![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 22, 2023, 8:59 PM IST
ಧರ್ಮಶಾಲಾ: ಭಾನುವಾರ ಇಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಏಕದಿನದಲ್ಲಿ 2000 ರನ್ ಗಳಿಸಿದ ಅತ್ಯಂತ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಗಿಲ್ 38 ಇನ್ನಿಂಗ್ಸ್ಗಳಲ್ಲಿ ಮೈಲಿಗಲ್ಲನ್ನು ತಲುಪಿದರು. 40 ಇನ್ನಿಂಗ್ಸ್ಗಳಲ್ಲಿ 2000 ಏಕದಿನ ರನ್ಗಳನ್ನು ಗಳಿಸಸಿದ್ದ ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ ಅವರ ದಾಖಲೆಯನ್ನು ಮುರಿದರು.
24ರ ಹರೆಯದ ಗಿಲ್ ಬಾಂಗ್ಲಾದೇಶದ ವಿರುದ್ಧ 53 ರನ್ ಗಳಿಸಿ ಔಟಾಗಿದ್ದರು. ಆಗ 14 ರನ್ಗಳ ಕೊರತೆಯಿತ್ತು. ರನ್ ಚೇಸ್ ವೇಳೆ ಏಳನೇ ಓವರ್ನಲ್ಲಿ ಬೌಲ್ಟ್ ಅವರು ಎಸೆದ ಚೆಂಡನ್ನು ಬೌಂಡರಿಗೆ ಹೊಡೆದು ಈ ಸಾಧನೆ ಮಾಡಿದರು. 31 ಎಸೆತಗಳಲ್ಲಿ 26 ರನ್ ಗಳಿಸಿದ್ದ ಗಿಲ್ 14ನೇ ಓವರ್ನಲ್ಲಿ ಲಾಕಿ ಫರ್ಗುಸನ್ ಅವರು ಎಸೆದ ಚೆಂಡನ್ನು ಡೇರಿಲ್ ಮಿಚೆಲ್ ಕೈಗಿತ್ತು ನಿರ್ಗಮಿಸಿದರು.
2011 ರ ಜನವರಿ 21 ರಂದು ಪೋರ್ಟ್ ಎಲಿಜಬೆತ್ನ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಮ್ಲಾ ಈ ದಾಖಲೆಯನ್ನು ನಿರ್ಮಿಸಿದ್ದರು.
ಗಿಲ್ ಅವರು ಡೆಂಗ್ಯೂನಿಂದಾಗಿ ಆಸ್ಟ್ರೇಲಿಯ ಮತ್ತು ಅಫ್ಘಾನಿಸ್ಥಾನ ವಿರುದ್ಧದ ಮೊದಲ ಎರಡು ವಿಶ್ವಕಪ್ ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ಪಾಕಿಸ್ಥಾನದ ವಿರುದ್ಧ ಆಡಲಿಳಿದು 16 ರನ್ ಗಳಿಸಿದ್ದರು.
274ರನ್ ಗಳ ಗುರಿ ಬೆನ್ನತ್ತಿರುವ ಭಾರತ 33 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದೆ. ರೋಹಿತ್ ಶರ್ಮ 46, ಶ್ರೇಯಸ್ ಅಯ್ಯರ್ 33, ರಾಹುಲ್ 27 ರನ್ ಗಳಿಸಿ ಔಟಾಗಿದ್ದಾರೆ. ಕೊಹ್ಲಿ 50 ರನ್ ಗಳಿಸಿ ತಾಳ್ಮೆಯ ಆಟವಾಡುತ್ತಿದ್ದಾರೆ.
ಕಿರಿಯ ವಯಸ್ಸಿನಲ್ಲಿ ODI 2,000 ರನ್ಗಳಿಸಿದ ಭಾರತದ ಆಟಗಾರರು (ವರ್ಷ)
ಸಚಿನ್ ತೆಂಡೂಲ್ಕರ್(20)
ಯುವರಾಜ್ ಸಿಂಗ್(22)
ವಿರಾಟ್ ಕೊಹ್ಲಿ(22)
ಸುರೇಶ್ ರೈನಾ(23 ವರ್ಷ)
ಶುಭಮನ್ ಗಿಲ್(24)
ವೇಗವಾಗಿ ODI 2000 ರನ್ಗಳಿಸಿದವರು
ಶುಭಮನ್ ಗಿಲ್(38)
ಹಾಶಿಮ್ ಆಮ್ಲ(40)
ಜಹೀರ್ ಅಬ್ಬಾಸ್(45)
ಕೆವಿನ್ ಪೀಟರ್ಸನ್(45)
ಬಾಬರ್ ಆಜಮ್(45 )
ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್(45)
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.