Under pressure ಆಡುವುದು ಹೇಗೆ ಎಂಬುದನ್ನು ವಿಶ್ವಕ್ಕೆ ಸಾರುವ ಸಮಯ: ಹೆನ್ರಿಕ್‌ ಕ್ಲಾಸೆನ್‌


Team Udayavani, Oct 22, 2023, 11:44 PM IST

1-asdsad

ಮುಂಬಯಿ: ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತ ಬಂದರೂ ಇನ್ನೂ ಸೆಮಿಫೈನಲ್‌ ಗಡಿಯನ್ನು ದಾಟದ ನತದೃಷ್ಟ ತಂಡವೆಂದರೆ ಅದು ದಕ್ಷಿಣ ಆಫ್ರಿಕಾ. ಹರಿಣಗಳ “ಚೋಕರ್’ ಟ್ಯಾಗ್‌ ಈ ಸಲವಾದರೂ ಬಿದ್ದು ಹೋದೀತೇ ಎಂಬುದು ಬಹುತೇಕ ಮಂದಿಯ ನಿರೀಕ್ಷೆ. ಕಾರಣ, ಅದು ಈ ಕೂಟದಲ್ಲಿ ನೀಡುತ್ತಿರುವ ಪ್ರಚಂಡ ಪ್ರದರ್ಶನ.

ಮೊದಲು ಬ್ಯಾಟಿಂಗ್‌ ನಡೆಸಿದ ಕಳೆದ ಸತತ 6 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮುನ್ನೂರರ ಗಡಿ ದಾಟಿದ್ದು ಸಾಮಾನ್ಯ ಸಂಗತಿ ಅಲ್ಲ. ಶನಿವಾರ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ 399 ರನ್‌ ಪೇರಿಸಿದ್ದು ತಾಜಾ ಉದಾಹರಣೆ. ಇದಕ್ಕೆ ಕಾರಣವಾದದ್ದು ಹೆನ್ರಿಕ್‌ ಕ್ಲಾಸೆನ್‌ ಅವರ ಪ್ರಚಂಡ ಶತಕ. ಅವರು 67 ಎಸೆತಗಳಲ್ಲಿ 109 ರನ್‌ ಬಾರಿಸಿ ಅಬ್ಬರಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕ್ಲಾಸೆನ್‌, “ನಾವು ಒತ್ತಡವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ವಿಶ್ವಕ್ಕೆ ಸಾರುವ ಸಮಯವಿದು’ ಎಂದಿದ್ದಾರೆ.

ನಮ್ಮ ಆಟ ಅಮೋಘ ಮಟ್ಟದಲ್ಲಿದೆ
“ನಿಜ, ವಿಶ್ವಕಪ್‌ ಮಟ್ಟಿಗೆ ನಾವು ನತದೃಷ್ಟರು. ಚೋಕರ್ ಎಂಬ ಟ್ಯಾಗ್‌ಲೈನ್‌ ನಮಗೆ ಅಂಟಿಕೊಂಡಿದೆ. ಮಹತ್ವದ ಪಂದ್ಯಗಳಲ್ಲಿ ನಾವು ಎಡವುತ್ತ ಬಂದಿದ್ದೇವೆ. ಆದರೆ ವಿಶ್ವಕಪ್‌ ಚರಿತ್ರೆಯನ್ನು ಗಮನಿಸುವಾಗ ನಾವು ಅದೆಷ್ಟೋ ಉತ್ತಮ ಪ್ರದರ್ಶನ ನೀಡಿದ ದೃಷ್ಟಾಂತಗಳಿವೆ. ಈ ಬಾರಿ ನಮ್ಮ ಆಟ ಅಮೋಘ ಮಟ್ಟದಲ್ಲಿದೆ. ಇದೇನೂ ಅಚ್ಚರಿಯಲ್ಲ. ಕಳೆದ 3 ವರ್ಷಗಳಿಂದ ನಾವು ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬಂದಿದ್ದೇವೆ. ಹಂತ ಹಂತವಾಗಿ ಪ್ರಬುದ್ಧರಾಗುತ್ತಿದ್ದೇವೆ. ಒತ್ತಡದಲ್ಲೂ ದಕ್ಷಿಣ ಆಫ್ರಿಕಾ ಅತ್ಯುತ್ತಮ ಮಟ್ಟದ ಆಟವಾಡುತ್ತಿದೆ ಎಂಬುದನ್ನು ಕ್ರಿಕೆಟ್‌ ಜಗತ್ತಿಗೆ ಸಾರುವ ಸಮಯವಿದು’ ಎಂಬುದಾಗಿ ವಿಕೆಟ್‌ ಕೀಪರ್‌-ಬ್ಯಾಟರ್‌ ಕ್ಲಾಸೆನ್‌ ಹೇಳಿದರು.

“ಇಲ್ಲಿನ ವಾತಾವರಣಕ್ಕೆ ಹೋಲಿಸಿ ದರೆ ಇದು ನನ್ನ ಅತ್ಯುತ್ತಮ ಶತಕಗಳ ಲ್ಲೊಂದು. ಸಿಕ್ಕಾಪಟ್ಟೆ ಬಿಸಿ ಗಾಳಿ ಬೀಸುತ್ತಿತ್ತು. ದೈಹಿಕವಾಗಿ ಇದನ್ನು ಎದುರಿಸಿ ನಿಲ್ಲುವುದು ಕಷ್ಟ. ಆದರೆ ನಾನು ಮಾನಸಿಕವಾಗಿ ಸಜ್ಜುಗೊಂಡೆ. ಆರಂಭಕಾರ ರೀಝ ಹೆಂಡ್ರಿಕ್ಸ್‌ ಮತ್ತು ನನ್ನೊಡನೆ ಇನ್ನಿಂಗ್ಸ್‌ ಬೆಳೆಸಿದ ಮಾರ್ಕೊ ಜಾನ್ಸೆನ್‌ ಅವರ ಬ್ಯಾಟಿಂಗ್‌ ಅಮೋಘ ಮಟ್ಟದಲ್ಲಿತ್ತು. ಟಾಸ್‌ಗೆ ಕೇವಲ 5 ನಿಮಿಷ ಇರುವಾಗ ರೀಝ ತಂಡಕ್ಕೆ ಸೇರ್ಪಡೆಗೊಂಡಿದ್ದರು’ ಎಂದರು.

“ಓಪನರ್‌’ ಜಾನ್ಸೆನ್‌!
ಹೆನ್ರಿಕ್‌ ಕ್ಲಾಸೆನ್‌ಗೆ ಅಮೋಘ ಬೆಂಬಲ ನೀಡಿದ ಮಾರ್ಕೊ ಜಾನ್ಸೆನ್‌ ಮೂಲತಃ ಆರಂಭಿಕ ಆಟಗಾರ. ಅವರ ಈ ಅನುಭವ ಇಲ್ಲಿ ನೆರವಿಗೆ ಬಂತು. ಅವರು ಏಕದಿನದಲ್ಲಿ ಬಾರಿಸಿದ ಮೊದಲ ಅರ್ಧ ಶತಕ ಇದಾಗಿದೆ. ಬಳಿಕ ಈ ಎಡಗೈ ಸೀಮರ್‌ ಡೇವಿಡ್‌ ಮಲಾನ್‌ ಮತ್ತು ಜೋ ರೂಟ್‌ ಅವರನ್ನು ಪೆವಿಲಿಯನ್‌ಗೆ ರವಾನಿಸಿ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
“ನಾನು ಯಾವತ್ತೂ ಬ್ಯಾಟಿಂಗ್‌ ಇಷ್ಟಪಡುತ್ತೇನೆ. ಮೂಲತಃ ನಾನೋರ್ವ ಓಪನರ್‌ ಆಗಿರುವುದೇ ಇದಕ್ಕೆ ಕಾರಣ. ಆದರೆ ಇಲ್ಲಿ ನಾವು 400ರ ಗಡಿ ಸಮೀಪಿಸಲಿದ್ದೇವೆ ಎಂದು ಭಾವಿಸಲೇ ಇರಲಿಲ್ಲ. 320ರಿಂದ 350 ರನ್‌ ನಮ್ಮ ನಿರೀಕ್ಷೆ ಆಗಿತ್ತು’ ಎಂದು ಜಾನ್ಸೆನ್‌ ಹೇಳಿದರು.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.