World Cup;ರವೀಂದ್ರ ಚೊಚ್ಚಲ ಶತಕ:ಇಂಗ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡ್ಗೆ 9ವಿಕೆಟ್ ಗಳ ಜಯ
ಕಾನ್ವೇ ಅಮೋಘ ಆಟ; ಜೋಡಿ ಶತಕದ ಮೋಡಿ: ಭಾರೀ ಗೆಲುವಿನೊಂದಿಗೆ ಶುಭಾರಂಭಗೈದ ಕೀವಿಸ್
Team Udayavani, Oct 5, 2023, 8:53 PM IST
ಅಹ್ಮದಾಬಾದ್: ಕಳೆದೆರಡು ಫೈನಲ್ಗಳಲ್ಲಿ ಸೋತು ಹೊಸ ಭರವಸೆಯೊಂದಿಗೆ 13ನೇ ವಿಶ್ವಕಪ್ ವಿಶ್ವಕಪ್ ಅಭಿಯಾನ ಆರಂಭಿಸಿರುವ ನ್ಯೂಜಿಲ್ಯಾಂಡ್ ತಂಡ ಗುರುವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 9 ವಿಕೆಟ್ ಗಳ ಭಾರೀ ಗೆಲುವಿನೊಂದಿಗೆ ಶುಭಾರಂಭಗೈದಿದೆ.
ನ್ಯೂಜಿಲ್ಯಾಂಡ್ ತಂಡದ ಭರವಸೆಯ ಕಿರಣವಾಗಿರುವ ಕರ್ನಾಟಕ ಮೂಲದ 23 ರ ಹರೆಯದ ರಚಿನ್ ರವೀಂದ್ರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಅಬ್ಬರಿಸಿದ ರವೀಂದ್ರ 82 ಎಸೆತಗಳಿಂದ ಶತಕ ಪೂರ್ತಿಗೊಳಿಸಿದರು. ಡೆವೊನ್ ಕಾನ್ವೇ ಅವರೊಂದಿಗೆ 273 ರನ್ ಜೊತೆಯಾಟವಾಡಿದರು. ಅತ್ಯಾಕರ್ಷಕ ಇನ್ನಿಂಗ್ಸ್ ಕಟ್ಟಿದ ಕಾನ್ವೇ 152 ರನ್ ಸಿಡಿಸಿ ಅಜೇಯರಾಗಿ ಉಳಿದರು.(121 ಎಸೆತ 19 ಬೌಂಡರಿ ಮತ್ತು 3 ಸಿಕ್ಸರ್ ಅವರ ಗೆಲುವಿನ ಆಟದಲ್ಲಿ ಒಳಗೊಂಡಿತ್ತು.
ರವೀಂದ್ರ 96 ಎಸೆತಗಳಲ್ಲಿ 123 ರನ್ ಗಳಿಸಿ ಸ್ಮರಣೀಯ ಅಜೇಯ ಮೊದಲ ಶತಕ ದಾಖಲಿಸಿದರು. 11 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಸಿಡಿಸಿದರು.
ನ್ಯೂಜಿಲ್ಯಾಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಂಗ್ಲರು 50 ಓವರ್ ಗಳನ್ನು ಆಡಿ 9 ವಿಕೆಟ್ ನಷ್ಟಕ್ಕೆ 282 ರನ್ ಕಲೆ ಹಾಕಿದರು. ಜೋ ರೂಟ್ 77, ಜೋಸ್ ಬಟ್ಲರ್ 43 ಗರಿಷ್ಟ ಸ್ಕೋರ್ ಆಗಿತ್ತು. ಮ್ಯಾಟ್ ಹೆನ್ರಿ 3/48, ಗ್ಲೆನ್ ಫಿಲಿಪ್ಸ್ 2/17 ಬೌಲಿಂಗ್ ನಲ್ಲಿ ಗಮನ ಸೆಳೆದರು.
ಗುರಿ ಬೆನ್ನಟ್ಟಿದ ಕೀವಿಸ್ ಆರಂಭಿಕ ಆಘಾತ ಅನುಭವಿಸಿತು. ತಂಡ 10 ರನ್ ಗಳಿಸಿದ್ದ ವೇಳೆ ವಿಲ್ ಯಂಗ್ ಶೂನ್ಯಕ್ಕೆ ನಿರ್ಗಮಿಸಿದರು. ಆ ಬಳಿಕ ನೆಲಕಚ್ಚಿ ಆಡಿದ ಕಾನ್ವೇ- ರವೀಂದ್ರ ಜೋಡಿ ಇಂಗ್ಲೆಂಡ್ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದರು. 36.2 ಓವರ್ ಗಳಲ್ಲಿ 283 ಗಳಿಸಿ ಜಯಭೇರಿ ಬಾರಿಸಿ , ಭಾರೀ ಮೊತ್ತ ಲೆಕ್ಕಕ್ಕೆ ಇಲ್ಲದಂತೆ ಅಬ್ಬರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು
ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್ಆರ್ಎಚ್ ಆಟಗಾರನಿಗೆ ನಾಯಕತ್ವ
B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.