಿ ತನ್ನ ಯಶಸ್ಸನ್ನು ತನಗೇ ಅರ್ಪಿಸಿಕೊಂಡಿದ್ದಾರೆ.

ತನ್ನ ಯಶಸ್ಸಿಗೆ ತಾನೇ ಕಾರಣ ಎಂದಿದ್ದಾರೆ. “ಯಶಸ್ಸನ್ನು ನನಗಲ್ಲದೆ ಬೇರೆ ಯಾರಿಗೆ ಅರ್ಪಿಸಲಿ? ನನ್ನ ಯಶಸ್ಸಿನ ಎಲ್ಲ ಕ್ರೆಡಿಟ್‌ ನನಗೇ ಸಲ್ಲುತ್ತದೆ’ ಎಂದಾಗ ಅಚ್ಚರಿಗೊಳಗಾಗುವ ಸರದಿ ಪತ್ರಕರ್ತರದ್ದಾಗಿತ್ತು. ಹೆಂಡತಿ ಜತೆಗಿನ ಕಿತ್ತಾಟ, ಟ್‌ನೆಸ್‌ ಸಮಸ್ಯೆ, ವೈವಾಹಿಕ ಹಿಂಸಾಚಾರದ ಆರೋಪ ಗಳ ಸರಮಾಲೆ… ಹೀಗೆ ಒಂದೂವರೆ ವರ್ಷ ಇನ್ನಿಲ್ಲದ ಸಂಕಟ ಅನುಭವಿಸಿದ
ಹಿನ್ನೆಲೆಯಲ್ಲಿ ಶಮಿ ತನ್ನ ಯಶಸ್ಸಿನ ರೂವಾರಿ ತಾನೇ ಎಂದು ಹೇಳಿಕೊಂಡಿದ್ದಾರೆ.

ಒಂದೂವರೆ ವರ್ಷಗಳ ಸಂಕಟ “18 ತಿಂಗಳು ನಾನು ಅನುಭವಿಸಿದ ಸಂಕಟ ನನಗೊಬ್ಬನಿಗೇ ಗೊತ್ತು. ಎಲ್ಲವನ್ನೂ ನಾನು ಸಹಿಸಿಕೊಂಡಿದ್ದೇನೆ. ಹೀಗಾಗಿ
ಇಂದಿನ ಯಶಸ್ಸಿನ ಶ್ರೇಯಸ್ಸು ಕೂಡ ನನಗೆ ಸಲ್ಲಬೇಕು’ ಎಂದಿದ್ದಾರೆ ಶಮಿ.

“ಕೌಟುಂಬಿಕ ಸಮಸ್ಯೆಗಳಿಂದ ಹಿಡಿದು ಫಿಟ್‌ನೆಸ್‌ ಸಮಸ್ಯೆ ತನಕ ಎಲ್ಲದರ ವಿರುದ್ಧ ಹೋರಾಡುವ ಶಕ್ತಿ ನೀಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಹೇಳುತ್ತೇನೆ. ಈಗ ನನ್ನ ಗುರಿಯಿರುವುದು ದೇಶಕ್ಕಾಗಿ ಆಡುವುದು ಮಾತ್ರ’ ಎಂದು ಹ್ಯಾಟ್ರಿಕ್‌ ಸಹಿತ 2 ಪಂದ್ಯಗಳಲ್ಲಿ 8 ವಿಕೆಟ್‌ ಕಿತ್ತಿರುವ ಶಮಿ ಹೇಳಿದರು.

ಎಲ್ಲವೂ ಎಣಿಸಿದಂತೆ ಆಗುತ್ತಿದೆ “ಯೋ ಯೋ ಪರೀಕ್ಷೆಯಲ್ಲಿ ಫೇಲಾದದ್ದು ಮಾತ್ರವಲ್ಲ, ನನ್ನ ಲಯವೂ ತಪ್ಪಿತ್ತು.ಫಿಟ್‌ನೆಸ್‌ಗಾಗಿ ಬಹಳ ಬೆವರು ಹರಿಸಬೇಕಾಯಿತು. ಈಗ ತೂಕ ಇಳಿಸಿಕೊಂಡ ಬಳಿಕ ಲಯವೂ ಸಿಕ್ಕಿದೆ ಮತ್ತು ಎಲ್ಲವೂ ನಾನೆಣಿಸಿದಂತೆ ಆಗುತ್ತಿದೆ. ಈಗ ಪಥ್ಯ ಮತ್ತು ಅಭ್ಯಾಸವನ್ನು ಕಠಿನವಾಗಿ ಪಾಲಿಸುತ್ತಿದ್ದೇನೆ. ಹೀಗಾಗಿ ಬೇಗ ಆಯಾಸವಾಗುವುದಿಲ್ಲ. ವೇಗವೂ ವೃದ್ಧಿಸಿದೆ. ಬೌಲಿಂಗ್‌ ಕೌಶಲದ ಕುರಿತು ಹೇಳುವುದಾದರೆ ಮೈದಾನದಲ್ಲಿ ಉತ್ತಮ ನಿರ್ವಹಣೆ ನೀಡಬಲ್ಲೆ ಎಂಬ ವಿಶ್ವಾಸ ಇತ್ತು. ಆದರೆ ನನ್ನ ಆತ್ಮವಿಶ್ವಾಸವನ್ನು ಅಹಂಕಾರ ಎಂದು ತಪ್ಪಾಗಿ ಭಾವಿಸುವ ಅಪಾಯವೂ ಇತ್ತು’ ಎಂದಿದ್ದಾರೆ ಶಮಿ.

ಯಶಸ್ಸನ್ನು ನನಗಲ್ಲದೆ ಬೇರೆ ಯಾರಿಗೆ ಅರ್ಪಿಸಲಿ? ನನ್ನ ಯಶಸ್ಸಿನ ಎಲ್ಲ ಶ್ರೇಯಸ್ಸು ನನಗೇ ಸಲ್ಲುತ್ತದೆ-ಶಮಿ

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.