![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jul 9, 2019, 5:41 AM IST
ಮ್ಯಾಂಚೆಸ್ಟರ್: ಸೆಮಿಫೈನಲ್ಗೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಮಾಜಿ ಕ್ರಿಕೆಟಿಗರ ನಡುವೆ ಪರಸ್ಪರ ಟ್ವೀಟರ್ ಸಮರವೂ ತೀವ್ರಗೊಂಡಿದೆ.
ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಂಜ್ರೇಕರ್ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜ ಅವರನ್ನು ಇತ್ತೀಚೆಗಷ್ಟೇ ಟೀಕಿಸಿ ಸುದ್ದಿಯಾಗಿದ್ದರು. ಇದೀಗ ಸೆಮಿಫೈನಲ್ಗೂ ಮುನ್ನ ಮಂಜ್ರೇಕರ್ ಭಾರತದ ಸಂಭಾವ್ಯ ಸೆಮಿ ತಂಡದಲ್ಲಿ ರವೀಂದ್ರ ಜಡೇಜ ಅವರಿಗೂ ಸ್ಥಾನ ನೀಡಿ ಅಚ್ಚರಿ ಮೂಡಿಸಿದ್ದಾರೆ. ಸ್ವತಃ ಇದನ್ನು ಮಾಂಜ್ರೆàಕರ್ ಟ್ವೀಟರ್ನಲ್ಲಿ ಪ್ರಕಟಿಸಿ, “ನನ್ನ ತಂಡ ತಿಳಿಸಿದ್ದೇನೆ. ನಿಮ್ಮ ಸಂಭಾವ್ಯ ತಂಡವನ್ನು ತಿಳಿಸಿ’ ಎಂದಿದ್ದಾರೆ.
ಇದಕ್ಕೆ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಮೈಕಲ್ ವಾನ್ “ನಿಮ್ಮ ಕನಸಿನ ತಂಡದಲ್ಲಿ ತುಣಕು, ತುಂಡುಗಳಿಗೆ ಸ್ಥಾನ ಕೊಟ್ಟಿದ್ದೀರಿ’ ಎಂದು ಕಾಲೆಳೆದಿದ್ದಾರೆ. “ಅದು ನನ್ನ ತಂಡವಲ್ಲ. ಸಂಭಾವ್ಯ ತಂಡ ಅಷ್ಟೇ’ ಎಂದು ಮಂಜ್ರೇಕರ್ ಪ್ರತಿಕ್ರಿಯಿಸಿ ದ್ದಾರೆ. ” ಮಂಜ್ರೇಕರ್ … ಹಾಗಾದರೆ ನಿಮ್ಮ ತಂಡ ಯಾವುದು ಎನ್ನುವುದನ್ನು ಮೊದಲು ತಿಳಿಸಿ’ ಎಂದು ವಾನ್ ಮರು ಪ್ರಶ್ನೆ ಎಸೆದಿದ್ದಾರೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.