England-South Africa; ಆಘಾತಕಾರಿ ಸೋಲುಂಡ ತಂಡಗಳಿಗೆ ಅಗ್ನಿಪರೀಕ್ಷೆ


Team Udayavani, Oct 21, 2023, 6:00 AM IST

1–sadsad

ಮುಂಬಯಿ: ತಮ್ಮ ಹಿಂದಿನ ಪಂದ್ಯಗಳಲ್ಲಿ ಆಘಾತಕಾರಿ ಸೋಲನುಭವಿಸಿದ “ಬಲಿಷ್ಠ’ ತಂಡಗಳೆರಡು ಶನಿವಾರ “ವಾಂಖೇಡೆ ಸ್ಟೇಡಿಯಂ’ನಲ್ಲಿ ಅಗ್ನಿಪರೀಕ್ಷೆಗೆ ಇಳಿಯಲಿವೆ. ಈ ತಂಡಗಳೆಂದರೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ಈ ಬಾರಿ ಚಿಗುರಿದಂತಿರುವ ದಕ್ಷಿಣ ಆಫ್ರಿಕಾ. ಈ ಮಹತ್ವದ ಪಂದ್ಯದೊಂದಿಗೆ ಮುಂಬಯಿ ಮಹಾನಗರಿ 13ನೇ ವಿಶ್ವಕಪ್‌ಗೆ ತೆರೆಯಲ್ಪಡಲಿದೆ.

ಎರಡೂ ತಂಡಗಳು ತಲಾ 3 ಪಂದ್ಯಗಳನ್ನಾಡಿವೆ. ದಕ್ಷಿಣ ಆಫ್ರಿಕಾ ಎರಡನ್ನು ಗೆದ್ದರೆ, ಇಂಗ್ಲೆಂಡ್‌ಗೆ ಒಲಿದದ್ದು ಒಂದು ಗೆಲುವು ಮಾತ್ರ. ಹೀಗಾಗಿ ಆಂಗ್ಲರ ಪಾಲಿಗೆ ಇದು ಅತ್ಯಂತ ಮಹತ್ವದ ಪಂದ್ಯ. ಈ ಪಂದ್ಯವನ್ನೂ ಸೋತರೆ ಜಾಸ್‌ ಬಟ್ಲರ್‌ ಬಳಗದ ಹಾದಿ ಖಂಡಿತ ದುರ್ಗಮಗೊಳ್ಳಲಿದೆ.

ವಿಶ್ವಕಪ್‌ ಇತಿಹಾಸದ “ಚೋಕರ್’ ಎಂದೇ ಜನಜನಿತವಾಗಿರುವ ದಕ್ಷಿಣ ಆಫ್ರಿಕಾ ಈ ಕೂಟದಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಎಲ್ಲಿಯ ತನಕವೆಂದರೆ, ನೆದರ್ಲೆಂಡ್ಸ್‌ ಎದುರಿನ ಧರ್ಮಶಾಲಾ ಪಂದ್ಯವನ್ನು ಸೋಲುವ ತನಕ! ಮಳೆಪೀಡಿತ ಈ 43 ಓವರ್‌ಗಳ ಪಂದ್ಯವನ್ನು ಟೆಂಬ ಬವುಮ ಟೀಮ್‌ 38 ರನ್ನುಗಳಿಂದ ಕಳೆದುಕೊಂಡಿತ್ತು. ಡಚ್‌ ಪಡೆಯ ಕಪ್ತಾನ ಸ್ಕಾಟ್‌ ಎಡ್ವರ್ಡ್ಸ್‌ ಮತ್ತು ಬೌಲರ್ ಸೇರಿಕೊಂಡು ಹರಿಣಗಳನ್ನು ಬೇಟೆಯಾಡಿದ್ದರು. 246 ರನ್‌ ಗುರಿ ಪಡೆದ ದಕ್ಷಿಣ ಆಫ್ರಿಕಾ 207ಕ್ಕೆ ಸರ್ವಪತನ ಕಂಡಿತ್ತು.

ಇದೇ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ಎದುರಿನ ಆರಂಭಿಕ ಪಂದ್ಯದಲ್ಲಿ 5ಕ್ಕೆ 428 ರನ್‌ ಪೇರಿಸಿ ವಿಶ್ವಕಪ್‌ ದಾಖಲೆ ಸ್ಥಾಪಿಸಿತ್ತು. ಬಳಿಕ ಆಸ್ಟ್ರೇಲಿಯ ವಿರುದ್ಧ ಮುನ್ನೂರರ ಗಡಿ ದಾಟಿ 134 ರನ್ನುಗಳ ಅಮೋಘ ಜಯ ಸಾಧಿಸಿತ್ತು. ಆದರೆ ಸಾಮಾನ್ಯ ತಂಡವಾದ ನೆದರ್ಲೆಂಡ್ಸ್‌ ವಿರುದ್ಧ ನೆಲಕಚ್ಚಿತು. ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದು ಎಂಬುದಕ್ಕೆ ದಕ್ಷಿಣ ಆಫ್ರಿಕಾ ಒಂದು ಉತ್ತಮ ಉದಾಹರಣೆ.

ಜೋಶ್‌ ತೋರದ ಇಂಗ್ಲೆಂಡ್‌
ಹಾಗೆಯೇ ಇಂಗ್ಲೆಂಡ್‌. ಸಾಮಾನ್ಯವಾಗಿ ಹಾಲಿ ಚಾಂಪಿ ಯನ್ಸ್‌ ಹಿಂದಿನ ಕೂಟದ ಜೋಶ್‌ ಕಾಯ್ದುಕೊಳ್ಳು ವುದಿಲ್ಲ ಎಂಬ ಮಾತಿದೆ. ನ್ಯೂಜಿಲ್ಯಾಂಡ್‌ ವಿರುದ್ಧದ ಉದ್ಘಾಟನ ಪಂದ್ಯದಲ್ಲೇ ಇಂಗ್ಲೆಂಡ್‌ ಇದನ್ನು ಸಾಬೀತುಪಡಿಸ ತೊಡಗಿತು. ಬಳಿಕ ಬಾಂಗ್ಲಾದೇಶವನ್ನು 137 ರನ್ನುಗಳಿಂದ ಸೋಲಿಸಿತು. ಆದರೆ ಅಫ್ಘಾನಿಸ್ಥಾನದ ವಿರುದ್ಧ ಮುಗ್ಗರಿಸಿ ತೀವ್ರ ಮುಖಭಂಗ ಅನುಭವಿಸಿತು. ಹೊಸದಿಲ್ಲಿಯ ಈ ಮೇಲಾಟದಲ್ಲಿ 286 ರನ್‌ ಮಾಡಬೇಕಿದ್ದ ಇಂಗ್ಲೆಂಡ್‌ 215ಕ್ಕೆ ತನ್ನ ಹೋರಾಟವನ್ನು ಕೈಬಿಟ್ಟಿತ್ತು. ಹೀಗಾಗಿ ಎರಡೂ ತಂಡಗಳೀಗ ಆಘಾತಕಾರಿ ಹಾಗೂ ಅನಿರೀಕ್ಷಿತ ಸೋಲಿನಿಂದ ಮೇಲೆದ್ದು ಬರಬೇಕಿದೆ.

ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿವೆ. ಇದನ್ನು ಸಾಬೀತುಪಡಿಸುವಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದ್ದು ದಕ್ಷಿಣ ಆಫ್ರಿಕಾ. ಆರಂಭಕಾರ ಕ್ವಿಂಟನ್‌ ಡಿ ಕಾಕ್‌ ಸತತ 2 ಶತಕ ಬಾರಿಸಿ ಪ್ರಚಂಡ ಫಾರ್ಮ್ ತೆರೆದಿರಿಸಿದ್ದರು. ರಸ್ಸಿ ವಾನ್‌ ಡರ್‌ ಡುಸೆನ್‌, ಐಡನ್‌ ಮಾರ್ಕ್‌ರಮ್‌ ಕೂಡ ಬ್ಯಾಟಿಂಗ್‌ ಜೋಶ್‌ ತೋರಿದ್ದರು. ಬವುಮ, ಕ್ಲಾಸೆನ್‌, ಮಿಲ್ಲರ್‌ ಅವರನ್ನೊಳಗೊಂಡ ಹರಿಣಗಳ ಬ್ಯಾಟಿಂಗ್‌ ಲೈನ್‌ಅಪ್‌ ವೈವಿಧ್ಯಮಯ. ಬೌಲಿಂಗ್‌ ವಿಭಾಗವೂ ಕ್ಲಾಸ್‌ ಮಟ್ಟದ್ದು. ರಬಾಡ, ಎನ್‌ಗಿಡಿ, ಕ್ಲಾಸೆನ್‌, ಮಹಾರಾಜ್‌, ಶಮ್ಸಿ ಇಲ್ಲಿನ ಅಪಾಯಕಾರಿ ಅಸ್ತ್ರಗಳು.

ಬೆನ್‌ ಸ್ಟೋಕ್ಸ್‌ ನಿರೀಕ್ಷೆಯಲ್ಲಿ…
ಸಾಮರ್ಥ್ಯದ ವಿಷಯದಲ್ಲಿ ಎರಡೂ ಸಮಬಲದ ತಂಡಗಳು. ಆದರೆ ಬೆನ್‌ ಸ್ಟೋಕ್ಸ್‌ ಗೈರು ಇಂಗ್ಲೆಂಡನ್ನು ಬಲವಾಗಿ ಕಾಡುತ್ತಿದೆ. ಈ ಆಲ್‌ರೌಂಡರ್‌ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಆಗ ಇಂಗ್ಲೆಂಡ್‌ ಹೆಚ್ಚು ಶಕ್ತಿಶಾಲಿಯಾಗಿ ಗೋಚರಿಸುವುದರಲ್ಲಿ ಅನುಮಾನವಿಲ್ಲ.

ಆದರೆ ಬಟ್ಲರ್‌, ಲಿವಿಂಗ್‌ಸ್ಟೋನ್‌ ಅವರ ಫಾರ್ಮ್ ಕೈಕೊಟ್ಟಿದೆ. ಬಟ್ಲರ್‌ 3 ಪಂದ್ಯಗಳಿಂದ ಗಳಿಸಿದ್ದು 43, 20 ಮತ್ತು 9 ರನ್‌ ಮಾತ್ರ. ಹಾಗೆಯೇ ಲಿವಿಂಗ್‌ಸ್ಟೋನ್‌ ಗಳಿಕೆ ಕೇವಲ 20, 0, 10 ರನ್‌. ಸ್ಟೋಕ್ಸ್‌ ಬರುವುದಾದರೆ ಲಿವಿಂಗ್‌ಸ್ಟೋನ್‌ ಜಾಗ ಬಿಡಬೇಕಾದೀತು. ಸದ್ಯ ಇಂಗ್ಲೆಂಡ್‌ ಬ್ಯಾಟಿಂಗ್‌ ಸರದಿಯಲ್ಲಿ ಸ್ಥಿರವಾದ ಪ್ರದರ್ಶನ ನೀಡುತ್ತಿರುವುದು ರೂಟ್‌ ಮತ್ತು ಮಲಾನ್‌ ಮಾತ್ರ.

ಇಂಗ್ಲೆಂಡ್‌ ಬೌಲಿಂಗ್‌ ಸರದಿ ಕೂಡ ದೌರ್ಬಲ್ಯವನ್ನು ತೆರೆದಿರಿಸಿದೆ. ರೀಸ್‌ ಟಾಪ್‌ಲೀ (5 ವಿಕೆಟ್‌), ಆದಿಲ್‌ ರಶೀದ್‌ (4 ವಿಕೆಟ್‌) ಹೊರತುಪಡಿಸಿದರೆ ಉಳಿದವರ್ಯಾರೂ ಪರಿಣಾಮ ಬೀರಿಲ್ಲ.

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

1-sadsdas

World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು

1-qweqwwqe

ICC ವಿಶ್ವಕಪ್‌ ಸಾಧಕರ ತಂಡಕ್ಕೆ ರೋಹಿತ್‌ ನಾಯಕ; ತಂಡ ಹೀಗಿದೆ

1-ww-eqeqwe

World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್‌ ಪ್ಯಾಟ್‌ ಕಮಿನ್ಸ್‌  ಫುಲ್‌ ಖುಷ್‌

1-saddasd

Head line ನಲ್ಲಿ ಮಿಂಚಿದ ಟ್ರ್ಯಾವಿಸ್‌ ಹೆಡ್‌

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.